ಕರ್ನಾಟಕ

karnataka

ಬುಧವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ : ಇಂದು ಈ ರಾಶಿಯವರಿಗೆ ಬಂಪರ್​​ ಆಫರ್​​​ ದಿನ!

By ETV Bharat Karnataka Team

Published : Sep 13, 2023, 5:41 AM IST

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ...

daily-horoscope-of-wednesday
ಬುಧವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ : ಇಂದು ಈ ರಾಶಿಯವರಿಗೆ ಉತ್ಪಾದಕ ದಿನ

ಇಂದಿನ ಪಂಚಾಂಗ:

ದಿನಾಂಕ :13-09-2023 , ಬುಧವಾರ

ಸಂವತ್ಸರ :ಶುಭಕೃತ್

ಆಯನ:ದಕ್ಷಿಣಾಯಣ

ಋತು:ಶರದ್​​

ಮಾಸ:ಶ್ರಾವಣ

ಪಕ್ಷ:ಕೃಷ್ಣ

ತಿಥಿ:ಚತುರ್ದಶಿ

ನಕ್ಷತ್ರ:ಮಾಘ

ಸೂರ್ಯೋದಯ:ಮುಂಜಾನೆ 06:06 ಗಂಟೆಗೆ

ಅಮೃತಕಾಲ:ಮಧ್ಯಾಹ್ನ 01:45ರಿಂದ 3:17 ಗಂಟೆ ತನಕ

ವರ್ಜ್ಯಂ :ಸಂಜೆ06:15ರಿಂದ 07:50 ಗಂಟೆವರೆಗೆ

ದುರ್ಮೂಹುರ್ತ:ಬೆಳಗ್ಗೆ 11:42 ರಿಂದ 12: 30ಗಂಟೆವರೆಗೆ

ರಾಹುಕಾಲ:ಮಧ್ಯಾಹ್ನ 12:13ರಿಂದ 1:45 ಗಂಟೆವರೆಗೆ

ಸೂರ್ಯಾಸ್ತ:ಸಂಜೆ06:21 ಗಂಟೆಗೆ

ಇಂದಿನ ರಾಶಿ ಭವಿಷ್ಯ :

ಮೇಷ :ನಿಮಗೆ ಮಕ್ಕಳಿದ್ದರೆ ಅವರನ್ನು ನೀವು ಇಂದು ಹಾಳು ಮಾಡುತ್ತೀರಿ. ಇಂತಹ ದಿನಗಳಲ್ಲಿ ನೀವು ಕಠಿಣ ಪರಿಶ್ರಮ ಪಡಬೇಕು. ನೀವು ಬಾಕಿ ಇರುವ ಕೆಲಸಗಳನ್ನೂ ಮುಗಿಸುತ್ತೀರಿ, ಮತ್ತು ವೈದ್ಯ ವೃತ್ತಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಇರುವವರಿಗೆ ಉತ್ಪಾದಕ ದಿನವಾಗಿದೆ.

ವೃಷಭ :ಇಂದು ನೀವು ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತೀರಿ. ನಿಮ್ಮ ಕೆಲಸದ ಶೈಲಿ, ನೀವು ವಿಷಯಗಳನ್ನು ನಿರ್ವಹಿಸುವ ವಿಧಾನ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳನ್ನು ವಿಸ್ಮಯ ಮತ್ತು ಆಶ್ಚರ್ಯಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರಾಗುತ್ತಾರೆ ಮತ್ತು ಪ್ರೇರೇಪಣೆ ಹೊಂದುತ್ತಾರೆ. ಅವರು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಂಡು ಬೆಂಬಲಿಸಿ ಮತ್ತು ಸಹಾಯ ಮಾಡುತ್ತಾರೆ. ನೀವು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ವೇಗವಾಗಿ ಪ್ರಗತಿ ಸಾಧಿಸುತ್ತದೆ. ಇದು ಇಂದು ಅತ್ಯಂತ ಫಲದಾಯಕವಾಗುತ್ತದೆ.

ಮಿಥುನ :ಇಂದು, ವಿಶೇಷ ವ್ಯಕ್ತಿಯೊಬ್ಬರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕ ಏರ್ಪಡುತ್ತದೆ. ಆದ್ದರಿಂದ ನೀವು ದಿನದ ಬಹುತೇಕ ಸಮಯ ಸಂತೃಪ್ತ ಹಾಗೂ ಉತ್ಸಾಹದಲ್ಲಿರುತ್ತೀರಿ. ಆದರೂ, ಕೆಲ ಸಣ್ಣ ಸಮಸ್ಯೆಗಳು ನಿಮ್ಮ ಸಂತೋಷದ ಮನಸ್ಥಿತಿಯನ್ನು ದಿನದ ನಂತರ ಹಾಳು ಮಾಡಬಹುದು. ಹಗುರ ಮನಸ್ಸಿನಿಂದ ಆತಂಕ ನಿವಾರಿಸಿ.

