ಕರ್ನಾಟಕ

karnataka

ನಾಗವಾರ ಭೂ ಸ್ವಾದೀನ ಅಕ್ರಮ ಪ್ರಕರಣದ ತನಿಖೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

By

Published : Jul 13, 2023, 5:36 PM IST

Updated : Jul 13, 2023, 9:10 PM IST

DCM DK Shivakumar spoke in the Legislative Council.
ವಿಧಾನಪರಿಷತ್​ದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಸದನಕ್ಕೆ ಉತ್ತರ ನೀಡಿದರು.

ನಾಗವಾರ ಭೂ ಸ್ವಾದೀನ ಅಕ್ರಮ ಪ್ರಕರಣದ ತನಿಖೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

ಬೆಂಗಳೂರು:ಬೆಂಗಳೂರುಉತ್ತರ ತಾಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೇ ನಂಬರ್ 135/1 ರಲ್ಲಿ ಬಿಎಂಆರ್​ಸಿಎಲ್​ ಸ್ವಾಧೀನಪಡಿಸಿಕೊಂಡಿರುವ ಸರ್ಕಾರಿ ಜಮೀನಿನ ಪರಿಹಾರವನ್ನು ಖಾಸಗಿ ವ್ಯಕ್ತಿಗೆ 24 ಕೋಟಿ ರೂ ಪಾವತಿಸಿ ಅಕ್ರಮ ಎಸಗಲಾಗಿದೆ ಎಂಬ ಆರೋಪವಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಅದೇ ರೀತಿ ಬೊಮ್ಮನಹಳ್ಳಿಯ ಭೂ ಕಬಳಿಕೆ ತೆರವಿಗೆ ಕ್ರಮ ವಹಿಸಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೇ ನಂಬರ್ 135/1 ರಲ್ಲಿ ಬಿಡಿಎ ವಶಪಡಿಸಿಕೊಂಡಿರುವ 20 ಗುಂಟೆ ಜಾಗದಲ್ಲಿ ಮೆಟ್ರೋ ಮಾರ್ಗ ಹಾದು ಹೋಗುತ್ತಿದೆ.

ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಆ ಜಾಗವನ್ನು ಬಿಎಂಆರ್​​ಸಿಎಲ್​ ಸ್ವಾಧೀನಪಡಿಸಿಕೊಂಡಿದೆ. ಬಿಡಿಎಗೆ ಬಂದ ನಂತರ ಅದು ಸರ್ಕಾರದ ಜಾಗ ಆ ಸರ್ಕಾರಿ ಜಾಗಕ್ಕೆ ಪರಿಹಾರವಾಗಿ ಖಾಸಗಿ ವ್ಯಕ್ತಿಗೆ 24 ಕೋಟಿ ಹಣ ಪಾವತಿ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸಲಾಗುತ್ತದೆ. ಸರ್ಕಾರದ ಒಂದು ರೂಪಾಯಿಯನ್ನೂ ಬಿಡಲ್ಲ ಎಂದರು.

ಬೊಮ್ಮನಹಳ್ಳಿಯಲ್ಲಿ ಸಾವಿರ ಕೋಟಿ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸದಸ್ಯರು ಮಾಡಿದ್ದಾರೆ. ಭೂ ಪರಿವರ್ತನೆಯಾಗಿ ನಿವೇಶನಗಳಾಗಿ ಹಂಚಿಕೆಯಾಗಿ 40 ವರ್ಷವಾದರೂ, ಮಾಲೀಕರ ಸ್ವಾಧೀನಕ್ಕೆ ಬಿಡುತ್ತಿಲ್ಲ. ಖಾಸಗಿಯವರು ರೌಡಿಗಳನ್ನಿಟ್ಟುಕೊಂಡು ಬೇಲಿ ಹಾಕಿ ಕಬಳಿಸಿದ್ದಾರೆ ಎಂದಿದ್ದಾರೆ.

