ಕರ್ನಾಟಕ

karnataka

ICC WTC Final 2023: ಮರುಕಳಿಸುತ್ತಾ ಲಕ್ಷ್ಮಣ್​​-ದ್ರಾವಿಡ್​ ಜೊತೆಯಾಟ..ಭಾರತಕ್ಕೆ ಭರತ್- ರಹಾನೆಯೇ ಇಂದಿನ ಭರವಸೆ

By

Published : Jun 9, 2023, 1:33 PM IST

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಬಲ ಪೈಪೋಟಿ ನೀಡಲು ಟೀಂ ಇಂಡಿಯಾಕ್ಕೆ ಇನ್ನೂ ಸಾಧ್ಯವಾಗಿಲ್ಲ. ಫಾಲೋ ಆನ್ ಉಳಿಸಲು ತಂಡ ಹೆಣಗಾಡುತ್ತಿದೆ.

ICC World Test Championship Australia vs India Final day 3rd
ಮರುಕಳಿಸುತ್ತಾ ಲಕ್ಷ್ಮಣ್​​-ದ್ರಾವಿಡ್​ ಜೊತೆಯಾಟ..

ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಕ್ರಮೇಣ ಆಸ್ಟ್ರೇಲಿಯಾದತ್ತ ವಾಲುತ್ತಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಭಾರತದ ಬೌಲರ್​ಗಳು ಆಕ್ರಮಣಕಾರಿ ದಾಳಿ ನಡೆಸಿ ಆಸ್ಟ್ರೇಲಿಯಾದ 7 ವಿಕೆಟ್‌ ಉರುಳಿಸಿ ಕೇವಲ 108 ರನ್ ಮಾತ್ರ ಬಿಟ್ಟುಕೊಟ್ಟರು.

ಎರಡನೇ ದಿನ ಪಂದ್ಯ ಆರಂಭವಾಗಿ ಆಸಿಸ್​ 361 ರನ್ ​ಗಳಿಸುತ್ತಿದ್ದಂತೆ ಭಾರತ ನಾಲ್ಕನೇ ವಿಕೆಟ್‌ ಪಡೆದುಕೊಂಡಿತು. ಇದಾದ ಬಳಿಕ ಆಸ್ಟ್ರೇಲಿಯಾ ತಂಡ 469ಕ್ಕೆ ಆಲೌಟ್ ಆಯಿತು. ಆದರೆ ಮೊದಲ ಇನ್ನಿಂಗ್ಸ್​ ಆರಂಭಮಾಡಿದ ಟೀಂ ಇಂಡಿಯಾದ ಮೊದಲಿಗೇ 4 ಅನುಭವಿ ಬ್ಯಾಟರ್​ಗಳನ್ನು ಕಳೆದುಕೊಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 5 ವಿಕೆಟ್​ ನಷ್ಟ ಅನುಭವಿಸಿ151 ರನ್ ಗಳಿಸಲಷ್ಟೇ ಶಕ್ತವಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ, ಭರತ ಆರಂಭಿಕರು ರನ್​ಗಳಿಸುವಲ್ಲಿ ವೈಫಲ್ಯವನ್ನು ಎದುರಿಸಿದರು. ಭರವಸೆಯ ಯುವ ಬ್ಯಾಟರ್​ ಶುಭಮನ್​ ಗಿಲ್​ 13 ರನ್​ ವಿಕೆಟ್​ ಕೊಟ್ಟರೆ, ನಾಯಕ ರೋಹಿತ್​ ಶರ್ಮಾ 15 ರನ್​ಗೆ ಪೆವಿಲಿಯನ್​ ದಾರಿ ಹಿಡಿದರು. ನಂತರ ವಿದೇಶಿ ಪಿಚ್​ಗಳಲ್ಲಿ ಉತ್ತಮ ರನ್​ ಗಳಿಸಿ ಬ್ಯಾಟರ್​ಗಳಾದ ಚೇತೇಶ್ವರ ಪೂಜಾರ ಮತ್ತು ವಿರಾಟ್​ ಕೊಹ್ಲಿ ಸಹ ಬೃಹತ್​ ರನ್​ ಕಲೆಹಾಕಲಿಲ್ಲ. ಭಾರತ 71 ರನ್​ಗೆ ತನ್ನ ನಾಲ್ಕನೇ ವಿಕೆಟ್ ಅ​ನ್ನು ಕಳೆದುಕೊಂಡಿತ್ತು.

ಇದಾದ ಬಳಿಕ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಸ್ವಲ್ಪ ಮಟ್ಟಿಗೆ ಹೋರಾಟ ಮುಂದುವರಿಸಿದರಾದರೂ ಅವರೂ ಸ್ಪಿನ್ ಬೌಲರ್​ಗೆ ಬಲಿಯಾದರು. ಆದರೆ, ಇದುವರೆಗಿನ ಈ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾದರು. ಜಡೇಜಾ 51 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಆದರೆ ಅವರ ಚುಟುಕು ಇನ್ನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು ಏಕೈಕ ಸಿಕ್ಸರ್‌ ದಾಖಲಿಸಿದರು.

