ಕರ್ನಾಟಕ

karnataka

4 ವರ್ಷಗಳ ಬಳಿಕ ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿದ ಗದಗ ಜಿಲ್ಲಾ ಸತ್ರ ನ್ಯಾಯಾಲಯ

By

Published : Jul 28, 2022, 2:11 PM IST

ನಾಲ್ಕು ವರ್ಷದ ಹಿಂದೆ ದನ ಮೇಯಿಸಲು ಹೋಗಿದ್ದ ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಹಾಯಾಗಿ ಓಡಾಡಿಕೊಂಡಿದ್ದ ಆರೋಪಿಗೆ ಇದೀಗ ಗದಗ ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Gadag District Sessions Court
ಗದಗ ಜಿಲ್ಲಾ ಸತ್ರ ನ್ಯಾಯಾಲಯ

ಗದಗ:ನಾಲ್ಕು ವರ್ಷಗಳಿಂದ ಹಾಯಾಗಿ ಓಡಾಡಿಕೊಂಡು ದರ್ಪದಿಂದ ಮೆರೆಯುತ್ತಿದ್ದ ಅತ್ಯಾಚಾರಿಯೊಬ್ಬನಿಗೆ ಗದಗ ಅಪರ ಮತ್ತು ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುರಕೋಡ ಗ್ರಾಮದ ದಲಿತ ಮಹಿಳೆಯೊಬ್ಬಳ ಮೇಲೆ ಅದೇ ಗ್ರಾಮದ ಮೇಲ್ಜಾತಿಯ ವ್ಯಕ್ತಿ ಶಿವಪುತ್ರಪ್ಪ ಗೊಜನೂರು ಎಂಬಾತ ಅತ್ಯಾಚಾರ ಎಸಗಿದ್ದ.

ಫೆಬ್ರವರಿ 5, 2017ರಂದು ಹಸು ಮೇಯಿಸಲು ಹೋಗಿದ್ದ ಮಹಿಳೆಯನ್ನು ಕಂಡು ಅದೇ ಸ್ಥಳದಲ್ಲಿ ಟ್ರ್ಯಾಕ್ಟರ್​ ಚಲಾಯಿಸುತ್ತಿದ್ದ ಶಿವಪುತ್ರಪ್ಪ ದರ್ಪದಿಂದ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಿದ್ದ. ಇದಕ್ಕೆ ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಆದರೆ ಏಕಾಂಗಿ ಮಹಿಳೆಯನ್ನು ಬಿಡದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು.


ಈ ಸಂಬಂಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ಸಲ್ಲಿಸಿದ್ದಳು. ಸುದೀರ್ಘ ವಿಚಾರಣೆ ಆಲಿಸಿದ ಕೋರ್ಟ್​ ಕೊನೆಗೂ ಅಪರಾಧಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 70 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ:ಮಗಳ ಮೇಲೆಯೇ ಅತ್ಯಾಚಾರ ಆರೋಪ: ನನ್ನ ಗೌರವ ಹಿಂದಿರುಗಿಸುವವರ‍್ಯಾರು ಎಂದು ಪ್ರಶ್ನಿಸಿದ 'ಮುಗ್ದ' ತಂದೆ?

ABOUT THE AUTHOR

...view details