ಕರ್ನಾಟಕ

karnataka

ಚಿಕ್ಕಮಗಳೂರು: ರೈಲ್ವೆ ಹಳಿಯಲ್ಲಿ ಶಾಲಾ ವಾಹನ ಚಾಲಕ ಮತ್ತು ವಿದ್ಯಾರ್ಥಿನಿಯ ಶವ ಪತ್ತೆ

By ETV Bharat Karnataka Team

Published : Jan 2, 2024, 9:24 PM IST

Updated : Jan 2, 2024, 10:57 PM IST

ಶಾಲಾ ವಾಹನ ಚಾಲಕ ಮತ್ತು ವಿದ್ಯಾರ್ಥಿನಿ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾದ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

Etv Bharat
Etv Bharat

ಚಿಕ್ಕಮಗಳೂರು:46 ವರ್ಷದಶಾಲಾ ವಾಹನದ ಚಾಲಕ ಮತ್ತು 8ನೇ ತರಗತಿ ವಿದ್ಯಾರ್ಥಿನಿ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ವಿದ್ಯಾರ್ಥಿನಿ ಮನೆಯವರಿಗೆ ತಿಳಿಸಿ ತೆರಳಿದ್ದಳು. ಆದರೆ ಬಳಿಕ ರೈಲ್ವೆ ಟ್ರ್ಯಾಕ್‌ ಬಳಿ ಶವ ಪತ್ತೆಯಾಗಿದೆ. ಜೊತೆಗೆ ಶಾಲಾ ವಾಹನದ ಚಾಲಕ ಶವ ಕೂಡ ಅಲ್ಲೇ ಪತ್ತೆಯಾಗಿದೆ.

ಈ ಮೊದಲು ವಿದ್ಯಾರ್ಥಿನಿಗೆ ಚಾಲಕ ಕಿರುಕುಳ ನೀಡಿದ್ದನಂತೆ. ಈ ಕುರಿತು ವಿದ್ಯಾರ್ಥಿನಿಯರ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆ ಬಳಿಕ ಚಾಲಕನಿಗೆ ವಾರ್ನಿಂಗ್ ಮಾಡಲಾಗಿತ್ತು. ಆದರೆ ಬಳಿಕ ಚಾಲಕ, ವಿದ್ಯಾರ್ಥಿನಿಯ ಜೊತೆ ಸ್ನೇಹ ಬೆಳೆಸಿದ್ದನಂತೆ. ಅಂತೆಯೇ ಹೊಸ ವರ್ಷದ ಆಚರಣೆಗೆಂದು ವಿದ್ಯಾರ್ಥಿನಿಯನ್ನು ಹೊರಗಡೆ ಕರೆದುಕೊಂಡು ಹೋಗಿದ್ದ ಎಂಬ ಆರೋಪ ಕೇಳಿಬಂದಿದೆ. ಶಾಲಾ ಬಸ್‌ ಡ್ರೈವರ್‌ ಬಗ್ಗೆ ದೂರು ನೀಡಿದರೂ ಶಾಲಾ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರೈಲ್ವೆ ಟ್ರ್ಯಾಕ್‌ ಬಳಿ ಬಿದ್ದಿದ್ದ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ‌ ಮಾಡಲಾಗಿದೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಬಿಇಒ ಕಚೇರಿಯಲ್ಲೇ ವ್ಯವಸ್ಥಾಪಕ ಅಧಿಕಾರಿ ಆತ್ಮಹತ್ಯೆ

Last Updated :Jan 2, 2024, 10:57 PM IST

ABOUT THE AUTHOR

...view details