ಕರ್ನಾಟಕ

karnataka

ರಾಮ ಮರ್ಯಾದಾ ಪುರುಷೋತ್ತಮ : ಎಸ್ ಆರ್ ಹಿರೇಮಠ ಹೊಗಳಿಕೆ

By ETV Bharat Karnataka Team

Published : Jan 16, 2024, 9:17 PM IST

Updated : Jan 16, 2024, 9:51 PM IST

ರಾಮ ನಮ್ಮ ದೇಶಕ್ಕೆ ಪ್ರತಿಷ್ಠಿತ, ಗೌರವಯುತ, ಐತಿಹಾಸಿಕ ವ್ಯಕ್ತಿ ಎಂದು ಎಸ್ ಆರ್ ಹಿರೇಮಠ ಅವರು ತಿಳಿಸಿದ್ದಾರೆ.

ಎಸ್ ಆರ್ ಹಿರೇಮಠ
ಎಸ್ ಆರ್ ಹಿರೇಮಠ

ಎಸ್ ಆರ್ ಹಿರೇಮಠ

ಧಾರವಾಡ: ರಾಮ ಮರ್ಯಾದಾ ಪುರುಷೋತ್ತಮ. ಜೀವನದಲ್ಲಿ ಉತ್ಕೃಷ್ಟ ಗುಣ ಹೊಂದಿದವರು ಶ್ರೀರಾಮ. ನಮ್ಮ ದೇಶಕ್ಕೆ ಪ್ರತಿಷ್ಠಿತ, ಗೌರವಯುತ, ಐತಿಹಾಸಿಕ ವ್ಯಕ್ತಿ. ಇಂತಹ ಮಂದಿರ ಉದ್ಘಾಟನೆ ಬಹಳ ಒಳ್ಳೆಯದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್ ಹಿರೇಮಠ ಅವರು ಹೊಗಳಿದ್ದಾರೆ.

ಧಾರವಾಡದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಬದ್ಧ ಆಡಳಿತ ಮಾಡುವ ಸರ್ಕಾರ ಮತ್ತು ಧರ್ಮ ಮಿಶ್ರಿತ ಆಗಬಾರದು. ಪ್ರಜಾಪ್ರಭುತ್ವದಲ್ಲಿ ಇದನ್ನೇ ಹೇಳಲಾಗಿದೆ. ಪ್ರಧಾನಿ ಹುದ್ದೆ ಸಂವಿಧಾನದ ಶಕ್ತಿಯುತ ಸ್ಥಾನ. ಅವರು ಸರ್ಕಾರ ಮತ್ತು ಧರ್ಮದಲ್ಲಿ ಬಹಳ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಸೋಮೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಮಾಡಿದ್ದರು. ಆಗ ಪ್ರಧಾನಿಯಾದವರು ಅಲ್ಲಿ ಹೋಗಿರಲಿಲ್ಲ. ಧರ್ಮದ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದು ನಮ್ಮ ಮನೆ, ಹೃದಯ ಮತ್ತು ನೈತಿಕ ನೆಲೆಗಟ್ಟಿನ ಆಧಾರಸ್ಥಂಭದಲ್ಲಿರಬೇಕು. ಆದರೆ, ಸಂವಿಧಾನಿತ ಸ್ಥಾನದಲ್ಲಿ ಧರ್ಮ ಇರಬಾರದು. ಅಯೋಧ್ಯೆಗಾಗಿ ಟ್ರಸ್ಟ್ ಮಾಡಿದ್ದಾರೆ. ಆ ಟ್ರಸ್ಟ್​ಗೆ ಸಮಗ್ರವಾಗಿ ಎಲ್ಲ ಬಿಡಬೇಕು. ನಾವು ಹಿಂದೂ ಧರ್ಮ ಎತ್ತಿ ಹಿಡಿಯುವರು ಅಂತಾ ಇವರು ಹೇಳುತ್ತಾರೆ. ಆದರೆ ಇವರು ಧರ್ಮ ಎತ್ತಿ ಹಿಡಿಯುವ ರೀತಿ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ದೃಷ್ಟಿಯಿಂದ ಧರ್ಮವನ್ನು ರಾಜಕೀಯವಾಗಿ ದುರ್ಬಳಕೆ ಮಾಡಬಾರದು. ಮಂದಿರ ಸಂಪೂರ್ಣವಾಗಿ ಮುಗಿದಿಲ್ಲ. ಈಗ ಉದ್ಘಾಟನೆ ಮಾಡುವ ಅವಸರ ಏನಿದೆ?. ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ. ಅದಕ್ಕಾಗಿ ಹೀಗೆ ಮಾಡಿದ್ದಾರೆ.‌ ವಿರೋಧ ಪಕ್ಷ ಕಾಂಗ್ರೆಸ್ ಸಹ ಸರಿಯಾಗಿಲ್ಲ. ಕಾಂಗ್ರೆಸ್ ಮಾಡಬಾರದ್ದೆಲ್ಲ ಮಾಡಿದ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪ್ರಧಾನಿ 11 ದಿನ ಉಪವಾಸ ಮಾಡುತ್ತಿದ್ದಾರೆ. ಅವರಿಗೆ ಅಂತರಾಳವಿದ್ದರೆ ಸುಳ್ಳು ಹೇಳಬಾರದು. ಅನ್ಯರಿಗೆ ಅಸಹ್ಯ ಪಡಬಾರದು. ಆದರೆ ವಿರೋಧಿಗಳನ್ನು ಲೋಕಸಭೆಯಲ್ಲಿ ಏನು ಮಾಡಿದರು ಗೊತ್ತಲ್ವಾ? ಅವರು ಖಾವಿ ಬಟ್ಟೆ ಹಾಕಿಕೊಳ್ಳಲಿ. ಆ ಮೂಲಕ ಸ್ವರ್ಗ ಕಾಣಲಿ. ಆದರೆ ರಾಮನ ಹೆಸರಿನಲ್ಲಿ ಇದೆಲ್ಲ ಮಾಡುತ್ತಿದ್ದಾರೆ. ರಾಮನ ಭಕ್ತರಾಗಿದ್ದರೆ ರಾಮನಂತೆ ನಡೆಯಬೇಕು. ರಾಜಕೀಯವಾಗಿ ಧರ್ಮ ಬಳಸಬಾರದು ಎಂದರು.

