ಕರ್ನಾಟಕ

karnataka

ಚಾಮರಾಜನಗರ: ಅಪಘಾತದಲ್ಲಿ ಮೆದುಳು‌ ನಿಷ್ಕ್ರಿಯ, ವ್ಯಕ್ತಿಯ ಅಂಗಾಂಗ ದಾನ ಮಾಡಿದ ಕುಟುಂಬ

By

Published : Aug 4, 2022, 5:49 PM IST

a family donated brain dead mans organs in chamarajanagara
ಅಪಘಾತದಲ್ಲಿ ಮೆದುಳು‌ ನಿಷ್ಕ್ರಿಯ-ವ್ಯಕ್ತಿಯ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು ()

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದ್ದು ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಚಾಮರಾಜನಗರ: ಕಳೆದ ಜುಲೈ 29ರಂದು ಯಳಂದೂರು ಪಟ್ಟಣದಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಕೊಳ್ಳೇಗಾಲ ತಾಲೂಕಿನ ರಾಘವ ಎಂಬುವವರ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು. ಇದನ್ನರಿತ ಇವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಇದೀಗ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ:ದಾವಣಗೆರೆ ಅದ್ಧೂರಿ ಸಮಾರಂಭದ ಬಳಿಕ ವಿಶ್ರಾಂತಿ ಮೊರೆ ಹೋದ ಸಿದ್ದರಾಮಯ್ಯ, ಡಿಕೆಶಿ

ರಾಘವ ಅವರ ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟುಗಳು ಮತ್ತು ಕಾರ್ನಿಯಾ ಬೇರ್ಪಡಿಸಲಾಗಿದೆ. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ, ಜೆ.ಎಸ್.ಎಸ್ ಆಸ್ಪತ್ರೆ, ಬೆಂಗಳೂರಿನ ರಾಮಯ್ಯ ಆಸ್ಪತ್ರೆ ಹಾಗೂ ಜಯದೇವ ಅಸ್ಪತ್ರೆಗಳಲ್ಲಿ ಅಗತ್ಯವಿರುವ ಒಟ್ಟು ಐವರಿಗೆ ಈ ಅಂಗಾಂಗಳನ್ನು ಕಸಿ ಮಾಡಲಾಗಿದೆ.

ರಾಘವ ಅವರಿಗೆ ಪತ್ನಿ, ಎರಡೂವರೆ ವರ್ಷದ ಮಗುವಿದೆ ಎಂದು ತಿಳಿದುಬಂದಿದೆ. ಯಳಂದೂರು ಪೊಲೀಸ್‌ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details