ಕರ್ನಾಟಕ

karnataka

ಸಾಮಾಜಿಕ‌ ಜಾಲತಾಣದಲ್ಲಿ ರಮೇಶ್​​​ ಜಾರಕಿಹೊಳಿ ಅಭಿಮಾನಿಗಳಿಂದ ಟ್ರೋಲ್​​​

By

Published : Jul 25, 2019, 7:28 PM IST

ಮೊನ್ನೆ ನಡೆದ ವಿಶ್ವಾಸಮತ ಯಾಚನೆಯಲ್ಲಿ ಹೆಚ್​​.ಡಿ. ಕುಮಾರಸ್ವಾಮಿಗೆ ಹಿನ್ನಡೆಯಾಗಿದ್ದು ಮೈತ್ರಿ ಸರ್ಕಾರ ಮುರಿದುಬಿದ್ದಿದೆ. ಇದರ ಬೆನ್ನಲ್ಲೇ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ರಮೇಶ್​​​ ಜಾರಕಿಹೊಳಿ

ಚಿಕ್ಕೋಡಿ:ಮೈತ್ರಿ ಸರ್ಕಾರ ಪತನ ಬೆನ್ನಲ್ಲೇ ಸಾಮಾಜಿಕ‌ ಜಾಲತಾಣದಲ್ಲಿ ರಮೇಶ್​​​​ ಜಾರಕಿಹೊಳಿ ಅಭಿಮಾನಿಗಳಿಂದ ಟ್ರೋಲ್​​​​ಗಳು ಹೆಚ್ಚಾಗಿದ್ದು ಗೋಕಾಕ್​​​​​​​​​​ ರೆಬಲ್ ಶಾಸಕ ರಮೇಶ್​​​​​​​​​ ಜಾರಕಿಹೊಳಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ.

ರಮೇಶ್​​​ ಜಾರಕಿಹೊಳಿ

ಅಭಿಮಾನಿಗಳು ತಮ್ಮ ಫೇಸ್​​​ಬುಕ್​​​​, ವಾಟ್ಸಾಪ್​​​​​, ಟ್ವಿಟ್ಟರ್​​​​​​​, ಇನ್​​​​​​​​​​​​​​​​​​​​​​​​​​​​ಸ್ಟಾಗ್ರಾಂ ಸೇರಿದಂತೆ‌ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಜಾರಕಿಹೊಳಿ ಅವರ ಪೋಟೋ ಟ್ರೋಲ್​​​​​​​​​​​​​​ ಮಾಡಿ ಪೋಸ್ಟ್ ಹಾಕುತ್ತಿದ್ದಾರೆ. ಉತ್ತರ ಕರ್ನಾಟಕ ಮಂದಿ ಎಂಬ ಫೇಸ್​​​ಬುಕ್​​​​ ಖಾತೆಯಲ್ಲಿ ರಮೇಶ್ ಜಾರಕಿಹೊಳಿ ಪೋಟೋದೊಂದಿಗೆ 'ಉತ್ತರ ಕರ್ನಾಟಕ ತಂಟೆಗೆ ಬಂದ್ರ ಏನಾಯ್ತು ಅಂತ ಗೊತ್ತಲ್ಲ - ಗುರಾಯಿಸಿದ್ರೆ ಗುಮ್ಮತಿವಿ' ಎಂದು ಪೋಸ್ಟ್​​​​​​​​​​​​​​​​​​ ಹಾಕಲಾಗಿದೆ. ಮತ್ತೊಂದು ಖಾತೆಯಲ್ಲಿ 'ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದ ಗೋಕಾಕ ಸಾಹುಕಾರ - ರಮೇಶ ಜಾರಕಿಹೊಳಿ' ಎಂದು, ಅದೇ ರೀತಿ ಬೆಳಗಾವಿ ಪೇಜ್​​​​​​​​​​​​​​​​​​ನಲ್ಲಿ 'RAMESH JARAKIHOLI FINISHES OFF IN HIS STYLE - ಹೆಂಗ ನಮ್ಮ ಶಾಸಕರ ಹವಾ ' ಎಂದು ಟ್ರೋಲ್ ಮಾಡಲಾಗಿದೆ.