ಕರ್ಕಾಟಕ :ಇಂದು ನಿಮಗೆ ಉತ್ಪಾದಕ ದಿನವಾಗಿರುವ ಸಾಧ್ಯತೆ ಇಲ್ಲ. ಯಾವುದೇ ಬಗೆಯ ಪ್ರಮುಖ ನಷ್ಟವಿಲ್ಲದಿದ್ದರೂ, ನೀವು ಕಳೆದುಕೊಂಡ ಭಾವನೆ ಹೊಂದಬಹುದು ಮತ್ತು ಏಕಾಂಗಿಯಾಗಿ ಇರಲು ಬಯಸಬಹುದು. ನಿಮಗೆ ಮಕ್ಕಳಿದ್ದರೆ, ನೀವು ನಿಮ್ಮ ಮಕ್ಕಳೊಂದಿಗೆ ಅವರು ಮನೆಯಲ್ಲಿಲ್ಲದೆ ಹೊರಗಡೆ ಹೋದಾಗ ಶೂನ್ಯತೆಯ ಭಾವನೆ ಅನುಭವಿಸಬಹುದು.

ಸಿಂಹ :ಇಂದು ನಿಮ್ಮ ನಿರ್ಧಾರಗಳು ಸರಿಯಾಗಿರುವುದು ಮಾತ್ರವಲ್ಲದೆ ದೃಢ ಮತ್ತು ಅಚಲವಾಗಿರಬೇಕು. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ವಿಷಯಗಳು ಎಂದಿನಂತೆ ಮುಂದುವರೆಯುತ್ತವೆ. ಆದಾಗ್ಯೂ, ನೀವು ಇಂದು ಕೆಲಸಕ್ಕೆ ಹೆಚ್ಚು ಗಮನ ನೀಡುತ್ತೀರಿ. ವೈಯಕ್ತಿಕ ಬಾಂಧವ್ಯಗಳಲ್ಲಿ, ಕೆಲ ಸಣ್ಣ ವಾದವಿವಾದಗಳು ಉಂಟಾಗಬಹುದು. ಅವು ದೊಡ್ಡ ಸಂಘರ್ಷಗಳಾಗದೆ ನೋಡಿಕೊಳ್ಳಿ.

ಕನ್ಯಾ :ನೀವು ಇಂದು ಕೌಟುಂಬಿಕ ವಿಷಯಗಳ ಪ್ರಾಮುಖ್ಯತೆಯನ್ನು ಅರಿಯುತ್ತೀರಿ. ಸಂಧಾನ ಮಾತುಕತೆಗಳ ವಿಷಯಕ್ಕೆ ಬಂದರೆ ನಿಮಗೆ ಮಹತ್ತರ ಕೌಶಲ್ಯಗಳಿವೆ, ಮತ್ತು ನೀವು ವಿವಾದಗಳನ್ನು ಇತ್ಯರ್ಥಪಡಿಸಲು ಬಳಸುತ್ತೀರಿ. ನೀವು ಜೀವನದ ಪಾಠಗಳನ್ನು ಕಲಿತಿದ್ದೀರಿ ಮತ್ತು ವಿರೋಧ ಪ್ರಗತಿಗೆ ದಾರಿಯಾಗುತ್ತದೆ ಎಂದು ದೃಢವಾಗಿ ನಂಬುತ್ತೀರಿ.

ತುಲಾ :ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಒಳ್ಳೆಯ ಸಮಯ ಅನುಭವಿಸುತ್ತೀರಿ ಮತ್ತು ಅವರೊಂದಿಗೆ ಆನಂದ ಹೊಂದುತ್ತಿರಿ. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಪಿಕ್ ನಿಕ್ ಅಥವಾ ಪಾರ್ಟಿಯ ಮೂಲಕ ಅವರೊಂದಿಗೆ ದಿನ ಕಳೆಯುತ್ತೀರಿ. ನೀವು ಧಾರ್ಮಿಕ ತಾಣ ಅಥವಾ ದೇವಾಲಯಕ್ಕೆ ಪ್ರವಾಸ ಹೋಗಬಹುದು, ಅದು ನಿಮ್ಮ ಮನಸ್ಸು ಹಾಗೂ ಆಲೋಚನೆಗಳನ್ನು ಉನ್ನತಗೊಳಿಸುತ್ತದೆ.

ವೃಶ್ಚಿಕ :ನೀವು ಇಲ್ಲಿಯವರೆಗೂ ಬಹಳ ಕಾಲದಿಂದ ಕೆಲವು ವಿಷಯಗಳನ್ನು ಉಳಿಸಿಕೊಂಡಿದ್ದೀರಿ ಮತ್ತು ಇಂದು ಅವೆಲ್ಲವನ್ನು ಹೊರಗೆ ಚೆಲ್ಲುವ ಕಾಲ. ಇದು ನಿಮ್ಮ ಆರೋಗ್ಯದ ಮೇಲೆ ಅಪಾರ ಒತ್ತಡ ಉಂಟು ಮಾಡುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆದರೆ ಅದು ಕೊಂಚ ನಿರಾಳತೆ ನೀಡುತ್ತದೆ.