ಬಿಡಿಎನಲ್ಲಿ ಅವ್ಯವಹಾರಗಳ ವ್ಯಾಪ್ತಿಯಲ್ಲಿ ತನಿಖೆಗೊಳಪಡಿಸಲು ಪ್ರಾಮಾಣಿಕ ಅಧಿಕಾರಿಗಳ ಟಾಸ್ಕ್ ಪೋರ್ಸ್ ತಂಡ ರಚಿಸಿ ಎಂದಿದ್ದಾರೆ. ಈಗಾಗಲೇ ಟಾಸ್ಕ್ ಪೋರ್ಸ್ ರಚನೆಯನ್ನು ಒಂದು ಕ್ಷೇತ್ರಕ್ಕೆ ಮಾಡುತ್ತಿದೆ. ನಿನ್ನೆ ಪಾಪ ಬೆಂಗಳೂರಿನ ಶಾಸಕರೊಬ್ಬರು ಒಂದಕ್ಕೆ ಏಕೆ, ಇಡೀ ಬೆಂಗಳೂರಿನದ್ದು ತನಿಖೆ ಮಾಡಿಸಿ ಎಂದಿದ್ದಾರೆ. ಖಂಡಿತ ಟಾಸ್ಕ್ ಪೋರ್ಸ್ ರಚನೆ ಮಾಡಿ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಮದ್ಯ ಪರವಾನಗಿ ಸ್ಥಳಾಂತರಕ್ಕೆ ಬ್ರೇಕ್: ಮದ್ಯ ಮಾರಾಟಕ್ಕೆ ಗ್ರಾಮೀಣ ಭಾಗದ ಪರವಾನಗಿ ಪಡೆದುಕೊಂಡು ನಂತರ ಪಟ್ಟಣಗಳಿಗೆ ಹೋಗಿ ಮದ್ಯ ಮಾರಾಟ ಮಳಿಗೆ ತೆರೆಯುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ನಗರದಲ್ಲಿ ಪರವಾನಗಿ ಪಡೆದು ಹಳ್ಳಿಗಳಿಗೆ ತೆರಳಲೂ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಅಬಕಾರಿ ಸಚಿವ ತಿಮ್ಮಾಪೂರ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಬಂಡಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ಯ ಮಾರಾಟ ಮಳಿಗೆ ಸ್ಥಾಪಿಸಲು ಪರವಾನಗಿ ನೀಡಲು ಎ,ಬಿ,ಸಿ ಕ್ಯಾಟಗರಿ ಮಾಡಿದ್ದೇವೆ. ಕೆಲವರು ಗ್ರಾಮದ ಲೈಸೆನ್ಸ್ ಮಾಡಿಕೊಂಡು ನಂತರ ಸಿಟಿಗೆ ಹೋಗುತ್ತಾರೆ. ಅದನ್ನ ತಡೆಯಲು ಹಳ್ಳಿಯಿಂದ ಸಿಟಿಗೆ ಹೋಗದಂತೆ ನಿಯಮ ಮಾಡಿದ್ದೇವೆ. ಸಿಟಿಯಿಂದ ಹಳ್ಳಿಗೆ ಹೋಗಬಾರದೆಂಬ ನಿಮ್ಮ ಸಲಹೆಯನ್ನೂ ಪರಿಶೀಲನೆ ಮಾಡುತ್ತೇವೆ ಎಂದರು.

ಪಿಪಿಪಿ ಮಾದರಿಯಲ್ಲಿ ಪ್ರವಾಸಿ ತಾಣ ಅಭಿವೃದ್ಧಿ:ನಮ್ಮಲ್ಲಿನ ಅನುದಾನ ಬಳಸಿಕೊಂಡು ಪಿಪಿಪಿ ಮಾದರಿಯಲ್ಲಿ ರಾಜ್ಯದ ಕರಾವಳಿ ಭಾಗವೂ ಸೇರಿದಂತೆ ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು,
ಸಿಆರ್ ಜೆಡ್ ನಿಂದ ಪ್ರವಾಸೋದ್ಯಮಕ್ಕೆ ತೊಂದರೆ ಆಗಿತ್ತು. ಈಗ ಅದಕ್ಕೆ ವಿನಾಯಿತಿ ನೀಡಲಾಗಿದೆ. 19 ಕೋಟಿ ರೂ. ಅನುದಾನ ಸಿಆರ್ ಜೆಡ್ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಕೇಂದ್ರ ಬಿಡುಗಡೆ ಮಾಡಿತು. ಆದರೆ, ಅನುಮತಿ ಸಿಗದೇ ವಾಪಸ್ ಹೊಯಿತು ಎಂದು ತಿಳಿಸಿದರು.

ಕಳೆದ 12 ವರ್ಷದಿಂದ ಕೇಂದ್ರ ಸರ್ಕಾರ 19 ಕೋಟಿ ಬಿಡುಗಡೆ ಮಾಡಿರುವುದು ಬಿಟ್ಟರೆ ಮತ್ತೆ ಹಣ ಬಿಡುಗಡೆಯಾಗಿಲ್ಲ. ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ನಮಗೆ ಬಿಡುಗಡೆಯಾಗಿಲ್ಲ. ಜಿ 20 ಮಾಡುವಾಗಲು ಹಣ ಬಿಡುಗಡೆ ಮಾಡಲಿಲ್ಲ ಅಂದರೆ ಹೇಗೆ? ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ನಮ್ಮಲ್ಲಿ ಅನುದಾನ ಬಳಸಿಕೊಂಡು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸದನಕ್ಕೆ ತಿಳಿಸಿದರು.

ಇದನ್ನೂಓದಿ:ಅಕ್ರಮ ಗಣಿಗಾರಿಕೆ ಆರೋಪ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು

Last Updated :Jul 13, 2023, 9:10 PM IST

ABOUT THE AUTHOR

...view details