ರಮೇಶ್​​​ ಜಾರಕಿಹೊಳಿ

ಮತ್ತೆ ಕೆಲವು ಅಭಿಮಾನಿಗಳು 'ಛಲ ಬಿಡದೆ ತಮ್ಮ ಹಟ್ಟಕ್ಕೆ ಬಿದ್ದು ಮೈತ್ರಿ ಸರ್ಕಾರವನ್ನು ಕೆಡವೇ ತೀರುತ್ತೇನೆಂಬ ಮಾತಿಗೆ ಬದ್ಧರಾಗಿ ಕೆಲಸ ಮುಗಿಸಿ ಬಂದಿದ್ದಾರೆ ನಮ್ಮ ಸಾಹುಕಾರರು' ಎಂದು ಅಭಿಮಾನಿಗಳು ತಮ್ಮ ತಮ್ಮ ಮನೋಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮೂಲಕ ವ್ಯಕ್ತಪಡಿಸಿದ್ದಾರೆ.

ರಮೇಶ್​​​ ಜಾರಕಿಹೊಳಿ
Intro:ಸಾಮಾಜಿಕ‌ ಜಾಲತಾಣದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳಿಂದ ಟ್ರೂಲ್
Body:
ಚಿಕ್ಕೋಡಿ :

ರಾಜ್ಯದಲ್ಲಿ ಸರ್ಕಾರ ಪತನ ಬೆನ್ನಲ್ಲೇ ಸಾಮಾಜಿಕ‌ ಜಾಲತಾಣದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳಿಂದ ಟ್ರೂಲ್ ಗಳು ಹೆಚ್ಚಾಗಿದ್ದು ಗೋಕಾಕ ರೆಬಲ್ ಶಾಸಕ ರಮೇಶ ಜಾರಕಿಹೊಳಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ.

ಹೌದು ಸರ್ಕಾರ ಪತನದ ಬೆನ್ನಲ್ಲೇ ರೆಬಲ್ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿಗಳು ತಮ್ಮ ಪೇಸ್ ಬುಕ್, ಮಾಟ್ಸ್ ಆ್ಯಪ್, ಟ್ವೀಟರ್, ಇನ್ ಸ್ಟಾಗ್ರಾಂ ಸೇರಿದಂತೆ‌ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಪೋಟೋ ಟ್ರೂಲ್ ಮಾಡಿ ಅಭಿಮಾನಿಗಳು ಪೋಸ್ಟ್ ಹಾಕುತ್ತಿದ್ದಾರೆ.

ಉತ್ತರ ಕರ್ನಾಟಕ ಮಂದಿ ಎಂಬ ಪೇಸ್ ಬುಕ್ ಖಾತೆಯಲ್ಲಿ ಉತ್ತರ ಕರ್ನಾಟಕ ತಂಟೆಗೆ ಬಂದ್ರ ಏನಾಯ್ತು ಅಂತ ಗೊತ್ತಲ್ಲ - ಗುರಾಯಿಸಿದ್ರೆ ಗುಮ್ಮತಿವಿ ಎಂದು ರಮೇಶ ಜಾರಕಿಹೊಳಿ ಪೋಟೊ ಹಾಕಿ ಪೋಸ್ಟ ಹಾಕಲಾಗಿದೆ. ಮತ್ತೊಂದು ಖಾತೆಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದ ಗೋಕಾಕ ಸಾಹುಕಾರ - ರಮೇಶ ಜಾರಕಿಹೊಳಿ. ಅದೇ ರೀತಿ ಬೆಳಗಾವಿ ಪೇಜನಲ್ಲಿ RAMESH JARAKIHOLI FINISHES OFF IN HIS STYLE - ಹೆಂಗ ನಮ್ಮ ಶಾಸಕರ ಹವಾ ಎಂದು ಹಲವಾರು ಅಭಿಮಾನಿಗಳು ತಮ್ಮ ತಮ್ಮ ಪೇಸ್ ಬುಕ್ ಖಾತೆಯಲ್ಲಿ ರಮೇಶ ಜಾರಕಿಹೊಳಿ ಪೋಟೋ ಹಾಕಿ ಟ್ರೋಲ್ ಮಾಡಿದ್ದಾರೆ.

ಒಟ್ಟಾರೆಯಾಗಿ ಛಲ ಬಿಡದೆ ತಮ್ಮ ಹಟ್ಟಕ್ಕೆ ಬಿದ್ದು ಮೈತ್ರಿ ಸರ್ಕಾರವನ್ನು ಕೆಡುವೆ ತೀರುತ್ತೆನೆಬ್ಬ ಮಾತಿಗೆ ಬದ್ದನಾಗಿ ಕೆಲಸ ಮುಗಿಸಿ ಬಂದಿದ್ದಾರೆ ನಮ್ಮ ಸಾಹುಕಾರರು ಎಂದು ತಮ್ಮ ಅಭಿಮಾನಿಗಳು ತಮ್ಮ ಮನೋಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಹಲವಾರು ರೀತಿ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಟ್ರೂಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

TAGGED:

ABOUT THE AUTHOR

...view details