ಕರ್ನಾಟಕ

karnataka

ರಮೇಶ್ ಜಾರಕಿಹೊಳಿ ನಡೆಸುತ್ತಿರುವ ಸಮಾವೇಶಕ್ಕೆ ನಾನು ಹೋಗುವುದಿಲ್ಲ: ಮಾಜಿ ಶಾಸಕ ಸಂಜಯ್ ಪಾಟೀಲ್

By

Published : Jan 20, 2023, 2:47 PM IST

Updated : Jan 20, 2023, 3:03 PM IST

ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರವಾದ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಮೈದಾನದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಅವರ ಅಭಿಮಾನಿಗಳ ವತಿಯಿಂದ ಇಂದು ಶಕ್ತಿ ಪ್ರದರ್ಶನ ನಡೆಯಲಿದ್ದು, ಅದಕ್ಕಾಗಿ ಭರದ ಸಿದ್ಧತೆ ನಡೆದಿದೆ. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್ ಈ ಸಮಾವೇಶಕ್ಕೆ ಹೋಗದಿರಲು ತೀರ್ಮಾನ ಮಾಡಿದ್ದಾರೆ.

Sanjay Patil React On Upcoming Election
Sanjay Patil React On Upcoming Election

ಮಾಜಿ ಶಾಸಕ ಸಂಜಯ್ ಪಾಟೀಲ್

ಬೆಳಗಾವಿ: ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಈ ಉಡುಗೊರೆ ಕೊಡುವ ಕೆಲಸ ಬರುತ್ತಿರಲಿಲ್ಲ. ಸೋಲುವ ಭಯ ಇದ್ದಿದ್ದರಿಂದ ಈ ತರಹದ ವೇದಿಕೆಗಳು ಸಿದ್ಧಗೊಳ್ಳುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್, ಪರೋಕ್ಷವಾಗಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಟಾಂಗ್​ ನೀಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜನರ ಸಮಸ್ಯೆಗಳನ್ನು ಆಲಿಸಬೇಕು. ಕ್ಷೇತ್ರದ ಸಮಸ್ಯೆ ಸರಿ ಮಾಡುತ್ತೇವೆಂದು ಮತ ಕೇಳಬೇಕು. ಈ ರೀತಿಯ ಗಿಫ್ಟ್​ ರಾಜಕಾರಣ ಯಾವ ಪಕ್ಷಕ್ಕೂ ಸಲ್ಲದು ಎಂದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದವಾದ ಸುಳೇಭಾವಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಅವರ ಅಭಿಮಾನಿ ಬಳಗದ ವತಿಯಿಂದ ಇಂದು ಸಂಜೆ ನಡೆಸುತ್ತಿರುವ ಶಕ್ತಿ ಪ್ರದರ್ಶನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಾವೇಶಕ್ಕೆ ಹೋಗದಿರಲು ಬಹುತೇಕ ಎಲ್ಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ನಿರ್ಧಾರ ಮಾಡಿದ್ದಾರೆ. ಆ ಸಮಾವೇಶ ರಮೇಶ್ ಜಾರಕಿಹೊಳಿ ಅವರ ಅಭಿಮಾನಿ ಬಳಗದ ವತಿಯಿಂದ ನಡೆಯುತ್ತಿದೆ. ಜೊತೆಗೆ ಬಿಜೆಪಿ ಬ್ಯಾನರ್ ಇಲ್ಲದ ವೇದಿಕೆಯಾಗಿದ್ದರಿಂದ ತಾವು ಹೋಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ನಾಯಕರು. ಅವರ ಬಗ್ಗೆ ಗೌರವ ಇದೆ. ಇದು ಬಿಜೆಪಿ ಕಾರ್ಯಕ್ರಮವಲ್ಲ. ಪಕ್ಷಾತೀತವಾಗಿ ನಡೆಯಲಿದೆ ಎಂದು ಸ್ವತಃ ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹೀಗಾಗಿ, ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನನ್ನ ಮನಸು ಒಪ್ಪೋದಿಲ್ಲ. ಕಾರ್ಯಕರ್ತರಿಗೆ ಹೋಗಿ ಅಂತಾನೂ ಹೇಳಲ್ಲ, ಹೋಗಬೇಡಿ ಅಂತಾನೂ ಹೇಳಲ್ಲ. ನಮಗೆ ಯಾವುದೇ ಹಿರಿಯ ನಾಯಕರಿಂದ ಸೂಚನೆ ಬಂದಿಲ್ಲ. ಬಿಜೆಪಿ, ಕಮಲ, ಹಿಂದುತ್ವ, ನರೇಂದ್ರ ಮೋದಿ ನನ್ನ ಉಸಿರು. ಬಿಜೆಪಿ ಬ್ಯಾನರ್ ಇಲ್ಲದ ವೇದಿಕೆ ಮೇಲೆ ಹೋಗಲು ಮನಸ್ಸಿಲ್ಲ ಎಂದರು.

