ETV Bharat / technology

ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್​​ ಭವಿಷ್ಯದ ಉದ್ಯೋಗ ಭರವಸೆಗಳು

author img

By ETV Bharat Karnataka Team

Published : Feb 24, 2024, 3:26 PM IST

ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್​​ ಭವಿಷ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉದ್ಯೋಗ ಅವಕಾಶದ ಹಾದಿ ಹುಡುಕಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

engineers-should-look-jobs-in-artificial-intelligence-and-data-science
engineers-should-look-jobs-in-artificial-intelligence-and-data-science

ಹೈದರಾಬಾದ್​: ಇಂಜಿನಿಯರಿಂಗ್​ ಪದವಿ ಮುಗಿದಾಕ್ಷಣ ಉದ್ಯೋಗ ಅವಕಾಶ ಪಡೆಯಬೇಕು ಎಂದಿದ್ದರೆ, ಪದವಿ ಹಂತದಲ್ಲೇ ಕ್ರಿಯಾತ್ಮಕ ಆಲೋಚನೆ ಬೆಳೆಸಿಕೊಳ್ಳಿ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್​​ ವಿಷಯ ಕುರಿತು ಅರಿಯಿರಿ ಎಂದು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುತ್ತಿರುವ ತಜ್ಞರು ಸಲಹೆ ನೀಡಿದ್ದಾರೆ. ತೆಲಂಗಾಣದಲ್ಲಿ ಪ್ರತಿ ವರ್ಷ 1.10 ಲಕ್ಷ ಮಂದಿ ಇಂಜಿನಿಯರಿಂಗ್​ ಪದವಿಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಶೇ 10ರಷ್ಟು ಮಂದಿ ಕೂಡ ಉದ್ಯೋಗ ಪಡೆಯುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಸ್ಟಾರ್ಟ್​ಅಪ್​ಗಳನ್ನು ಸ್ಥಾಪಿಸಲು ಮುಂದಾಗುತ್ತಿದ್ದಾರೆ ಎಂದರು.

ಅಮೆಜಾನ್​ನಿಂದ ಆರ್ಡರ್​ ಮಾಡುವ ಸ್ಮಾರ್ಟ್​ ಫ್ರಿಡ್ಜ್​​: ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್​ ಮತ್ತು ಆಟೋಮಷಿನ್​​ ವಿಚಾರಗಳು ನಿರೀಕ್ಷಿತ ವೇಗಕ್ಕಿಂತ ಹೆಚ್ಚು ಮುಂದುವರೆಯುತ್ತಿವೆ. ಕೆಲವು ತಿಂಗಳ ಹಿಂದೆ ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಯುರೋಪ್​ನಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿದ ಸ್ಮಾರ್ಟ್​ ಫ್ರಿಡ್ಜ್​​ನ ಉತ್ಪನ್ನವನ್ನು ಎಲೆಕ್ಟ್ರಾನಿಕ್​ ಉತ್ಪಾದನ ಕಂಪನಿಯೊಂದು ಪರಿಚಯಿಸಿತ್ತು. ಇದರಲ್ಲಿ ಯಾವ ರೀತಿ ತಾಂತ್ರಿಕ ಸಾಧನವನ್ನು ಅಳವಡಿಸಲಾಗಿತ್ತು ಎಂದರೆ, ಇದು ಯಾವ ದಿನ ಯಾವ ತರಕಾರಿಯನ್ನು ಬೇಯಿಸಬೇಕು ಎಂದು ಸೂಚನೆ ನೀಡುತ್ತಿತ್ತು. ಅಷ್ಟೇ ಅಲ್ಲದೇ, ಕಾರ್ಯ ನಿರ್ವಹಿಸುವಾಗಲೇ ಇದು ಅಮೆಜಾನ್​ನಿಂದ ಹಣ್ಣು ಮತ್ತಿತರ ಉತ್ಪನ್ನಗಳನ್ನು ಆರ್ಡರ್​ ಮಾಡುತ್ತಿತ್ತು. ಇದೇ ರೀತಿಯ ಐಡಿಯಾ ಮತ್ತು ಸಾಫ್ಟ್​​ವೇರ್​​ಗಳು ಇತರೆ ಕ್ಷೇತ್ರಕ್ಕೂ ಬೇಕಾಗಿವೆ. ಈ ಎಲ್ಲಾ ಬದಲಾವಣೆಗಳ ಹೊರತಾಗಿ ಅನೇಕ ವಿದೇಶಿ ಜೀವನಶೈಲಿಗಳು ಇಂಟರ್​ನೆಟ್​​ ಮೂಲಕ ನಮ್ಮನ್ನು ಇದೀಗ ತಲುಪುತ್ತಿದೆ ಎಂದರು.

