ETV Bharat / state

'ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ನಾನು ಮದುವೆಯಾಗುವುದಿಲ್ಲ'

author img

By ETV Bharat Karnataka Team

Published : Mar 21, 2024, 8:42 AM IST

Updated : Mar 21, 2024, 12:39 PM IST

ಮಾಜಿ ಸಚಿವ ಮಾಧುಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್​ ಕೈ ತಪ್ಪಿದ ನೋವು ಹೊರಹಾಕಿದರು.

ಮಾಜಿ ಸಚಿವ ಮಾಧುಸ್ವಾಮಿ
ಮಾಜಿ ಸಚಿವ ಮಾಧುಸ್ವಾಮಿ

ಮಾಜಿ ಸಚಿವ ಮಾಧುಸ್ವಾಮಿ ಹೇಳಿಕೆ

ತುಮಕೂರು: "ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ನಾನು ಮದುವೆಯಾಗುವುದಿಲ್ಲ" ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್​​ನವರು ಅಭ್ಯರ್ಥಿಯನ್ನು ಬದಲಾಯಿಸಿ ನಿಮಗೆ 'ಬಿ ಪಾರ್ಮ್' ಕೊಟ್ಟರೆ ನಿಲ್ಲುತ್ತೀರಾ ಎಂದು ಕೇಳುತ್ತಿದ್ದಾರೆ. ಆದರೆ ನಾನು ಖಂಡಿತಾ ಚುನಾವಣೆಗೆ ನಿಲ್ಲಲ್ಲ. ಬಿ ಪಾರ್ಮ್ ಅನ್ನು ಕಾಂಗ್ರೆಸ್​ನವರು ಕೊಟ್ಟರೂ ನಿಲ್ಲುವುದಿಲ್ಲ. ಬಿಜೆಪಿಯವರು ಮತ್ತೆ ಕರೆದರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅಂಥ ಮಟ್ಟಕ್ಕಿಳಿದು ರಾಜಕೀಯ ಮಾಡಲು ನನಗಿಷ್ಟ ಇಲ್ಲ. ಸೋಮಣ್ಣನವರು ಬೇಡ ನೀವೇ ನಿಲ್ಲಿ ಅಂತ ಕರೆದರೂ ನಾನು ಹೋಗಲ್ಲ. ನಾನು ಕಾಂಗ್ರೆಸ್​ ಜೊತೆ ಈ ಬಗ್ಗೆ ಚರ್ಚೆಯೇ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿದರು.

"ನಾನು ಕಾಂಗ್ರೆಸ್​ ಪಕ್ಷಕ್ಕೆ ಬರುತ್ತೇನೆ ಎಂದಾಗಲಿ, ಬರುವುದಿಲ್ಲ ಎಂದಾಗಲಿ ಹೇಳಿಲ್ಲ. ಯಾವುದೇ ಆಮಿಷಗಳಿಲ್ಲ. ಬಿಜೆಪಿಯಿಂದ ಆರ್​.ಅಶೋಕ್, ​ಜಯರಾಮ್​, ಗೋಪಾಲಯ್ಯನವರು ಮನೆಗೆ ಬಂದಿದ್ದರು. ನನಗೆ ಸಂಕಟ, ಬೇಸರ ಇರುವುದು ಯಡಿಯೂರಪ್ಪನವರ ಮೇಲೆ. ಸುಮ್ಮನೆ ಮನೆಯಲ್ಲಿದ್ದ ನನ್ನನ್ನು ಮೂರು ನಾಲ್ಕು ಸಲ ಫೋನ್​ ಮಾಡಿ ಕರೆದು ಈಗ ಟಿಕೆಟ್​ ನೀಡದೇ ಈ ರೀತಿ ಮಾಡಿದ್ದಾರೆ. ನಾನು ಯಡಿಯೂರಪ್ಪನವರಿಗೆ ಅಂತಹದ್ದೇನು ಮಾಡಿದ್ದೇನೆ?. ಮೊದಲು ನನ್ನ ಚುನಾವಣೆಗೆ ನಿಲ್ಲಲೇಬೇಕು ಎಂದು ಒತ್ತಾಯಿಸಿ ಈಗ ಇಷ್ಟು ಅವಮಾನ ಮಾಡಲು ಏನು ಕಾರಣ?".

"ಟಿಕೆಟ್​ ಹಂಚಿಕೆಯಲ್ಲಿ ಯಡಿಯೂರಪ್ಪನವರಿಗೆ ಯಾವುದೋ ಸನ್ನಿವೇಷದಿಂದ ತೊಂದರೆ ಬಂದಿರಬಹುದು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಒಂದು ಬಾರಿ ನನ್ನ ಕರೆದು ಚರ್ಚೆ ಮಾಡಬಹುದಿತ್ತಲ್ಲ?. ಇದೆಲ್ಲದರ ಸಂಕಟ ನನಗಿದೆ. ನೀವೆಲ್ಲ ಇದಕ್ಕೆ ಉತ್ತರ ಹೇ​ಳಲು ಸಾಧ್ಯವಿಲ್ಲ. ನಾನು ಯಡಿಯೂರಪ್ಪನವರು ಮಾತನಾಡಬೇಕಿತ್ತು. ಆದರೆ ಅವರಿಗೆ ಮಾತನಾಡುವಷ್ಟು ಸೌಜನ್ಯವಿಲ್ಲ. ಅಂದ ಮೇಲೆ ನೀವು ಬಂದು ಏನು ಮಾಡುತ್ತೀರಿ? ಎಂದು ನಾನು ಅಶೋಕ್​ ಅವರಿಗೆ ಮನದಟ್ಟು ಮಾಡಿದ್ದೇನೆ" ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಮತದಾನ ಮಾಡದವರು ನಿಜವಾದ ದೇಶದ್ರೋಹಿಗಳು: ನಾನಾ ಪಾಟೇಕರ್

Last Updated : Mar 21, 2024, 12:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.