ಕರ್ನಾಟಕ

karnataka

ಕಂಟೈನರ್​ಗೆ ಡಿಕ್ಕಿ ಹೊಡೆದ ಮತ್ತೊಂದು ಟ್ರಕ್‌: ನಾಲ್ವರು ಸಜೀವ ದಹನ

By ETV Bharat Karnataka Team

Published : Oct 17, 2023, 8:29 AM IST

ಪುಣೆಯ ಕಟ್ರಾಜ್-ದೇಹು ರಸ್ತೆ ಬೈಪಾಸ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Pune Accident
ಕಂಟೈನರ್ ಟ್ರಕ್​ಗೆ ಡಿಕ್ಕಿ ಹೊಡೆದ ಮತ್ತೊಂದು ಟ್ರಕ್‌: ನಾಲ್ವರು ಸಜೀವ ದಹನ

ಪುಣೆ (ಮಹಾರಾಷ್ಟ್ರ):ಕಟ್ರಾಜ್‌ನ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಕಂಟೈನರ್ ಟ್ರಕ್​ಗೆ ಮತ್ತೊಂದು ಟ್ರಕ್‌ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್‌ನ ಮುಂಭಾಗದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆ ಮತ್ತು ಬಾಲಕ ಸೇರಿದಂತೆ ನಾಲ್ವರು ಸಜೀವ ದಹನವಾಗಿರುವ ಘಟನೆ ಕಟ್ರಾಜ್-ದೇಹು ರಸ್ತೆ ಬೈಪಾಸ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ನರಹೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಎರಡೂ ವಾಹನಗಳು ಸತಾರಾದಿಂದ ಮುಂಬೈ ಕಡೆಗೆ ಹೋಗುತ್ತಿದ್ದವು. ಹೊಸ ಕಾಟ್ರಾಜ್ ಸುರಂಗ ಮತ್ತು ನವಲೆ ಸೇತುವೆಯ ನಡುವಿನ ಬೈಪಾಸ್‌ನ ಇಳಿಜಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಬೈಪಾಸ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಹಾನಿಗೊಳಗಾದ ಕಂಟೈನರ್ ಟ್ರಕ್​ ಹಾಗೂ ಟ್ರಕ್‌ ಅನ್ನು ಕ್ಯಾರೇಜ್‌ವೇಯಿಂದ ತೆಗೆದ ನಂತರ ರಾತ್ರಿ 10.30 ರ ಸುಮಾರಿಗೆ ವಾಹನ ಸಂಚಾರ ಪುನಾರಂಭವಾಗಿದೆ.

ಸಿಂಹಗಡದ ಇನಸ್ಪೆಕ್ಟರ್ ಮಾಹಿತಿ:ಅಪಘಾತದ ನಂತರ ಸಿಂಹಗಡ ರಸ್ತೆ ಮತ್ತು ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. “ಟ್ರಕ್ ಸಾಂಗ್ಲಿಯ ವೀಟಾದಿಂದ ಗುಜರಾತ್‌ಗೆ ಜೋಳದ ಸಿಪ್ಪೆಯನ್ನು ಸಾಗಿಸುತ್ತಿತ್ತು. ಇದು ಬೆಂಕಿಗೆ ಆಹುತಿಯಾಗಿದೆ. ಟ್ರಕ್ ಅನ್ನು ತನ್ನ ಸಹೋದರ ಓಡಿಸುತ್ತಿದ್ದನು ಎಂದು ಟ್ರಕ್​ ಮಾಲೀಕ ತಿಳಿಸಿದ್ದಾರೆ'' ಎಂದು ಸಿಂಹಗಡದ ಇನಸ್ಪೆಕ್ಟರ್ ಅಭಯ್ ಮಹಾಜನ್ ಮಾಹಿತಿ ನೀಡಿದ್ದಾರೆ.

