ಅನಂತಪುರ(ಆಂಧ್ರಪ್ರದೇಶ):ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿರುವ ಗಂಡನೊಬ್ಬ ಎರಡು ತಿಂಗಳ ಹೆಣ್ಣು ಮಗುವಿನ ಕೊಲೆ ಮಾಡಿದ್ದಾನೆ. ಈ ಅಮಾನವೀಯ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗಂ ಮಂಡಲದಲ್ಲಿ ನಡೆದಿದೆ.
ಪಾಪಿ ತಂದೆ ಎರಡು ತಿಂಗಳ ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ, ಸೆಣಬಿನ ಚೀಲದಲ್ಲಿ ಕಟ್ಟಿ ಕೆರೆಯಲ್ಲಿ ಎಸೆದಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಲ್ಲಿಕಾರ್ಜುನ್ ಮತ್ತು ಆತನ ಪತ್ನಿ ಚಿಟ್ಟೆಮ್ಮ ಎರಡು ತಿಂಗಳ ಮಗುವಿನೊಂದಿಗೆ ಕಲ್ಯಾಣದುರ್ಗದ ಆರ್ಡಿಟಿ ಆಸ್ಪತ್ರೆಗೆ ತೆರಳಿದ್ದರು. ಮಗು ಅಳುತ್ತಿದ್ದ ಕಾರಣ ಮಲ್ಲಿಕಾರ್ಜುನ್ ತನ್ನ ಮಗಳನ್ನ ತೆಗೆದುಕೊಂಡು ಹೊರಗಡೆ ಹೋಗಿದ್ದಾನೆ. ಸಂಜೆ ಆದರೂ ವಾಪಸ್ ಮನೆಗೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡಿರುವ ಆತನ ಪತ್ನಿ ಚಿಟ್ಟೆಮ್ಮ ಪೊಲೀಸರಿಗೆ ದೂರು ನೀಡಿದ್ದಾಳೆ.