ಕರ್ನಾಟಕ

karnataka

ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ​.. ಯಾವೆಲ್ಲ ಪ್ರದೇಶಗಳಲ್ಲಿ ವ್ಯತ್ಯಯ?

By

Published : Oct 11, 2021, 10:11 PM IST

Updated : Oct 12, 2021, 4:02 AM IST

Bengaluru power cut

ದೇಶದಲ್ಲಿ ಕಲ್ಲಿದ್ದಲು ಸಮಸ್ಯೆ ಉಂಟಾಗಿರುವ ಕಾರಣ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕರೆಂಟ್ ಸಮಸ್ಯೆಯಾಗಲಿದ್ದು, ಇಂದು ಬೆಂಗಳೂರಿನ ಹಲವಡೆ ವಿದ್ಯುತ್​ನಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ಬೆಂಗಳೂರಿನ ಬಹುತೇಕ ಎಲ್ಲ ಏರಿಯಾಗಳಲ್ಲಿ ಇಂದು ಹಾಗೂ ನಾಳೆ ವಿದ್ಯುತ್​​ ವ್ಯತ್ಯಯವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಟ್ವಿಟರ್​ ಮೂಲಕ ಮಾಹಿತಿ ಹಂಚಿಕೊಂಡಿದೆ.

ಪ್ರಮುಖವಾಗಿ ದಕ್ಷಿಣ ವೃತ್ತದ ಜಯನಗರ, ಕೋರಮಂಗಲ, ಹೆಚ್​​ಎಸ್​ಆರ್​ ಲೇಔಟ್​ ವಿಭಾಗದಲ್ಲಿ ವಿದ್ಯುತ್​ ಸಮಸ್ಯೆಯಾಗಲಿದ್ದು, ಪಶ್ಚಿಮ ವೃತ್ತದ ರಾಜಾಜಿನಗರ, ಆರ್​.ಆರ್​.ನಗರ, ಕೆಂಗೇರಿ ವಿಭಾಗದಲ್ಲೂ ವಿದ್ಯುತ್​ ಅಡಚಣೆಯಾಗಲಿದೆ. ಇನ್ನು ಪೂರ್ವ ವೃತ್ತದ ಇಂದಿರಾನಗರ, ವೈಟ್​​ ಫೀಲ್ಡ್​, ಶಿವಾಜಿನಗರ ಹಾಗೂ ವಿಧಾನಸೌಧ ವಿಭಾಗದ ಪ್ರದೇಶದಲ್ಲೂ ವಿದ್ಯುತ್​​ ಸಮಸ್ಯೆಯಾಗಲಿದೆ. ಉತ್ತರ ವೃತ್ತದ ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ ಹಾಗೂ ಪೀಣ್ಯ ವಿಭಾಗದಲ್ಲೂ ಅಡಚಣೆಯಾಗಲಿದೆ.

ದೇಶದಲ್ಲಿ ಕಲ್ಲಿದ್ದಲ್ಲು ಬಿಕ್ಕಟ್ಟು ಉಂಟಾಗಿರುವ ಕಾರಣ ಕರ್ನಾಟಕ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ವಿದ್ಯುತ್​​ ಕಡಿತ ಆರಂಭಗೊಂಡಿದ್ದು, ಅದರ ಭಾಗವಾಗಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಪ್ರಮುಖವಾಗಿ ತಮಿಳುನಾಡು, ರಾಜಸ್ಥಾನ, ದೆಹಲಿ, ಪಂಜಾಬ್​, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದರ ಸಮಸ್ಯೆ ಉದ್ಭವವಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು, ಇದರ ಬೆನ್ನಲ್ಲೇ ರಾಜಧಾನಿಯಲ್ಲಿ ಕರೆಂಟ್​ ಕಟ್​ ಮಾಡುವ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ದಕ್ಷಿಣ ವಲಯ, ಪೂರ್ವ ವಲಯ ಹಾಗೂ ಪಶ್ಚಿಮ ವಲಯದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ.

ದಿನಾಂಕ 13ರಂದು ತುಮಕೂರು, ಮಧುಗಿರಿ, ಕುಣಿಗಲ್​, ತಿಪಟೂರು ವಿಭಾಗಗಳಲ್ಲೂ ವಿದ್ಯುತ್​ ಅಡಚಣೆ ಉಂಟಾಗಲಿದೆ. ಇದರ ಜೊತೆಗೆ ಕೋಲಾರ ವೃತ್ತದ ಕೋಲಾರ, ಕೆಜಿಎಫ್​, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ವಿಭಾಗದಲ್ಲೂ ಕರೆಂಟ್ ಸಮಸ್ಯೆಯಾಗಲಿದೆ.

Last Updated :Oct 12, 2021, 4:02 AM IST

ABOUT THE AUTHOR

...view details