ಪೌಡರ್ ಮತ್ತು ಲಿಫ್ಟಿಕ್​ ಹಚ್ಚಿಕೊಂಡಿರುವ ಅಭ್ಯರ್ಥಿಗಳು: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಫೈಟ್ ವಿಚಾರ ಕುರಿತು ಮಾತನಾಡಿದ ಅವರು, ಪಕ್ಷದ ಕೆಲವರು ಮುಂದಿನ ಕ್ಯಾಂಡಿಡೇಟ್ ನಾನೇ ಅಂತಾ ಈಗಾಗಲೇ ಪೌಡರ್ ಮತ್ತು ಲಿಫ್ಟಿಕ್​ ಹಚ್ಚಿಕೊಂಡು ನಿಂತಿದ್ದಾರೆ. ಆದರೆ, ಪಕ್ಷ ಯಾರಿಗೆ ಟಿಕೆಟ್ ಅಂತ ಇನ್ನೂ ತೀರ್ಮಾನಿಸಿಲ್ಲ. ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಿದೆ. ಯಾರಿಗೆ ಕೊಟ್ಟರೂ ಖುಷಿ. ಟಿಕೆಟ್ ಘೋಷಣೆಯಾದ ಬಳಿಕ ಕ್ಷೇತ್ರದ ನಾಯಕರೆಲ್ಲರೂ ಒಂದಾಗುತ್ತಾರೆ. ಸಂಜಯ್ ಪಾಟೀಲ್​ಗೆ ಟಿಕೆಟ್ ಕೊಡಬೇಡಿ ಅಂತಾ ರಮೇಶ್ ಜಾರಕಿಹೊಳಿ ಎಲ್ಲೂ ಹೇಳಿಲ್ಲ. ಫೋನ್ ಮಾಡಿ ಸಮಾವೇಶಕ್ಕೆ ಕರೆದಿದ್ದರು. ಆದರೆ ಬಿಜೆಪಿ ಬ್ಯಾನರ್ ಹಾಕಿದ್ದರೆ ಬರುತ್ತಿದ್ದೆ ಎಂದು ಹೇಳಿದ್ದೆ ಅಷ್ಟೇ. ಆದರೆ, ಹೋಗುವುದಕ್ಕೆ ಆಗಲ್ಲ ಎಂದರು.

ಪಕ್ಷಾತೀತ ಸಮಾವೇಶ:ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರವಾದ ಸುಳೇಭಾವಿ ಗ್ರಾಮದಲ್ಲಿ ಇಂದು ಸಮಾವೇಶ ನಡೆಯಲಿದ್ದು ಅದಕ್ಕಾಗಿ ಸಿದ್ಧತೆ ನಡೆದಿದೆ. ಮಾಜಿ ಶಾಸಕ ಸಂಜಯ್ ಪಾಟೀಲ್, ಧನಂಜಯ ಜಾಧವ್, ವಿನಯ್ ಕದಂ, ನಾಗೇಶ್ ಮನ್ನೋಳಕರ್ ಸೇರಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಆಹ್ವಾನ ಸಹ ನೀಡಲಾಗಿದೆ. ಇಂದು ನಡೆಯುತ್ತಿರುವ ಸಮಾವೇಶ ಬಿಜೆಪಿ ಪಕ್ಷದ ಸಮಾವೇಶವಲ್ಲ. ಬಿಜೆಪಿ ಪಕ್ಷದಿಂದ ಮಾಡುವಾಗ ಗ್ರಾಮೀಣ ಅಧ್ಯಕ್ಷರ ನೇತೃತ್ವದಲ್ಲಿ ಮಾಡಲಾಗುತ್ತದೆ. ಇಂದಿನ ಸಮಾವೇಶ ನಮ್ಮ ತಂಡದ ವತಿಯಿಂದ ಮಾಡಲಾಗುತ್ತದೆ. ಇದು ಪಕ್ಷಾತೀತವಾಗಿ ನಡೆಯಲಿದೆ ಎಂದು ರಮೇಶ್ ಜಾರಕಿಹೊಳಿ ಇದಕ್ಕೂ ಮುನ್ನ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಜೆಡಿಎಸ್​ ಮಾತ್ರವಲ್ಲ, ಬಿಜೆಪಿಯ ಹಾಲಿ ಶಾಸಕರೂ ಕಾಂಗ್ರೆಸ್‌ ಸೇರಲಿದ್ದಾರೆ: ಡಿ.ಕೆ.ಶಿವಕುಮಾರ್​

Last Updated : Jan 20, 2023, 3:03 PM IST

ABOUT THE AUTHOR

...view details