ಕರ್ನಾಟಕ

karnataka

ದಾವಣಗೆರೆ: ಮೇಯರ್ ಎದುರೇ ಸ್ಥಳೀಯರ ಹೊಡೆದಾಟ

By

Published : Oct 19, 2021, 11:27 AM IST

conflict between some people in front of Mayor at davanagere

ಕ್ಷುಲ್ಲಕ ಕಾರಣಕ್ಕಾಗಿ ಸ್ಥಳೀಯರು ಪಾಲಿಕೆ ಮೇಯರ್ ಎಸ್​.ಟಿ.ವಿರೇಶ್ ಎದುರು ಹೊಡೆದಾಡಿಕೊಂಡ ಘಟನೆ ನಡೆಯಿತು.

ದಾವಣಗೆರೆ: ಮೂಲಸೌಕರ್ಯ ವೀಕ್ಷಿಸಲು ಆಗಮಿಸಿದ್ದ ಪಾಲಿಕೆ ಮೇಯರ್ ಮುಂದೆಯೇ ಸ್ಥಳೀಯರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ 31ನೇ ವಾರ್ಡ್​​ನ ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದೆ.

ಗಲಾಟೆ ವಿಡಿಯೋ

ನಮ್ಮ ಪ್ರದೇಶ ಅಭಿವೃದ್ಧಿಯಾಗಿಲ್ಲ ಎಂದು ದಾವಣಗೆರೆ ಪಾಲಿಕೆ ಮೇಯರ್ ಎಸ್​.ಟಿ.ವಿರೇಶ್ ಬಳಿ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್ ವಿರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಸ್ಥಳೀಯರು ಗಲಾಟೆ ಮಾಡಿಕೊಂಡಿದ್ದಾರೆ.

ಗಲಾಟೆಗೆ ಕಾರಣವೇನು?

ಮಳೆಗಾಲದಲ್ಲಿ ತೀವ್ರ ತೊಂದರೆಯಾಗುತ್ತಿದ್ದು, ಡೆಕ್ ಸ್ಲಾಬ್​​ಗಳನ್ನು ನಿರ್ಮಿಸಬೇಕು. ಅದಕ್ಕಾಗಿ ಇಲ್ಲಿನ ಶೆಡ್​ಗಳನ್ನು ತೆರವುಗೊಳಿಸಬೇಕು ಎಂದು ಕೆಲ ಸ್ಥಳೀಯರು ಮೇಯರ್​ ಅವರನ್ನು ಒತ್ತಾಯಿಸಿದರು. ಆದರೆ, ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿಯೊಬ್ಬ ನಾನು ಶೆಡ್ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.

ಆಗ ಸ್ಥಳೀಯರು ಆತನ ವಿರುದ್ಧ ಕೂಗಾಡಿದ್ದು, ಇದರಿಂದ ಸಿಟ್ಟಿಗೆದ್ದ ಆ ವ್ಯಕ್ತಿ ಜಗಳ ತೆಗೆದಿದ್ದಾನೆಂಬ ಆರೋಪ ಕೇಳಿಬಂದಿದೆ. ಅಲ್ಲದೇ, ಮೇಯರ್ ಮುಂದೆಯೇ ಗಲಾಟೆ ಹೊಡೆದಾಡುವ ಹಂತಕ್ಕೆ ತಲುಪಿತ್ತು. ಬಳಿಕ ಮಧ್ಯ ಪ್ರವೇಶಿಸಿದ ಮೇಯರ್ ವಿರೇಶ್ ಹಾಗು ಪಾಲಿಕೆ ಸದಸ್ಯ ನಾಗರಾಜ್ ಜಗಳ ಬಿಡಿಸಿದರು.

ಇದನ್ನೂ ಓದಿ:ಪತ್ನಿ ಫೋಟೋಗೆ ಹೂ ತರಲೆಂದು ನಡೆದು ಬರುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಲಾರಿ

ABOUT THE AUTHOR

...view details