ಕರ್ನಾಟಕ

karnataka

ಫೋನ್‌ನಲ್ಲಿ ಮಾತಾಡ್ತಾ ಎದುರಿನ ಬೈಕ್‌ಗೆ ಅಡ್ಡಿ.. ತಪ್ಪು ಮಾಡದ ಸವಾರನ ಕೈಮೇಲೆ ಹರಿದ ಲಾರಿ..

By

Published : Sep 17, 2021, 4:11 PM IST

accident

ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..

ಚಿಕ್ಕಮಗಳೂರು :ಫೋನ್‌ನಲ್ಲಿ ಮಾತಾಡಿಕೊಂಡು ಬಂದ ಬೈಕ್ ಸವಾರನೊಬ್ಬ ದೊಡ್ಡ ಎಡವಟ್ಟು ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬೈಕ್ ಸವಾರನ ಎಡಗೈ ಮೇಲೆ ಹತ್ತಿದ ಲಾರಿ

ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಫೋನ್​ನಲ್ಲಿ ಮಾತನಾಡುತ್ತ ಬಂದಿರುವ ಬೈಕ್ ಸವಾರ ಎದುರಿಗೆ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಆತ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಲಾರಿ ಆತನ ಕೈಮೇಲೆ ಹತ್ತಿದೆ.

ಪರಿಣಾಮ ಬೈಕ್ ಸವಾರ ಸುಂದರ್ ಎಂಬಾತನ ಎಡಗೈಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಓದಿ:ರಾಯಭಾಗ : 3 ವರ್ಷದ ಮಗಳ ಜೊತೆ ಬಾವಿಗೆ ಹಾರಿದ ತಾಯಿ

ABOUT THE AUTHOR

...view details