ಕರ್ನಾಟಕ

karnataka

ಜಿ20 ಶೃಂಗಸಭೆ: ಉಕ್ರೇನ್​ ಸಂಘರ್ಷ ಕುರಿತ ಭಾರತದ ಕರಡು ಪಠ್ಯ ಸಾಕಾಗಲ್ಲ: EU ಹಿರಿಯ ಅಧಿಕಾರಿ

By ETV Bharat Karnataka Team

Published : Sep 7, 2023, 4:42 PM IST

G20 Summit: ಉಕ್ರೇನ್​ ಸಂಘರ್ಷದ ಕುರಿತು ರಷ್ಯಾ ಹಾಗೂ ಚೀನಾದ ಹೇಳಿಕೆಗಳು ಭಾರತ ಪ್ರತಿ ಜಿ20 ಸಚಿವರ ಸಭೆಯಲ್ಲಿ ಜಂಟಿ ಹೇಳಿಕೆ ಘೋಷಣೆಯಲ್ಲಿ ಭಾಗವಹಿಸಲು ಅಡ್ಡಿಯಾಗಿದ್ದವು.

G20 Summit
ಜಿ20 ಶೃಂಗಸಭೆ

ನವದೆಹಲಿ: ಜಿ20 ಶೃಂಗಸಭೆ ಪ್ರಾರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿರುವಾಗಲೇ, ಯುರೋಪಿಯನ್​ ಯೂನಿಯನ್​ನ ಹಿರಿಯ ಅಧಿಕಾರಿಯೊಬ್ಬರು, ಉಕ್ರೇನ್​ ಯುದ್ಧದ ಕುರಿತು ಭಾರತ ರಚಿಸಿರುವ ಪಠ್ಯದ ಕರಡು ಜಿ7 ಹಾಗೂ ಯುರೋಪಿಯನ್​ ಯೂನಿಯನ್​ ಸದಸ್ಯರು ಅಂಗೀಕರಿಸುವಷ್ಟು ಇಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಯುರೋಪಿಯನ್​ ಯೂನಿಯನ್​ ಅಧಿಕಾರಿ, ಸೆಪ್ಟೆಂಬರ್​ 10ರಂದು ನಡೆಯಲಿರುವ ಶೃಂಗಸಭೆಯ ಕೊನೆಯಲ್ಲಿ ರಾಜಿ ಕುರಿತು ಬಿಡುಗಡೆ ಮಾಡಲಿರುವ ಜಂಟಿ ಹೇಳಿಕೆಯ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ ನಾನು ಆಶಾವಾದಿಯಲ್ಲ ಎನ್ನುವ ಹೇಳಿಕೆಯನ್ನೂ ಈ ಅಧಿಕಾರಿ ನೀಡಿದ್ದಾರೆ.

ವಿಶೇಷವಾಗಿ ಉಕ್ರೇನ್​ನಂತಹ ಭೌಗೋಳಿಕ ರಾಜಕೀಯ ವಿಷಯಗಳ ಕುರಿತು ಬಹಳ ಕಠಿಣ ಮಾತುಕತೆಗಳು ನಡೆದಿವೆ ಎಂದು ಹೇಳಿದ ಅಧಿಕಾರಿ, ಸದ್ಯ ಭಾರತ ಪ್ರಸ್ತುತ ಪಡಿಸಿರುವ ಕರಡು ಸಾಕಾಗುವುದಿಲ್ಲ. ಜಿ7, ಯುರೋಪಿಯನ್​ ಹಾಗೂ ಅದರ ಸದಸ್ಯ ರಾಷ್ಟ್ರಗಳು ಈ ಕರಡು ಸಾಕಷ್ಟು ಇಲ್ಲ ಎನ್ನುವ ಅಭಿಪ್ರಾಯಪಟ್ಟಿವೆ ಎಂದು ವಿವರಿಸಿದರು.

ಜಂಟಿ ಹೇಳಿಕೆ ಇನ್ನೂ ಸಾಧ್ಯವೇ ಎನ್ನುವ ಪ್ರಶ್ನೆಗೆ ಇಯು ಅಧಿಕಾರಿ ಅನಿಶ್ಚಿತತೆ ವ್ಯಕ್ತಪಡಿಸಿದ್ದಾರೆ. ನಾವು ನೀಡುವ ಪೀಠದ ಹೇಳಿಕೆ ಒಳ್ಳೆಯದಾಗಿರದೇ ಇರಬಹುದು, ಆದರೆ ಅದು ಫಲಿತಾಂಶವಾಗಿರಬಹುದು. 'ಉಕ್ರೇನ್​ ಸಂಘರ್ಷವನ್ನು ಉಲ್ಲೇಖಿಸಲು ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಬಳಸಲಾದ ಹೇಳಿಕೆಯನ್ನು ದುರ್ಬಲಗೊಳಿಸುವಂತಹ ಯಾವುದೇ ಭಾಷೆಯನ್ನು ಪಶ್ಚಿಮದ ರಾಷ್ಟ್ರಗಳು ಸ್ವೀಕರಿಸುವುದಿಲ್ಲ' ಎಂದು ಮತ್ತೆ ಒತ್ತಿ ಹೇಳಿದ್ದಾರೆ.