ತ್ವರಿತ ಸುಧಾರಣೆ: ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಕಲಿಕೆಯನ್ನು ನಡೆಸಿದ್ದಾರೆ. ಮೌಲ್ಯಮಾಪನದ ಎಲ್ಲಾ ವಿಧಾನಗಳನ್ನು ಬದಲಾಯಿಸುವ ಸುಧಾರಣೆಗಳು ಇರಬೇಕು. ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳು ಸಾಂಪ್ರದಾಯಿಕ ಕೋರ್ಸ್​​ಗಳಿಂದ ನೌಕರಿ ಮತ್ತು ಉದ್ಯೋಗ ಅವಕಾಶಗಳು ಲಭ್ಯವಿದೆಯಾ ಎಂಬುದನ್ನು ವಿಶ್ಲೇಷಣೆ ಮಾಡಬೇಕು ಎಂದು ಹೈದರಾಬಾದ್​ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರೊ ನವೀನ್​ ಕುಮಾರ್ ಸಲಹೆಯನ್ನು ಯುವ ಜನತೆಗೆ​ ನೀಡಿದ್ದಾರೆ.

ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಂತೆ ಉದ್ಯೋಗ ನೀಡಲು ಕೈಗಾರಿಕೆಗಳೊಂದಿಗೆ ವಿಶ್ವವಿದ್ಯಾಲಯಗಳ ನಡುವೆ ಸಂಬಂಧವನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ಐಟಿ ಕಂಪನಿಗಳೊಂದಿಗೆ ಮತ್ತು ಕೈಗಾರಿಕೆಗಳೊಂದಿಗೆ ಒಪ್ಪಂದ ಆಗಬೇಕು. ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್​​ ನೀಡುವಂತೆ ನಾವು ಕೇಳಬೇಕು ಎಂದು ಜೆಎನ್​ಟಿಯುನ ಪ್ರೊ ಸುಪ್ರೀತಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ: ಮಾನವಕುಲಕ್ಕೆ ಅಪಾಯ ಮತ್ತು ಅನುಕೂಲಗಳು

ಹೈದರಾಬಾದ್​: ಇಂಜಿನಿಯರಿಂಗ್​ ಪದವಿ ಮುಗಿದಾಕ್ಷಣ ಉದ್ಯೋಗ ಅವಕಾಶ ಪಡೆಯಬೇಕು ಎಂದಿದ್ದರೆ, ಪದವಿ ಹಂತದಲ್ಲೇ ಕ್ರಿಯಾತ್ಮಕ ಆಲೋಚನೆ ಬೆಳೆಸಿಕೊಳ್ಳಿ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್​​ ವಿಷಯ ಕುರಿತು ಅರಿಯಿರಿ ಎಂದು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುತ್ತಿರುವ ತಜ್ಞರು ಸಲಹೆ ನೀಡಿದ್ದಾರೆ. ತೆಲಂಗಾಣದಲ್ಲಿ ಪ್ರತಿ ವರ್ಷ 1.10 ಲಕ್ಷ ಮಂದಿ ಇಂಜಿನಿಯರಿಂಗ್​ ಪದವಿಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಶೇ 10ರಷ್ಟು ಮಂದಿ ಕೂಡ ಉದ್ಯೋಗ ಪಡೆಯುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಸ್ಟಾರ್ಟ್​ಅಪ್​ಗಳನ್ನು ಸ್ಥಾಪಿಸಲು ಮುಂದಾಗುತ್ತಿದ್ದಾರೆ ಎಂದರು.

