ಮಂಗಳೂರಿನಲ್ಲೂ ಪೊಲೀಸರ ಕಾರ್ಯಾಚರಣೆ.. ಪಿಎಫ್ಐ ಜಿಲ್ಲಾಧ್ಯಕ್ಷ ಸೇರಿ 14ಕ್ಕೂ ಹೆಚ್ಚು ಮುಖಂಡರು ವಶಕ್ಕೆ

author img

By

Published : Sep 27, 2022, 9:27 AM IST

State police raid on PFI workers in Mangaluru  police raid on PFI  Karnataka police raid on PFI  Police raid on PFI in Karnataka  ಮಂಗಳೂರಿನಲ್ಲಿ ಎನ್​ಐಎ ಬಳಿಕ ನಗರ ಪೊಲೀಸರ ದಾಳಿ  ಪಿಎಫ್​ಐ ಮುಖಂಡರನ್ನು ಖಾಕಿ ಪಡೆ ವಶ  ನಗರ ಪೊಲೀಸರು ಶೋಧ ಕಾರ್ಯಾಚರಣೆ  ಪೊಲೀಸರು ಪಿಎಫ್​ಐ ಕಾರ್ಯಾಕರ್ತರ ಮನೆಗಳ ಮೇಲೆ ದಾಳಿ  ರಾಜ್ಯದಲ್ಲಿ ಪಿಎಫ್​ಐ ಮುಖಂಡರ ಮೇಲೆ ರಾಜ್ಯ ಪೊಲೀಸರು ದಾಳಿ

ಮಂಗಳೂರಿನಲ್ಲಿ ಎನ್​ಐಎ ಬಳಿಕ ನಗರ ಪೊಲೀಸರ ದಾಳಿ ನಡೆಸಿದ್ದು, ಜಿಲ್ಲಾಧ್ಯಕ್ಷ ಸೇರಿ ಹಲವಾರು ಪಿಎಫ್​ಐ ಮುಖಂಡರನ್ನು ಖಾಕಿ ಪಡೆ ವಶಕ್ಕೆ ಪಡೆದಿದೆ.

ಮಂಗಳೂರು: ಕಳೆದ ವಾರ ಪಿಎಫ್ಐ ಮತ್ತು ಎಸ್​ಡಿಪಿಐ ಮುಖಂಡರ ಮನೆ ಹಾಗು ಕಚೇರಿ ಮೇಲೆ ಎನ್​ಐಎ ದಾಳಿ ನಡೆಸಿದ ಬೆನ್ನಲ್ಲೇ ಇಂದು ನಗರ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಪಿಎಫ್​ಐ ಕಾರ್ಯಾಕರ್ತರ ಮನೆಗಳ ಮೇಲೆ ದಾಳಿ ಮಾಡಿ ಜಿಲ್ಲಾಧ್ಯಕ್ಷ ಸೇರಿ 14ಕ್ಕೂ ಹೆಚ್ಚು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ ಪಿಎಫ್​ಐ ಮುಖಂಡರ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸುತ್ತಿರುವ ಭಾಗವಾಗಿ ಮಂಗಳೂರಿನಲ್ಲಿಯೂ ದಾಳಿ ನಡೆದಿದೆ. ರಾತ್ರೋರಾತ್ರಿ ಪೊಲೀಸರ ಭಾರಿ ಕಾರ್ಯಾಚರಣೆ ನಡೆಸಿದ್ದು, 14ಕ್ಕೂ ಅಧಿಕ ಪಿಎಫ್​ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪಿಎಫ್​ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿದಂತೆ ಹಲವು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ದಾಳಿ ನಡೆಸಲಾಗಿತ್ತು. ವಶಕ್ಕೆ ಪಡೆದುಕೊಂಡ ಪಿಎಫ್​ಐ ಮುಖಂಡರನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.

ಪೊಲೀಸ್​ ಠಾಣಾ ವ್ಯಾಪ್ತಿಯ ತಾಲೂಕು ದಂಡಾಧಿಕಾರಿಗಳ ಮುಂದೆ ವಶಕ್ಕೆ ಪಡೆದ ಪಿಎಫ್​ಐ ಮುಂಖಡರನ್ನು ಹಾಜರುಪಡಿಸಲಾಗಿದೆ. ಇವರನ್ನು ಮಂಗಳೂರಿನ ಕೊಡಿಯಾಲ್ ಬೈಲ್​ನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ತರಲಾಗಿದೆ.

ಓದಿ: ಕೋಲಾರದಲ್ಲೂ ಪಿಎಫ್​ಐ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ; 6 ಜನ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.