ಸಂವಿಧಾನ ಬದ್ಧ ದೇಶದಲ್ಲಿ ಇಂತಹದ್ದು ಆಗಬಾರದು:ಯಾವುದೇ ಸಂವಿಧಾನಬದ್ಧ ದೇಶದಲ್ಲಿ ಇಂತಹದ್ದು ಆಗಬಾರದು. ಹೀಗೆ ಮಾಡಿದಲ್ಲಿ ಅಂತಹ ಪ್ರಧಾನಿಯನ್ನು ತೆಗೆಯಬೇಕು. ಅಧಿಕಾರ ದುರುಪಯೋಗ ಆಗಬಾರದು. ದೇಶದ ಹಳ್ಳಿಗಳಲ್ಲಿ ಮುಗ್ದ ಜನ ಇದ್ದಾರೆ. ಆ ಜನರಿಗೆ ಧರ್ಮದಲ್ಲಿ ನಂಬಿಕೆ ಇದೆ. ನನಗೂ ಧರ್ಮದಲ್ಲಿ ನಂಬಿಕೆ ಇದೆ. ಶರಣರ ತತ್ವದಲ್ಲಿ ಸಮಾನತೆ ಸಹೋದರತೆಯಿದೆ. ಇಂತಹ ಒಂದು ಶರಣ ಸಂಸ್ಕೃತಿಯಿಂದ ನಾನು ಬಂದವನು. ನನ್ನ ತಂದೆ ತಾಯಿ ಅಂತಹ ಧಾರ್ಮಿಕ ಸಂಸ್ಕಾರ ಕೊಟ್ಟಿದ್ದಾರೆ. ನರೇಂದ್ರ ಮೋದಿ ರಾಜಕೀಯದಿಂದ ರಾಮಮಂದಿರ ದೂರ ಇಡಬೇಕು. ಈ ದೇಶ ಉತ್ಕೃಷ್ಟ ದೇಶವಿದೆ. ಇದರ ಸಂವಿಧಾನ ವ್ಯವಸ್ಥೆಗೆ ಧಕ್ಕೆ ಆಗಬಾರದು. ನರೇಂದ್ರ ಮೋದಿ ಈಗ ಉಪವಾಸ ಮಾಡುತ್ತಿದ್ದಾರೆ. ಈಗಲಾದರೂ ದೇವರು ಅವರಿಗೆ ‌ಒಳ್ಳೆಯ ಬುದ್ಧಿ ಕೊಡಲಿ. ನೈತಿಕತೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಬಂದಿದೆ. ಹಿಂದಿಗಿಂತ 20 ಪಟ್ಟು ಹೆಚ್ಚಿನ ತುರ್ತು ಪರಿಸ್ಥಿತಿ ಈಗ ಇದೆ. ದೇಶದಲ್ಲಿ ಸಂವಿಧಾನ ಗಂಡಾಂತರದಲ್ಲಿದೆ. ದೇಶದಲ್ಲಿ ಅಘೋಷಿತ ತುರ್ತಪರಿಸ್ಥಿತಿ ಇದೆ. ಗಂಭೀರವಾಗಿದೆ. ಶತಮಾನಗಳಿಂದ ಧರ್ಮ ಧರ್ಮ, ಜಾತಿಗಳ ಮಧ್ಯೆ ಸಾಮರಸ್ಯವಿತ್ತು. ಅದಕ್ಕೆ ಸಮಗ್ರ ಧಕ್ಕೆ ತಂದಿದ್ದಾರೆ. ಮಣಿಪುರದಲ್ಲಿ ಅಷ್ಟೆಲ್ಲ ಆಯ್ತು. ಆದರೆ ಪ್ರಧಾನಿ ಹೋಗಲೇ ಇಲ್ಲ. ಅಲ್ಲಿ ಹತ್ಯೆಗಳು ಮುಂದುವರೆದಿದೆ. ಬಜರಂಗದಳದವರು ಗೋ ರಕ್ಷಣೆ ಹೆಸರಿನಲ್ಲಿ ಅನೇಕರನ್ನು ಕೊಂದರು. ನಮ್ಮ ಸಂವಿಧಾನ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂದು ದೂರಿದರು.

