ETV Bharat / state

ಪ್ಲಾಸ್ಕ್​ನಲ್ಲಿ ಚಿನ್ನ, ಬಾಟಲ್​ನಲ್ಲಿ ನಾಗರಹಾವು: ಕಸ್ಟಮ್ಸ್‌ ಕೈಗೆ ಸಿಕ್ಕಿಬಿದ್ದ ಪ್ರಯಾಣಿಕರು

author img

By ETV Bharat Karnataka Team

Published : Jan 31, 2024, 12:52 PM IST

ಪ್ಲಾಸ್ಕ್​ನಲ್ಲಿ ಅಕ್ರಮ ಚಿನ್ನ, ಬಾಟಲ್​ನಲ್ಲಿ ನಾಗರಹಾವು
ಪ್ಲಾಸ್ಕ್​ನಲ್ಲಿ ಅಕ್ರಮ ಚಿನ್ನ, ಬಾಟಲ್​ನಲ್ಲಿ ನಾಗರಹಾವು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​​​ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಇಬ್ಬರು ಪ್ರಯಾಣಿಕರ ಕಳ್ಳಾಟ ಬಯಲಿಗೆಳೆದಿದ್ದಾರೆ.

ದೇವನಹಳ್ಳಿ(ಬೆಂ.ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​​​ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ಲಾಸ್ಕ್​ನಲ್ಲಿ ಮರೆಮಾಚಿ ಚಿನ್ನ ಸಾಗಣೆ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಪ್ರಕರಣ-1: ಸೌದಿ ಅರೇಬಿಯಾದ ಜೆಡ್ಡಾ ಏರ್ಪೋಟ್​ನಿಂದ ಪ್ರಯಾಣಿಕನೊಬ್ಬ ಕೆಐಎಬಿಗೆ ಬಂದಿದ್ದ. ಕಸ್ಟಮ್ಸ್​​ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ಮಾಡಿದ್ದು, ಚಿನ್ನವನ್ನು ಪ್ಲಾಸ್ಕ್​ನೊಳಗಡೆ ಪೇಸ್ಟ್ ರೂಪದಲ್ಲಿ ಅಡಗಿಟ್ಟಿಸಿದ್ದ. ಪ್ಲಾಸ್ಕ್ ಒಡೆದು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ. 7 ಲಕ್ಷ 52 ಸಾವಿರ ರೂ ಮೌಲ್ಯದ 122 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣ-2: ಇನ್ನೊಂದು ಪ್ರಕರಣದಲ್ಲಿ ಹಾವನ್ನು ಬಾಟಲಿಯಲ್ಲಿ ಹಾಕಿಕೊಂಡು ವಿದೇಶದಿಂದ ಆಗಮಿಸಿದ್ದ ಪ್ರಯಾಣಿಕನನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್​ನ ಡಾನ್​ ಮಿಯಾಂಗ್​ ಏರ್ಪೋಟ್​ನಿಂದ ಬೆಂಗಳೂರಿಗೆ ಇಂದು ಬೆಳಿಗ್ಗೆ ಏರ್​ ಏಷ್ಯಾ ವಿಮಾನದಲ್ಲಿ ಕೆಐಎಬಿಗೆ ಪುರುಷೋತ್ತಮ್​ ಎಂಬ ಪ್ರಯಾಣಿಕ ಬಂದಿಳಿದಿದ್ದ. ಸಿಐಎಸ್ಎಫ್‌ ಸಿಬ್ಬಂದಿ ತಪಾಸಣೆ​ ವೇಳೆ ಹಾವು ಸಾಗಾಟ ಬಯಲಾಗಿದೆ. ಪ್ರಾಣಿಗಳ ಸಾಗಾಟ ನಿಷೇಧ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹಾವಿನ ಬಾಟಲ್​ ಸಮೇತ ಪ್ರಯಾಣಿಕನನ್ನು ಅರಣ್ಯ ಇಲಾಖೆ ಅಧಿಕಾರಿಗಳ‌ ವಶಕ್ಕೆ‌ ಒಪ್ಪಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು, ಹೈದರಾಬಾದ್​​ ಏರ್​ಪೋರ್ಟ್​ನಲ್ಲಿ ಕಾರ್ಯಾಚರಣೆ: 13 ಕೋಟಿ ಮೌಲ್ಯದ ವಜ್ರ, ವಿದೇಶಿ ಕರೆನ್ಸಿ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.