ರೈತರ ವಿವಿಧ ಸಮಸ್ಯೆ ಬಗೆಹರಿಸುವಂತೆ ಸಿಎಂ ಸಿದ್ದರಾಮಯ್ಯಗೆ ನೇಗಿಲಯೋಗಿ ರೈತಸೇವಾ ಸಂಘ ಆಗ್ರಹ

By ETV Bharat Karnataka Team

Published : Feb 12, 2024, 4:00 PM IST

thumbnail

ಬೆಳಗಾವಿ: ರೈತ ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಅವರ ಗರಡಿಯಲ್ಲಿ ಬೆಳೆದು ಬಂದಿರುವ ಸಿಎಂ ಸಿದ್ದರಾಮಯ್ಯ ಅವರು ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೇಗಿಲಯೋಗಿ ರೈತಸೇವಾ ಸಂಘ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು.  

ಕುಡಿಯುವ ನೀರು, ರಸ್ತೆ, ಅತಿವೃಷ್ಟಿ, ಅನಾವೃಷ್ಟಿ ಸೇರಿ‌ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ರೈತಸೇವಾ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ, 210 ಗ್ರಾಮ 51 ಗ್ರಾಮಪಂಚಾಯಿತಿಗಳನ್ನು ಹೊಂದಿರುವ ಖಾನಾಪುರ ತಾಲೂಕು ವಿವಿಧ ಸಮಸ್ಯೆಗಳಿಂದ ನರಳುತ್ತಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ರಸ್ತೆಗಳು ಹದಗೆಟ್ಟಿದ್ದರಿಂದ ಬಸ್ ವ್ಯವಸ್ಥೆಯೂ ತಾಲೂಕಿನಾದ್ಯಂತ ಸರಿಯಾಗಿಲ್ಲ. ಕೂಡಲೇ ತಾಲೂಕಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

''ನಾವು ಹೋರಾಟಗಾರರು ಚಾಟಿ ಏಟು ಬೀಸಿದಾಗ ಮಾತ್ರ ಸರ್ಕಾರ ಅಷ್ಟೋ‌ ಇಷ್ಟು ರೈತರಿಗೆ ಅನುಕೂಲ ಆಗುವ ಕೆಲಸ ಮಾಡುತ್ತದೆ. ಬೆಳೆ ವಿಮೆ ವಿತರಣೆ ತಾರತಮ್ಯ ಹೋಗಲಾಡಿಸಬೇಕು. ರೈತರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ‌ ನೀಡಬೇಕು. ತೆಲಂಗಾಣ, ಹರಿಯಾಣ, ಮಧ್ಯಪ್ರದೇಶದಲ್ಲಿ ಇರುವಂತೆ ಎಂ.ಎಸ್‌.ಪಿ. ದರ ರಾಜ್ಯದಲ್ಲೂ ನಿಗದಿ ಪಡಿಸಬೇಕು. ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸ ತಡೆಯಬೇಕು'' ಎಂದು‌ ರವಿ ಪಾಟೀಲ ಆಗ್ರಹಿಸಿದರು.  

ಇದನ್ನೂ ಓದಿ: ರಾಜ್ಯದ ರೈತರನ್ನು ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಖಂಡನೀಯ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.