ಕರ್ನಾಟಕ

karnataka

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗದ್ದುಗೆಗಾಗಿ ಜಿದ್ದಾಜಿದ್ದಿ

By

Published : Nov 20, 2021, 11:54 AM IST

ನಾಳೆ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಬೀದರ್ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

bidar
ಕನ್ನಡ ಸಾಹಿತ್ಯ ಪರಿಷತ್

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆ ಅಖಾಡ ರಂಗೇರಿದ್ದು, ಗಡಿ ಜಿಲ್ಲೆ ಬೀದರ್​ನಲ್ಲಿ ಜಿದ್ದಾ ಜಿದ್ದಿ ಪ್ರಾರಂಭವಾಗಿದೆ.

ಭಾನುವಾರ(ನಾಳೆ) ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯಲಿದ್ದು, ಚುನಾವಣಾ ಕಣದಲ್ಲಿ ನಿಕಟಪೂರ್ವ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಜೊತೆಗೆ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ರಾಜಕುಮಾರ್ ಹೆಬ್ಬಾಳೆ, ಕರುನಾಡು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಂಜೀವಕುಮಾರ್ ಅತಿವಾಳೆ ಹಾಗೂ ಸಿದ್ದಲಿಂಗಯ್ಯ ಬಂಕಲಗಿ ಕಣದಲ್ಲಿದ್ದಾರೆ.

ಇದನ್ನೂ ಓದಿ:Teltumbde's Death: ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆಂದ ನಕ್ಸಲರು: ನ.27ರಂದು ಬಂದ್‌ಗೆ ಕರೆ

ಕಳೆದ ಎರಡು ವಾರಗಳಿಂದ ಜಿಲ್ಲೆಯಾದ್ಯಂತ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳ ಪೈಕಿ, ಮೂವರು ಸಾಕಷ್ಟು ಪ್ರಭಾವಶಾಲಿಗಳಾಗಿದ್ದು ಕನ್ನಡ ನಾಡು, ನುಡಿಯ ವಿಚಾರದಲ್ಲಿ ಹಲವಾರು ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಬೀದರ್ ಪರಿಷತ್ ಚುನಾವಣೆ ತ್ರೀಕೊನ ಸ್ಪರ್ಧೆ ಏರ್ಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು 12,837 ಜನರು ಜಿಲ್ಲಾ ಹಾಗೂ ರಾಜ್ಯ ಅಧ್ಯಕ್ಷರ ಸ್ಥಾನಗಳಿಗೆ ಪ್ರತ್ಯೇಕ ಮತ ಚಲಾವಣೆ ಮಾಡಲಿದ್ದಾರೆ. ಬೀದರ್ ತಾಲೂಕಿನಲ್ಲಿ 6,023 ಮತದಾರರಿದ್ದಾರೆ. ಭಾಲ್ಕಿ ತಾಲೂಕಿಲ್ಲಿ 1849, ಬಸವಕಲ್ಯಾಣ ತಾಲೂಕಿನಲ್ಲಿ 1249, ಔರಾದ್ 1203, ಹುಮನಾಬಾದ್ 1049, ಕಮಲನಗರ 681, ಚಿಟಗುಪ್ಪ 461 ಹಾಗೂ ಹುಲಸೂರು ತಾಲೂಕಿಲ್ಲಿ 322 ಜನ ಮತದಾರರು ಆಯಾ ತಾಲೂಕು ತಹಶೀಲ್ದಾರ್​ ಕಚೇರಿಗಳ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಶ್ರೀಕಿ ಡ್ರಗ್ಸ್ ತಂದು ಕೊಡುತ್ತಿದ್ದ: ಆರಗ ಜ್ಞಾನೇಂದ್ರ ಆರೋಪ

ಬಿರುಸಿನ ಚುನಾವಣಾ ಪ್ರಚಾರ:

ಕಸಾಪ ಚುನಾವಣೆಯಲ್ಲಿ ಪ್ರತಿಷ್ಠೆ ಸಾಧಿಸಲು ಮುಂದಾಗಿರುವ ಅಭ್ಯರ್ಥಿಗಳಾದ ಸುರೇಶ್​ ಚನ್ನಶೆಟ್ಟಿ ಹಾಗೂ ರಾಜಕುಮಾರ ಹೆಬ್ಬಾಳೆ ಅವರಿಗೆ ಸಂಜೀವಕುಮಾರ್ ಅತಿವಾಳೆ ಸವಾಲಾಗಿ ನಿಲ್ಲಲಿದ್ದಾರೆ. ರಾಜಕೀಯ ಪಕ್ಷಗಳಂತೆ ಪರಿಷತ್ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಎರಡು ಬಣಗಳು ಪರಿಷತ್ತಿನ ಚುನಾವಣೆಯಲ್ಲಿ ಹಿಂದೆಂದು ಕಾಣದಂತ ಪ್ರಚಾರದಲ್ಲಿ ತೊಡಗಿದ್ದಾರೆ. ಪರ-ವಿರೋಧ, ವಾದ- ಪ್ರತಿವಾದ, ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರ ವಾಗ್ವಾದ ಜೋರಾಗಿ ನಡೆಯುತ್ತಿದೆ.

ಇದನ್ನೂ ಓದಿ:Jan Swaraj Yatra..ಜನಸ್ವರಾಜ್ ಯಾತ್ರೆ ಹೆಸರಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ: ಹೆಚ್​​ಡಿಕೆ ಕಿಡಿ

ಕನ್ನಡಕ್ಕಾಗಿ ಮಾಡಿದ ಕೆಲಸಗಳೇ ಶ್ರೀರಕ್ಷೆ:

ಕಳೆದ ಅವಧಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷನಾಗಿ ಜಿಲ್ಲಾ ಕನ್ನಡ ಭವನ ಹಾಗೂ ಕನ್ನಡಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನ ಮಾನಸದಲ್ಲಿದ್ದೇನೆ. ಹೀಗಾಗಿ, ಮತ್ತೊಮ್ಮೆ ಕಸಾಪ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಮತದಾರರು ನನ್ನನ್ನು ಮರೆತಿಲ್ಲ, ನನ್ನ ಕಾರ್ಯಗಳನ್ನು ನೋಡಿ ಆಯ್ಕೆ ಮಾಡಲಿದ್ದಾರೆ ಎಂದು ಸುರೇಶ್​ ಚನ್ನಶೆಟ್ಟಿ ಹೇಳಿದ್ದಾರೆ.

ಕನ್ನಡಕ್ಕಾಗಿ ಮಾಡಿದ ಕೆಲಸಗಳು ಹಾಗೂ ಜಾನಪದ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾಕಾಲ ಮಾಡಿದ ಕೆಲಸಗಳನ್ನು ನೋಡಿ ಈ ಬಾರಿಯ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತದಾರರು ನನ್ನನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ, ಹೊಸಬನಾದ ನನಗೆ ಅವಕಾಶ ಸಿಗುತ್ತದೆ ಎಂದು ರಾಜಕುಮಾರ ಹೆಬ್ಬಾಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details