ETV Bharat / state

ಕೈ ತಪ್ಪಿದ ಬಿಜೆಪಿ ಟಿಕೆಟ್​: ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಸ್ವಾಭಿಮಾನಿ ಸಮಾವೇಶ - MP SANGANNA KARADI

author img

By ETV Bharat Karnataka Team

Published : Mar 21, 2024, 1:18 PM IST

Updated : Mar 21, 2024, 3:54 PM IST

ಕೊಪ್ಪಳದ ಶಿವಶಾಂತ‌ಮಂಗಲ ಭವನದಲ್ಲಿ ಸಂಸದ ಸಂಗಣ್ಣ ಕರಡಿ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಂಡಿದ್ದಾರೆ.

ಸಂಸದ ಸಂಗಣ್ಣ ಕರಡಿ
ಸಂಸದ ಸಂಗಣ್ಣ ಕರಡಿ

ಸಂಸದ ಸಂಗಣ್ಣ ಕರಡಿ ಮಾಹಿತಿ

ಕೊಪ್ಪಳ: ಹಾಲಿ ಸಂಸದ ಸಂಗಣ್ಣ ಕರಡಿಯವರಿಗೆ ಕೊಪ್ಪಳ ಲೋಕಸಭಾ ಟಿಕೆಟ್​ ಕೈ ತಪ್ಪಿದ್ದು ಕೊಪ್ಪಳ ಬಿಜೆಪಿಯಲ್ಲಿ ಬಂಡಾಯದ ಗಾಳಿ ಬೀಸಿದೆ. ಕೊಪ್ಪಳದ ಶಿವಶಾಂತ‌ಮಂಗಲ ಭವನದಲ್ಲಿ ಗುರುವಾರ ಸಂಸದ ಸಂಗಣ್ಣ ಕರಡಿ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಂಡಿದ್ದಾರೆ.

ಈ ಸಮಾವೇಶದ ಉದ್ದೇಶ ಕುರಿತು ಸಂಸದ ಸಂಗಣ್ಣ ಕರಡಿ ಮಾಹಿತಿ ನೀಡಿದ್ದು, 'ಸಮಾವೇಶಕ್ಕೆ ಒಟ್ಟು 8 ವಿಧಾನಸಭಾ ಕ್ಷೇತ್ರದ ಬೆಂಬಲಿಗರು ಆಗಮಿಸುತ್ತಿದ್ದಾರೆ. ನನಗೆ ಟಿಕೆಟ್​ ತಪ್ಪಿರುವ ಬಗ್ಗೆ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಾವೇಶದಲ್ಲಿ ಬೆಂಬಲಿಗರು ನೀಡುವ ಸಲಹೆ ಪಡೆಯುತ್ತೇನೆ. ಬೆಂಬಲಿಗರ ಸಭೆಯಲ್ಲಿ ಬರುವ ಅಭಿಪ್ರಾಯ ಕ್ರೋಢೀಕರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಹಾಗೇ, ನಿನ್ನೆಯಿಂದ ಬಿಜೆಪಿಯ ರಾಜ್ಯ ನಾಯಕರಾದ ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಫೋನ್ ಮಾಡಿ ಮಾತನಾಡುತ್ತಿದ್ದಾರೆ. ಸದ್ಯ ರಾಜ್ಯದ ಟಿಕೆಟ್​ ವಂಚಿತರ ವಿಚಾರಗಳನ್ನು ಹೈಕಮಾಂಡ್​ ಗಮನಕ್ಕೆ ತರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್​ಗೆ ನಮ್ಮ ಬೆಂಬಲಿಗರು ಅಭಿಪ್ರಾಯ ತಿಳಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಹಲವು ಬಿಜೆಪಿ ಮುಖಂಡರಿಗೆ ಟಿಕೆಟ್​ ತಪ್ಪಿರುವ ಕುರಿತ ಪ್ರಶ್ನೆಗೆ ಪ್ರತ್ರಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಪ್ರತಿಕ್ರಿಯಿಸುವಷ್ಟು ದೊಡ್ಡವನಲ್ಲ. ನಾನು ಒಂದು ಪಾರ್ಲಿಮೆಂಟ್ ಕ್ಷೇತ್ರದ ಸದಸ್ಯ ಅಷ್ಟೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೆಂಬಲಿಗರ ಅಭಿಪ್ರಾಯ ಬಹಳ ಮುಖ್ಯ. ನಾನು ಪಕ್ಷೇತರವಾಗಿ ನಿಲ್ಲುವ ಕುರಿತು ಈಗಲೇ ಹೇಳುವುದಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 'ಮೋದಿ ಕಾರ್ಯಕ್ರಮಕ್ಕೆ ಸೌಜನ್ಯಕ್ಕೂ ಆಹ್ವಾನಿಸಲಿಲ್ಲ': ಬಿಎಸ್‌ವೈ ವಿರುದ್ಧ ರೇಣುಕಾಚಾರ್ಯ ಅಸಮಾಧಾನ - M P RENUKACHARYA

Last Updated : Mar 21, 2024, 3:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.