ಭರತ್​ ಮತ್ತು ರಹಾನೆ ಮೇಲೆ ಭರವಸೆ: ಇದೀಗ ಮೂರನೇ ದಿನದಲ್ಲಿ ಭಾರತದ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಅವರು ಭಾರತದ ಫಾಲೋ-ಆನ್ ಉಳಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಮೂರನೇ ದಿನದ ಮೊದಲ ಸೆಷನ್‌ನ ಆಟವು ಭಾರತವು ಈ ಪರೀಕ್ಷೆಯನ್ನು ಉಳಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದಿಂದ ಅನುಭವಿ ಅಜಿಂಕ್ಯ ರಹಾನೆ ಮತ್ತು ಯುವ ಬ್ಯಾಟ್ಸ್‌ಮನ್ ಕೆಎಸ್ ಭರತ್ ಅವರಿಂದ ಸುದೀರ್ಘ ಜೊತೆಯಾಟದ ನಿರೀಕ್ಷೆ ಇದೆ. ಎರಡನೇ ದಿನದ ಅಜೇಯ ಬ್ಯಾಟ್ಸ್‌ಮನ್‌ಗಳಿಬ್ಬರೂ ಮೂರನೇ ದಿನದ ಮೊದಲ ಸೆಷನ್ ಆಡಿದರೆ, ನಂತರ ಪಂದ್ಯದಲ್ಲಿ ಭಾರತದ ಸ್ಥಾನ ಸ್ವಲ್ಪ ಉತ್ತಮವಾಗಬಹುದು ಎಂದು ನಂಬಲಾಗಿದೆ.

ಈ ಇಬ್ಬರೂ ಆಟಗಾರರು ಸ್ಮಿತ್ ಮತ್ತು ಹೆಡ್ ಅವರಂತೆ ಸುದೀರ್ಘ ಜೊತೆಯಾಟವನ್ನು ಹೊಂದಿರಬೇಕು. ಇದಾದ ಬಳಿಕ ಶಾರ್ದೂಲ್ ಠಾಕೂರ್ ರೂಪದಲ್ಲಿ ತಂಡಕ್ಕೆ ಬ್ಯಾಟಿಂಗ್ ಆಯ್ಕೆ ಇದೆ. ಆದರೆ, ವೇಗದ ಬೌಲಿಂಗ್ ಮತ್ತು ಸ್ವಿಂಗ್ ನಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎನ್ನುವುದಕ್ಕೆ ಇಂದಿನ ಇನ್ನಿಂಗ್​ವರೆಗೂ ಕಾಯಬೇಕಾಗಿದೆ

2001ರಲ್ಲಿ ರಾಹುಲ್​ ಡ್ರಾವಿಡ್​ ಮತ್ತು ವಿವಿಎಸ್​ ಲಕ್ಷ್ಮಣ್ ಭಾರತವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದರು. ರಹಾನೆ ಮತ್ತು ಭರತ್​ ಜೋಡಿಯಿಂದ ಅಂತಹದ್ದೇ ಜೊತೆಯಾಟವನ್ನು ಭಾರತೀಯ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಅಂಕಿ- ಅಂಶಗಳು: ಆಸ್ಟ್ರೇಲಿಯವು ಭಾರತದ ವಿರುದ್ಧ ತಮ್ಮ ಮನೆಯ ಪಿಚ್‌ಗಳ ಹೊರಗೆ 11 ನೇ ಬಾರಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ. ಈ ಅವಧಿಯಲ್ಲಿ ಭಾರತ 4 ಪಂದ್ಯಗಳನ್ನು ಗೆದ್ದು ಒಮ್ಮೆ ಮಾತ್ರ ಸೋತಿತ್ತು. ಆಸ್ಟ್ರೇಲಿಯದೊಂದಿಗಿನ ಉಳಿದ 4 ಪಂದ್ಯಗಳು ಡ್ರಾ ಆಗಿದ್ದು, ಒಂದು ಟೈನಲ್ಲಿ ಅಂತ್ಯಗೊಂಡಿದೆ. ಹೀಗಿರುವಾಗ ಆಸ್ಟ್ರೇಲಿಯಾ ವಿರುದ್ಧದ ಭಾರತದ ದಾಖಲೆ ನೋಡಿದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಇದೆಯೋ ಇಲ್ಲವೋ ಏನನ್ನೂ ಹೇಳಲಾಗದು.

ಇದನ್ನೂ ಓದಿ:WTC Final 2023: ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ; ಕುಸಿದ ಭಾರತಕ್ಕೆ ರಹಾನೆ- ಜಡೇಜಾ ಆಸರೆ

ABOUT THE AUTHOR

...view details