ಮೈಸೂರು:ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನಗರದ ಅಗ್ರಹಾರದಲ್ಲಿರುವ ಟಾಂಗಾ ಗಾಡಿ ನಿಲ್ದಾಣದಲ್ಲಿ ಕುದುರೆಗಳಿಗೆ ಮೇವು ವಿತರಿಸಿದರು.
ಟಾಂಗಾ ಕುದುರೆಗಳಿಗೆ ಮೇವು ನೀಡಿದ ಮಾಜಿ ಶಾಸಕ ಸೋಮಶೇಖರ್
ಲಾಕ್ಡೌನ್ ಹಿನ್ನೆಲೆ ಹೊತ್ತಿನ ಊಟಕ್ಕೂ ಪರದಾಡುತ್ತಿವರ ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ವಲಸಿಗರಿಗೆ ಈಗಾಗಲೇ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಹಾರ ಪದಾರ್ಥಗಳ ಕಿಟ್ಗಳನ್ನು ಒದಗಿಸುತ್ತಾ ಬಂದಿದ್ದು, ಇಂದು ಟಾಂಗಾ ಕುದುರೆಗಳಿಗೆ ಮೇವು ವಿತರಿಸಿದ್ದಾರೆ.
![ಟಾಂಗಾ ಕುದುರೆಗಳಿಗೆ ಮೇವು ನೀಡಿದ ಮಾಜಿ ಶಾಸಕ ಸೋಮಶೇಖರ್ Former MLA Somashekhar](https://etvbharatimages.akamaized.net/etvbharat/prod-images/768-512-7033308-684-7033308-1588423846402.jpg)
ಟಾಂಗಾ ಕುದುರೆಗಳಿಗೆ ಮೇವು ನೀಡಿದ ಮಾಜಿ ಶಾಸಕ ಸೋಮಶೇಖರ್
ಮೈಸೂರು ಟಾಂಗಾಗಳ ನಗರಿಯಂದೇ ಪ್ರಸಿದ್ಧಿ ಪಡೆದಿದ್ದು, ಟಾಂಗಾ ನಂಬಿ ಬದುಕುವ ಜನರು ಸಹ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಮಾಜಿ ಶಾಸಕ ಸೋಮಶೇಖರ್, ಟಾಂಗಾ ಗಾಡಿ ನಿಲ್ದಾಣಕ್ಕೆ ಬಂದು ಕುದುರೆಗಳಿಗೆ ಮೇವು ಹಾಗೂ ಅವುಗಳನ್ನು ನೋಡಿಕೊಳ್ಳುವ ಟಾಂಗಾವಾಲಗಳಿಗೆ ದಿನಸಿ ಕಿಟ್ ವಿತರಿಸಿದರು.