ಧನು :ದಿಢೀರನೆ ನೀವು ಉಭಯಹಸ್ತಗಳನ್ನು ಬಳಸಬಲ್ಲವರಾಗಿದ್ದರೂ ಮತ್ತು ಇಂದು ಬಹುಕಾರ್ಯಗಳನ್ನು ಯೋಜಿಸುತ್ತೀರಿ. ನಿಮ್ಮ ಪ್ರವೃತ್ತಿಗಳು ನಿಮಗೆ ಇಂದು ಮಾರ್ಗದರ್ಶನ ನೀಡುತ್ತವೆ. ಅವುಗಳಲ್ಲಿ ವಿಶ್ವಾಸವಿರಿಸಿ ಮತ್ತು ಮುನ್ನಡೆಯಿರಿ. ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಆದರೆ, ಯಾರಿಗೆ ಸುಲಭದ ಮಾರ್ಗ ಬೇಕಾಗಿದೆ ಅಲ್ಲವೇ?

ಮಕರ :ನೀವು `ಆರೋಗ್ಯವೇ ಭಾಗ್ಯ’ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇರಿಸಿದ್ದೀರಿ. ನೀವು ಇಲ್ಲಿಯವರೆಗೂ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದೀರಿ. ಮತ್ತು ಅದು ಇಂದು ವಿಷಯವೂ ಅಲ್ಲ. ಪ್ರಸ್ತುತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ದೂರದ ವಿಷಯ ಎನ್ನಿಸುತ್ತದೆ. ಆದರೆ ನೀವು ಅದನ್ನು ಪೂರ್ಣಗೊಳಿಸುತ್ತೀರಿ. ಸಕಾಲಕ್ಕೆ ಕೆಲಸ ಪೂರ್ಣಗೊಳಿಸದೇ ಇರುವುದರಿಂದ ನಿಮ್ಮ ಬಾಸ್​ ನಿಮ್ಮ ಕುರಿತು ಅಸಮಾಧಾನ ಪಟ್ಟುಕೊಳ್ಳುತ್ತಾರೆ. ಇಂದು ನೀವು ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತೀರಿ.

ಕುಂಭ :ಇದು ಕುಟುಂಬದ ಸಮಯ, ಮತ್ತು ನಿಮ್ಮ ಪ್ರೀತಿಪಾತ್ರರು ಅತ್ಯಂತ ಸಂತೋಷಗೊಳ್ಳುತ್ತಾರೆ. ನೀವು ಅವರನ್ನು ಖುಷಿಯಿಂದ ಇರಿಸುತ್ತೀರಿ. ಅವರು ನಗುವಂತೆ ಮಾಡಲು ತಮಾಷೆಯ ಮುಖಗಳನ್ನೂ ಹೊರತೆಗೆಯುತ್ತೀರಿ. ನಿಮ್ಮ ಪ್ರೀತಿ ಮತ್ತು ಮಮತೆ ನಿಜಕ್ಕೂ ಪ್ರತಿಫಲ ನೀಡುತ್ತದೆ, ಮತ್ತು ನಿಮಗೆ ಒಂದಕ್ಕಿಂತ ಹಲವು ವಿಧಗಳಲ್ಲಿ ಹಿಂದಿರುಗುತ್ತದೆ. ನೀವು ಕುಟುಂಬಕ್ಕೆ ಮುಡಿಪಾಗಿರುವುದರಿಂದ ನಿಮ್ಮ ಬೆನ್ನು ತಟ್ಟಲೇಬೇಕು.

ಮೀನ :ನೀರಿನ ಮೇಲೆ ತೇಲುವುದಕ್ಕೆ ಈಜಾಡುವಷ್ಟೇ ಪ್ರಯತ್ನ ಅಗತ್ಯವಾಗುತ್ತದೆ. ಇದು ಗೊಂದಲ ಎನಿಸಬಹುದು, ನಿಮಗೆ ಅದರ ಅರ್ಥ ಎಂದರೆ ಸತತವಾಗಿ ಮುನ್ನಡೆಯಲು ನಿಮ್ಮನ್ನು ನೀವು ಮರು ಅನ್ವೇಷಿಸಿಕೊಳ್ಳಬೇಕು. ನಿಮ್ಮ ವೃತ್ತಿಯಲ್ಲಿ ನೀವು ಬೆಳಗಬೇಕಾದರೆ ಅದು ನಿಮ್ಮ ತೀವ್ರ ಆಕಾಂಕ್ಷೆಯೂ ಆಗಿರಬೇಕು.

ABOUT THE AUTHOR

...view details