ಟ್ರಕ್ ಮೊದಲು ಇಳಿಜಾರಿನಲ್ಲಿ ಕಂಟೈನರ್ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಎರಡನೆಯದು ಅದರ ಬದಿಯಲ್ಲಿ ತಿರುಗಿತು. ನಂತರ ಟ್ರಕ್ ಅದರ ಮುಂದೆ ಮತ್ತೊಂದು ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ನಂತರ, ಟ್ರಕ್‌ನ ಇಂಜಿನ್ ವಿಭಾಗದಿಂದ ಬೆಂಕಿ ಪ್ರಾರಂಭವಾಯಿತು ಮತ್ತು ಅದು ತ್ವರಿತವಾಗಿ ವಾಹನದ ಮುಂಭಾಗವನ್ನು ಆವರಿಸಿತು ಎಂದು ಸಿಂಹಗಡ ಟ್ರಾಫಿಕ್​ ಪೊಲೀಸ್ ಇನ್ಸ್‌ಪೆಕ್ಟರ್ ಜಯಂತ್ ರಾಜೂರ್ಕರ್ ತಿಳಿಸಿದ್ದಾರೆ.

ಟ್ರಕ್​ಗೆ ತಗುಲಿದ ಬೆಂಕಿ ನಂದಿಸಿದ ನಂತರ, ಮೃತ ದೇಹಗಳನ್ನು ಹೊರಗೆ ತೆಗೆಯಲಾಯಿತು. ಮೃತಪಟ್ಟಿರುವ ಟ್ರಕ್ ಚಾಲಕರನ್ನು ಗೋವಿಂದ್ ಜಾಧವ್ ಮತ್ತು ಟ್ರಕ್ ಕ್ಲೀನರ್ ಸೋಮನಾಥ್ ನೈಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಸಾಂಗ್ಲಿಯ ನಿವಾಸಿಗಳು. ಇನ್ನು ಮೃತ ಮಹಿಳೆ ಮತ್ತು ಬಾಲಕನ ಗುರುತು ಪತ್ತೆಯಾಗಿಲ್ಲ. ಗಾಯಗೊಂಡಿದ್ದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ನಗರ ಅಗ್ನಿಶಾಮಕ ದಳದ ಮುಖ್ಯಸ್ಥ ಹೇಳಿದ್ದೇನು?:ತುರ್ತು ಕರೆ ಸ್ವೀಕರಿಸಿದ ನಂತರ ಸಿಂಹಗಡ ರಸ್ತೆ ಮತ್ತು ಕಾಟ್ರಾಜ್ ಅಗ್ನಿಶಾಮಕ ಠಾಣೆಯ ನಮ್ಮ ತಂಡಗಳು ಸ್ಥಳಕ್ಕೆ ತಲುಪಿದವು. ಚಾಲಕನ ಕ್ಯಾಬಿನ್‌ನ ಚಾಸಿಸ್ ಮತ್ತು ಮುಂಭಾಗದ ಭಾಗವು ಚಪ್ಪಟೆಯಾಗಿದೆ. ಇದರೊಳಗೆ ಜನರು ಸಿಲುಕಿಕೊಂಡಿದ್ದರು. ಕೆಲವು ದಾರಿಹೋಕರು ಕ್ಯಾಬಿನ್‌ನ ಕ್ಲೀನರ್‌ನ ಅನ್ನು ರಕ್ಷಿಸಿದರು. ನಮ್ಮ ತಂಡದ ಸದಸ್ಯರು ಟ್ರಕ್​ ಒಳಗಿದ್ದ ಮೃತದೇಹ ಹೊರಗೆ ತೆಗೆಯಲಾಯಿತು ಎಂದು ನಗರ ಅಗ್ನಿಶಾಮಕ ದಳದ ಮುಖ್ಯಸ್ಥ ದೇವೇಂದ್ರ ಪೊಟ್‌ಪೋಡೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕೇರಳ: ಸ್ನಾನಕ್ಕೆ ತೆರಳಿದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ABOUT THE AUTHOR

...view details