ಕರ್ನಾಟಕ

karnataka

ಹಳೆಯ ಹಾರ್ದಿಕ್ ಪಾಂಡ್ಯ ಕಮ್​​ಬ್ಯಾಕ್​​; ಫ್ರಾಂಚೈಸಿಗಾಗಿ ಮಾಡಿದ್ದನ್ನ ಇದೀಗ ನನ್ನ ದೇಶಕ್ಕಾಗಿ ಮಾಡುವೆ: ಹಾರ್ದಿಕ್!

By

Published : Jun 3, 2022, 5:14 PM IST

Hardik Pandya Shares Motivational Message

ಗುಜರಾತ್​ ಟೈಟನ್ಸ್ ನಾಯಕತ್ವ ವಹಿಸಿಕೊಂಡು ಯಶಸ್ವಿಯಾಗಿರುವ ಹಾರ್ದಿಕ್ ಪಾಂಡ್ಯ ಇದೀಗ ಟೀಂ ಇಂಡಿಯಾ ಪರ ಕಣಕ್ಕಿಳಿಯಲು ಸಜ್ಜಾಗಿದ್ದು, ಅದಕ್ಕೂ ಮುಂಚಿತವಾಗಿ ಪ್ರೇರಣೆ ನೀಡುವ ವಿಡಿಯೋ ತುಣುಕವೊಂದನ್ನ ಶೇರ್ ಮಾಡಿದ್ದಾರೆ.

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಗುಜರಾತ್ ಟೈಟನ್ಸ್ ಮುನ್ನಡೆಸಿ, ಯಶಸ್ವಿ ಕಂಡಿರುವ ಟೀಂ ಇಂಡಿಯಾ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಭಾರತ ತಂಡಕ್ಕೆ ಕಮ್​​ಬ್ಯಾಕ್​ ಮಾಡ್ತಿದ್ದಾರೆ. ಜೂನ್​​ 9ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಸರಣಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಪ್ರೇರಣಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಹಳೆಯ ಹಾರ್ದಿಕ್ ಪಾಂಡ್ಯ ಕಮ್​ಬ್ಯಾಕ್ ಮಾಡ್ತಿದ್ದಾರೆ. ಅಭಿಮಾನಿಗಳು ಸಹ ಹಿಂತಿರುಗಿದ್ದಾರೆ. ಪುನರಾಗಮನದ ಸಮಯ ಬಂದಿದ್ದು, ಅದಕ್ಕಾಗಿ ಎದುರು ನೋಡುತ್ತಿದ್ದೇನೆ. ನನ್ನ ಫ್ರಾಂಚೈಸಿಗೋಸ್ಕರ ಏನು ಮಾಡಿದ್ದೇನೆ, ಇದೀಗ ಅದನ್ನ ದೇಶಕ್ಕಾಗಿ ಮಾಡಬಲ್ಲೆ ಎಂದು ಹಾರ್ದಿಕ್ ಪಾಂಡ್ಯಾ ಹೇಳಿಕೊಂಡಿದ್ದಾರೆ. ಇದರ ವಿಡಿಯೋ ತುಣುಕವೊಂದನ್ನ ಗುಜರಾತ್ ಟೈಟನ್ಸ್​​ ಶೇರ್ ಮಾಡಿಕೊಂಡಿದೆ.

ಇದನ್ನೂ ಓದಿ:IPL​​ನಲ್ಲಿ ಅರ್ಜುನ್​ಗೆ ಸಿಗದ ಚಾನ್ಸ್​​.. ನಿಜವಾದ ಕಾರಣ ಹೊರಹಾಕಿದ ಕೋಚ್​ ಶೇನ್​ ಬಾಂಡ್!

ಮಾತು ಮುಂದುವರೆಸಿದ ಹಾರ್ದಿಕ್​, ನಾನು ತಂಡದಿಂದ ಹೊರಗುಳಿದಿದ್ದೇನೆಂದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಬಿಸಿಸಿಐ ನನ್ನನ್ನು ಕೈಬಿಟ್ಟಿದೆ ಎಂದು ತಪ್ಪಾಗಿ ಗ್ರಹಿಸಿದ್ದರು. ದೀರ್ಘ ವಿರಾಮ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಬಿಸಿಸಿಐಗೆ ಧನ್ಯವಾದ ಎಂದಿದ್ದಾರೆ. ಬೆನ್ನು ನೋವು ಹಾಗೂ ಶಸ್ತ್ರಚಿಕಿತ್ಸೆ ಕಾರಣ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, 2022ರ ಐಪಿಎಲ್​​ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಕಮ್​​ಬ್ಯಾಕ್ ಮಾಡಿದ್ದು, ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ, ಅವರಿಗೆ ಆಯ್ಕೆ ಸಮಿತಿ ಮತ್ತೊಮ್ಮೆ ಮಣೆ ಹಾಕಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟನ್ಸ್ ಮುನ್ನಡೆಸಿರುವ ಹಾರ್ದಿಕ್ ಪಾಂಡ್ಯ, ತಾವು ಆಡಿರುವ 15 ಪಂದ್ಯಗಳಿಂದ 487ರನ್​ಗಳಿಕೆ ಮಾಡಿದ್ದು, ಮಹತ್ವದ ಪಂದ್ಯಗಳಲ್ಲಿ ವಿಕೆಟ್ ಪಡೆದು ಮಿಂಚಿದ್ದಾರೆ. ಫೈನಲ್​ ಪಂದ್ಯದಲ್ಲಿ ಇವರ ಆಲ್​ರೌಂಡರ್ ಆಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾತನಾಡಿದ್ದ ಹಾರ್ದಿಕ್ ಪಾಂಡ್ಯ, ದೇಶಕ್ಕಾಗಿ ವಿಶ್ವಕಪ್ ಗೆಲ್ಲಬೇಕೆಂಬ ಮಹಾದಾಸೆ ವ್ಯಕ್ತಪಡಿಸಿದ್ದರು.

ABOUT THE AUTHOR

...view details