ಅಮೆಜಾನ್​ನಿಂದ ಆರ್ಡರ್​ ಮಾಡುವ ಸ್ಮಾರ್ಟ್​ ಫ್ರಿಡ್ಜ್​​: ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್​ ಮತ್ತು ಆಟೋಮಷಿನ್​​ ವಿಚಾರಗಳು ನಿರೀಕ್ಷಿತ ವೇಗಕ್ಕಿಂತ ಹೆಚ್ಚು ಮುಂದುವರೆಯುತ್ತಿವೆ. ಕೆಲವು ತಿಂಗಳ ಹಿಂದೆ ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಯುರೋಪ್​ನಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿದ ಸ್ಮಾರ್ಟ್​ ಫ್ರಿಡ್ಜ್​​ನ ಉತ್ಪನ್ನವನ್ನು ಎಲೆಕ್ಟ್ರಾನಿಕ್​ ಉತ್ಪಾದನ ಕಂಪನಿಯೊಂದು ಪರಿಚಯಿಸಿತ್ತು. ಇದರಲ್ಲಿ ಯಾವ ರೀತಿ ತಾಂತ್ರಿಕ ಸಾಧನವನ್ನು ಅಳವಡಿಸಲಾಗಿತ್ತು ಎಂದರೆ, ಇದು ಯಾವ ದಿನ ಯಾವ ತರಕಾರಿಯನ್ನು ಬೇಯಿಸಬೇಕು ಎಂದು ಸೂಚನೆ ನೀಡುತ್ತಿತ್ತು. ಅಷ್ಟೇ ಅಲ್ಲದೇ, ಕಾರ್ಯ ನಿರ್ವಹಿಸುವಾಗಲೇ ಇದು ಅಮೆಜಾನ್​ನಿಂದ ಹಣ್ಣು ಮತ್ತಿತರ ಉತ್ಪನ್ನಗಳನ್ನು ಆರ್ಡರ್​ ಮಾಡುತ್ತಿತ್ತು. ಇದೇ ರೀತಿಯ ಐಡಿಯಾ ಮತ್ತು ಸಾಫ್ಟ್​​ವೇರ್​​ಗಳು ಇತರೆ ಕ್ಷೇತ್ರಕ್ಕೂ ಬೇಕಾಗಿವೆ. ಈ ಎಲ್ಲಾ ಬದಲಾವಣೆಗಳ ಹೊರತಾಗಿ ಅನೇಕ ವಿದೇಶಿ ಜೀವನಶೈಲಿಗಳು ಇಂಟರ್​ನೆಟ್​​ ಮೂಲಕ ನಮ್ಮನ್ನು ಇದೀಗ ತಲುಪುತ್ತಿದೆ ಎಂದರು.

ತ್ವರಿತ ಸುಧಾರಣೆ: ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಕಲಿಕೆಯನ್ನು ನಡೆಸಿದ್ದಾರೆ. ಮೌಲ್ಯಮಾಪನದ ಎಲ್ಲಾ ವಿಧಾನಗಳನ್ನು ಬದಲಾಯಿಸುವ ಸುಧಾರಣೆಗಳು ಇರಬೇಕು. ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳು ಸಾಂಪ್ರದಾಯಿಕ ಕೋರ್ಸ್​​ಗಳಿಂದ ನೌಕರಿ ಮತ್ತು ಉದ್ಯೋಗ ಅವಕಾಶಗಳು ಲಭ್ಯವಿದೆಯಾ ಎಂಬುದನ್ನು ವಿಶ್ಲೇಷಣೆ ಮಾಡಬೇಕು ಎಂದು ಹೈದರಾಬಾದ್​ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರೊ ನವೀನ್​ ಕುಮಾರ್ ಸಲಹೆಯನ್ನು ಯುವ ಜನತೆಗೆ​ ನೀಡಿದ್ದಾರೆ.

ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಂತೆ ಉದ್ಯೋಗ ನೀಡಲು ಕೈಗಾರಿಕೆಗಳೊಂದಿಗೆ ವಿಶ್ವವಿದ್ಯಾಲಯಗಳ ನಡುವೆ ಸಂಬಂಧವನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ಐಟಿ ಕಂಪನಿಗಳೊಂದಿಗೆ ಮತ್ತು ಕೈಗಾರಿಕೆಗಳೊಂದಿಗೆ ಒಪ್ಪಂದ ಆಗಬೇಕು. ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್​​ ನೀಡುವಂತೆ ನಾವು ಕೇಳಬೇಕು ಎಂದು ಜೆಎನ್​ಟಿಯುನ ಪ್ರೊ ಸುಪ್ರೀತಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ: ಮಾನವಕುಲಕ್ಕೆ ಅಪಾಯ ಮತ್ತು ಅನುಕೂಲಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.