ಇದು ಕೇವಲ ಆರ್ಥಿಕತೆ ಮಾತ್ರವಲ್ಲ, ರಾಜಕೀಯ ಬೌಗೋಳಿಕ ವಿಷಯಗಳ ಮೇಲೂ ಚರ್ಚೆ:ಶೃಂಗಸಭೆಯಲ್ಲಿ ನೀವು ಕೇವಲ ಆರ್ಥಿಕ ವಿಷಯಗಳನ್ನು ಪ್ರಸ್ತುತ ಪಡಿಸುತ್ತೀರಿ ಎಂದುಕೊಂಡಿದ್ದರೆ ಅದು ಭ್ರಮೆ. ವಿವಿಧ ರಾಷ್ಟ್ರಗಳ ನಾಯಕರು ಸಭೆಯಲ್ಲಿರುವಾಗ ಅಲ್ಲಿ ಭೌಗೋಳಿಕ ರಾಜಕೀಯ ವಿಷಯವೇ ಹೆಚ್ಚು ಚರ್ಚಿತವಾಗುತ್ತದೆ. ಅದರಲ್ಲೀ ಈ ಬಾರಿಯ ಶೃಂಗಸಭೆಯಲ್ಲಿ ಉಕ್ರೇನ್​ ಸಂಘರ್ಷವೇ ತನ್ನ ಪಾರುಪತ್ಯ ಸಾಧಿಸುತ್ತದೆ ಎಂದು ತಿಳಿಸಿದ್ದಾರೆ.

ಉಕ್ರೇನ್​ ಸಂಘರ್ಷದ ಕುರಿತು ರಷ್ಯಾ ಹಾಗೂ ಚೀನಾದ ಆಕ್ಷೇಪಣೆಗಳು ಪ್ರತಿ ಜಿ20 ಸಚಿವರ ಸಭೆಯ ಜಂಟಿ ಘೋಷಣೆಗಳಲ್ಲಿ ಭಾರತ ಭಾಗವಹಿಸಲು ಅಡ್ಡಿಯಾಗಿತ್ತು. ಕಳೆದ ವರ್ಷ ಬಾಲಿಯಲ್ಲಿ ನಡೆದ ಜಿ20 ಸಭೆಯಲ್ಲಿ ಕೊನೆಯ ಬಾರಿಗೆ ಜಂಟಿ ಹೇಳಿಕೆಯನ್ನು ನೀಡಲಾಗಿತ್ತು. ಅಂದಿನಿಂದ ಭಾರತ ಪ್ರತಿ ಮಂತ್ರಿಗಳ ಸಭೆಯ ಅಂತ್ಯದಲ್ಲಿ ಭಾರತದ ಪೀಠದ ಸಾರಾಂಶ ಹಾಗೂ ಫಲಿತಾಂಶದ ದಾಖಲೆಗಳನ್ನು ನೀಡುತ್ತಿದೆ.

ನವದೆಹಲಿಯಲ್ಲಿ ಸೆಪ್ಟೆಂಬರ್​ 9 ಹಾಗೂ 10 ರಂದು ಜಿ20 ಶೃಂಗಸಭೆ ಆಯೋಜಿಸಲು ಭಾರತ ಸಕಲ ಸಜ್ಜಾಗಿದೆ. ಅಮೆರಿಕ​ ಅಧ್ಯಕ್ಷ ಜೋ ಬೈಡೆನ್​ ಹಾಗೂ ಫ್ರೆಂಚ್​ ಅಧ್ಯಕ್ಷ ಎಮ್ಯಾನ್ಯುಯೆಲ್​ ಮ್ಯಾಕ್ರನ್​ ಅವರಂತಹ ವಿವಿಧ ವಿಶ್ವನಾಯಕರು ಪ್ರಸ್ತುತ ಇರುವ ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳ ಬಗ್ಗೆ ಚರ್ಚಿಸಲು ಒಂದೇ ವೇದಿಕೆಯಡಿ ಜೊತೆಯಾಗುತ್ತಿದ್ದಾರೆ.

ಇದನ್ನೂ ಓದಿ:ಜಿ20 ಶೃಂಗಸಭೆ: 'ವಿಶ್ವವೇ ನಮ್ಮ ಕುಟುಂಬ' - ಜಗತ್ತಿಗೆ ಪ್ರಧಾನಿ ಮೋದಿ ಸಂದೇಶ

ABOUT THE AUTHOR

...view details