ಕರ್ನಾಟಕ

karnataka

ಪಂಜಾಬ್ ಸರ್ಕಾರಕ್ಕೆ 2000 ಕೋಟಿ ದಂಡ ವಿಧಿಸಿದ ಎನ್​ಜಿಟಿ

By

Published : Sep 23, 2022, 3:52 PM IST

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಸರಿಯಾಗಿ ಅನುಷ್ಠಾನಗೊಳಿಸದ ಪಂಜಾಬ್ ಸರ್ಕಾರಕ್ಕೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2000 ಕೋಟಿ ರೂ. ದಂಡ ವಿಧಿಸಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ.

NGT imposed a fine
ಪಂಜಾಬ್ ಸರ್ಕಾರ

ಚಂಡೀಗಢ:ಪಂಜಾಬ್‌ನಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದ ಹಿನ್ನೆಲೆ ಎನ್​ಜಿಟಿ ಮಹತ್ವದ ಕ್ರಮವೊಂದನ್ನು ಕೈಗೊಂಡಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪಂಜಾಬ್​ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿದ್ದು, ಸುಮಾರು 2000 ಕೋಟಿ ದಂಡ ವಿಧಿಸಿದೆ.

ಘನ ಮತ್ತು ದ್ರವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ದಂಡ ವಿಧಿಸಲಾಗಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ಈ ವಿಷಯದಲ್ಲಿ ಎನ್‌ಜಿಟಿ ಪದೇ ಪದೇ ಆದೇಶ ನೀಡಿದ್ರೂ, ಪಂಜಾಬ್‌ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಎನ್​ಜಿಟಿ ತಿಳಿಸಿದೆ.

ದಂಡ ವಿಧಿಸಿದ ಎನ್​ಜಿಟಿ

ಈ ಹಿಂದೆ ಎನ್‌ಜಿಟಿ ಪ್ರತಾಪ್‌ಗಢ, ರಾಯ್ ಬರೇಲಿ ಮತ್ತು ಜೌನ್‌ಪುರ ಜಿಲ್ಲೆಗಳಲ್ಲಿ ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ 100 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಘನ ಮತ್ತು ದ್ರವ ತ್ಯಾಜ್ಯದ ದುರುಪಯೋಗಕ್ಕಾಗಿ 3,000 ಕೋಟಿ ರೂಪಾಯಿಯನ್ನು ಪರಿಸರ ಪರಿಹಾರವಾಗಿ ಪಾವತಿಸಲು ಎನ್​ಜಿಟಿ ಕಳೆದ ವಾರ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ದೆಹಲಿ ಜಲ ಮಂಡಳಿ, ನೋಯ್ಡಾ ಪ್ರಾಧಿಕಾರಕ್ಕೆ 150 ಕೋಟಿ ದಂಡ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ


ABOUT THE AUTHOR

...view details