ಕರ್ನಾಟಕ

karnataka

ಭಾರಿ ಮಳೆಗೆ ನೆಲಕ್ಕುರುಳಿದ ಜಗತ್ಪ್ರಸಿದ್ಧ ಹಂಪಿಯ ಕಲ್ಲಿನ ಕಂಬಗಳು

By

Published : Aug 30, 2022, 6:35 PM IST

bly_01_hampi_polls.jpg

ವಿಶ್ವ ಪ್ರಸಿದ್ದ ಹಂಪಿಯಲ್ಲಿ ಭಾರಿ ಮಳೆಯಿಂದಾಗಿ ಪ್ರಸನ್ನ ವಿರೂಪಾಕ್ಷ ದೇಗುಲದ ಕಲ್ಲಿನ‌ ಕಂಬಗಳು ಧರೆಗುರುಳಿವೆ.

ವಿಜಯನಗರ: ಜಿಲ್ಲೆಯಾದ್ಯಂತ ಸತತ ನಾಲ್ಕನೇ ದಿನವೂ ಮಳೆ ಮುಂದುವರೆದಿದ್ದು, ಭಾರಿ ಮಳೆಗೆ ವಿಶ್ವವಿಖ್ಯಾತ ಹಂಪಿ ದೇವಸ್ಥಾನದ ಒಳಭಾಗದ ಮಂಟಪವೊಂದು ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಹಂಪಿಯಿಂದ ಕಮಲಾಪುರ ರಸ್ತೆಗೆ ತೆರಳುವ ಮಾರ್ಗ ಮಧ್ಯದಲ್ಲಿವು ನೆಲಸ್ತರದ ಶಿವ ದೇವಾಲಯದಲ್ಲಿ ಘಟನೆ ನಡೆದಿದೆ. ಪ್ರಸನ್ನ ವಿರೂಪಾಕ್ಷ ದೇಗುಲದ ಕಲ್ಲಿನ‌ ಕಂಬಗಳಿಗೂ ಹಾನಿಯಾಗಿದೆ. ಮೂರು ಕಲ್ಲಿನ ಕಂಬಗಳು ನೆಲಕ್ಕುರುಳಿದ್ದು, ಇವುಗಳ ಜೊತೆಗೆ ಮಣ್ಣಿನ ತಡೆಗೋಡೆಯೂ ಕುಸಿದಿದೆ‌. ಶಿವ ದೇವಾಲಯ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ, ದೇವಾಲಯ ನೋಡಲು ಬರುವ ಪ್ರವಾಸಿಗರು ನಿರಾಸೆಯಿಂದ ಹಿಂತಿರುಗುವಂತಾಯಿತು.

ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗಳು ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳು ಹಾಗೂ ಸ್ಮಾರಕಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಈಗಾಗಲೇ ಹಲವಾರು ಬಾರಿ ಹಂಪಿ ರಥ ಬೀದಿಯ ಕೆಲ ಮಂಟಪಗಳು, ವಿರೂಪಾಕ್ಷ ದೇವಸ್ಥಾನದ ಒಳಭಾಗದಲ್ಲಿ ಹಾಗೂ ವಿಜಯವಿಠಲ ದೇವಸ್ಥಾನದ ಬಳಿಯೂ ಮಂಟಪಗಳು ಕುಸಿದು ಬಿದ್ದಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಂಡ್ಯದಲ್ಲಿ ಮಳೆ ಆರ್ಭಟ.. ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಿದ ತಡೆಗೋಡೆ ಕುಸಿತ

ABOUT THE AUTHOR

...view details