ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನದಲ್ಲಿ ಹತ್ತಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು 16 ಕೋಟಿ 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ಈ ಸ್ವತ್ತುಗಳಲ್ಲಿ 22 ಕೆಜಿ 923 ಗ್ರಾಂ ಚಿನ್ನ ಹಾಗೂ 1.33 ಕೋಟಿ ನಗದು ಸಹ ಸೇರಿದೆ. ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ವಿವಿಧೆಡೆ ದಾಳಿ ನಡೆಸಲಾಗಿದ್ದು, ಅನೇಕರ ಆಸ್ತಿ-ಪಾಸ್ತಿ ಹಾಗೂ ಬ್ಯಾಂಕ್ ಖಾತೆಗಳಲ್ಲಿರುವ ಕೆಜಿಗಟ್ಟಲೆ ಚಿನ್ನ ಮತ್ತು ನಗದನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಐಟಿ ಇಲಾಖೆ ಮಾಹಿತಿ ನೀಡಿದೆ.
ವಶಪಡಿಸಿಕೊಳ್ಳಲಾದ ಸ್ವತ್ತುಗಳ ವಿವರ:
1) ಶಂಕರಪುರಂನಲ್ಲಿ - 3.10 ಕೋಟಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನಾಭರಣ
2) ಶಾರದಾದೇವಿ ರಸ್ತೆ - 3.39 ಕೋಟಿ ಮೌಲ್ಯದ 4 ಕೆಜಿ 800 ಗ್ರಾಂ ಚಿನ್ನ
3) ಮರ್ಕೈಂಟಲ್ ಬ್ಯಾಂಕ್ ಲಾಕರ್ - 2.13 ಕೋಟಿ ಮೌಲ್ಯದ 3 ಕೆಜಿ 400 ಗ್ರಾಂ
4) ಜಯನಗರ 3ನೇ ಬ್ಲಾಕ್ - 5.33 ಕೋಟಿ ಮೌಲ್ಯದ 7 ಕೆಜಿ 598 ಗ್ರಾಂ ಚಿನ್ನ
5) ಸಾರಸ್ವತ್ ಬ್ಯಾಂಕ್, ಚಾಮರಾಜಪೇಟೆ - 84.31ಲಕ್ಷ ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನದ ಗಟ್ಟಿ
6) ಬಸವನಗುಡಿ ಅಂಚೆ ಕಚೇರಿ ಹತ್ತಿರ - 3.34 ಲಕ್ಷ ಮೌಲ್ಯದ 6.38 ಕ್ಯಾರೆಟ್ ವಜ್ರ
7) ಮಾತಾ ಶಾರದಾ ದೇವಿ ರಸ್ತೆ - 3.14 ಲಕ್ಷ ಮೌಲ್ಯದ 5.99 ಕ್ಯಾರೆಟ್ ವಜ್ರ ಪತ್ತೆ
8) ಜಯನಗರ - 6.40 ಕೋಟಿ ಮೌಲ್ಯದ 202.83 ಕ್ಯಾರೆಟ್ ವಜ್ರ ಪತ್ತೆ
9) ಬಸವನಗುಡಿ ಅಂಚೆ ಕಚೇರಿ ಸಮೀಪ - 18 ಲಕ್ಷ ರೂ ನಗದು ಪತ್ತೆ
10) ಶಂಕರಪುರಂ 3ನೇ ಕ್ರಾಸ್ ಹತ್ತಿರ - 55 ಲಕ್ಷ ರೂ ನಗದು ಪತ್ತೆ
11) ಮಾತಾ ಶಾರದಾದೇವಿ ರಸ್ತೆ ಹತ್ತಿರ - 16 ಲಕ್ಷ ನಗದು ಪತ್ತೆ
12) ಜಯನಗರ 3ನೇ ಬ್ಲಾಕ್ ಹತ್ತಿರ - 8.77 ಲಕ್ಷ ನಗದು ಪತ್ತೆ
13) ವಿ.ವಿ.ಪುರಂ ವಾಣಿವಿಲಾಸ ರಸ್ತೆ ಹತ್ತಿರ - 37 ಲಕ್ಷ ನಗದು ಪತ್ತೆ
14) ಬಸವನಗುಡಿ ಅಂಚೆ ಕಚೇರಿ ಹತ್ತಿರ - 1.29 ಕೋಟಿ ಮೌಲ್ಯದ 1 ಕೆಜಿ 800 ಗ್ರಾಂ ಚಿನ್ನ ಪತ್ತೆ