ಕರ್ನಾಟಕ

karnataka

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ದೇಣಿಗೆ ಕೊಟ್ಟರೆ ತೆರಿಗೆ ವಿನಾಯಿತಿ

By

Published : May 29, 2021, 4:16 PM IST

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ವಕ್ತಾರ ಅಥರ್ ಹುಸೇನ್ ಮಾತನಾಡಿ, ಯಾವುದೇ ಪ್ರಚಾರ ಮತ್ತು ಮನವಿಯಿಲ್ಲದೆ ಆನ್‌ಲೈನ್ ಪೋರ್ಟಲ್ ಮೂಲಕ ಮಸೀದಿ ನಿರ್ಮಾಣಕ್ಕಾಗಿ ಅವರ ಟ್ರಸ್ಟ್‌ ಇದುವರೆಗೆ 20 ಲಕ್ಷ ರೂ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 (ಜಿ) ಅಡಿಯಲ್ಲಿ ದೀರ್ಘಕಾಲದವರೆಗೆ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದೆ. ಈಗ ಪ್ರಮಾಣಪತ್ರ ಪಡೆಯಲಾಗಿದೆ ಎಂದರು.

mosque
mosque

ಅಯೋಧ್ಯೆ:ಈಗ ಧನೀಪುರದ ಐದು ಎಕರೆ ಜಮೀನಿನಲ್ಲಿ ಮಸೀದಿ ನಿರ್ಮಾಣಕ್ಕಾಗಿ ದೇಣಿಗೆಗೆ ತೆರಿಗೆ ವಿಧಿಸಲಾಗುವುದಿಲ್ಲ. ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ನೀಡುವವರಿಗೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿದ್ದೇನೆ ಎಂದು ಮಸೀದಿ ನಿರ್ಮಣ ಟ್ರಸ್ಟ್‌ನ ಕಾರ್ಯದರ್ಶಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ವಕ್ತಾರ ಅಥರ್ ಹುಸೇನ್ ಮಾತನಾಡಿ, ಯಾವುದೇ ಪ್ರಚಾರ ಮತ್ತು ಮನವಿಯಿಲ್ಲದೇ ಆನ್‌ಲೈನ್ ಪೋರ್ಟಲ್ ಮೂಲಕ ಮಸೀದಿ ನಿರ್ಮಾಣಕ್ಕಾಗಿ ಅವರ ಟ್ರಸ್ಟ್‌ ಇದುವರೆಗೆ 20 ಲಕ್ಷ ರೂ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 (ಜಿ) ಅಡಿಯಲ್ಲಿ ದೀರ್ಘಕಾಲದವರೆಗೆ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದೆ. ಈಗ ಪ್ರಮಾಣಪತ್ರ ಪಡೆಯಲಾಗಿದೆ ಎಂದರು.

80 (ಜಿ) ತೆರಿಗೆ ವಿನಾಯಿತಿ ಪ್ರಮಾಣಪತ್ರವನ್ನು ಪಡೆದ ನಂತರ, ಟ್ರಸ್ಟ್‌ನ ಸದಸ್ಯರು ಈಗ ದೊಡ್ಡ ಹಣವನ್ನು ಪಡೆಯುವ ನಿರೀಕ್ಷೆಯಿದೆ. ಕಳೆದ ವಾರ ನಡೆದ ಟ್ರಸ್ಟ್‌ನ ಆನ್‌ಲೈನ್ ಸಭೆಯಲ್ಲಿ ಸದಸ್ಯರು ಪ್ರಮಾಣಪತ್ರಗಳನ್ನು ನೀಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಟ್ರಸ್ಟ್ ಸದಸ್ಯ ಮತ್ತು ಅಯೋಧ್ಯೆಯ ನಿವಾಸಿ ಕ್ಯಾಪ್ಟನ್ ಅಫ್ಜಲ್ ಮಾತನಾಡಿ, ಈ ಕಾರಣದಿಂದಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವುದನ್ನು ನಿಲ್ಲಿಸಲಾಗಿದೆ. ಇದು ನಮ್ಮ ಯೋಜನೆಯನ್ನು ಪ್ರಾರಂಭಿಸಲು ಅಡ್ಡಿಯಾಗುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details