ಸ್ವತಂತ್ರ್ಯ ಭಾರತದ ಪರಿಕಲ್ಪನೆಗೆ ಧಕ್ಕೆ ಬಂದಿದೆ. ಇಂದಿರಾ ಗಾಂಧಿಯನ್ನು ಅಂದಿನ ಕಾಂಗ್ರೆಸ್ ಅಧ್ಯಕ್ಷ ಇಂಡಿಯಾಗೆ ಹೋಲಿಸಿದ್ದರು. ಇಂದಿರಾ ಅಂದರೆ ಇಂಡಿಯಾ ಎಂದಿದ್ದರು. ಯಾವುದೇ ವ್ಯಕ್ತಿ ದೇಶಕ್ಕಿಂತ ದೊಡ್ಡವರಲ್ಲ. ಅಂತಹ ವಾತಾವರಣ ಇವತ್ತು ಇದೆ. ತುರ್ತುಪರಿಸ್ಥಿತಿಯಿಂದ ಕಾಂಗ್ರೆಸ್ ಅಧಿಕಾರದಿಂದ ಕೆಳಗೆ ಕುಸಿದಿತ್ತು. ಅದೇ ರೀತಿ ಮೋದಿಗೂ ಆಗುತ್ತದೆ. ದೇಶದ ಜನ ಕಣ್ಣು ಮುಚ್ಚಿ ಕುಳಿತಿಲ್ಲ ಎಂದು ಹೇಳಿದರು.

ಇದನ್ನೂ ಓದಿ :ಬಾಲರಾಮ ಮೂಡಿ ಬಂದ ಕೃಷ್ಣ ಶಿಲೆ ಸಿಕ್ಕಿದ್ದು ಹೇಗೆ?: ಶಿಲೆಯ ವೈಶಿಷ್ಟ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Last Updated : Jan 16, 2024, 9:51 PM IST

ABOUT THE AUTHOR

...view details