ETV Bharat / state

ದಾವಣಗೆರೆ ಮತದಾರರಿಗೆ ಬಂಪರ್​ ಆಫರ್: ವೋಟ್​ ಮಾಡಿದರಿಗೆ ಇಎನ್​ಟಿ ಡಾಕ್ಟರ್​ರಿಂದ 4 ದಿನ ಉಚಿತ ಚಿಕಿತ್ಸೆ! - free treatment

author img

By ETV Bharat Karnataka Team

Published : May 7, 2024, 5:09 PM IST

Updated : May 7, 2024, 6:22 PM IST

ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ದಾವಣಗೆರೆಯ ಇಎನ್​ಟಿ ವೈದ್ಯರೊಬ್ಬರು ಮತ ಹಾಕಿದವರಿಗೆ ನಾಲ್ಕು ದಿನಗಳ ಕಾಲ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ.

ದಾವಣಗೆರೆ ಮತದಾರರಿಗೆ ಬಂಪರ್​ ಆಫರ್
ದಾವಣಗೆರೆ ಮತದಾರರಿಗೆ ಬಂಪರ್​ ಆಫರ್ (ETV Bharat)

ಡಾ. ಶಿವಕುಮಾರ್ (ETV Bharat)

ದಾವಣಗೆರೆ: ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಸಲುವಾಗಿ ದಾವಣಗೆರೆಯ ಇಎನ್​ಟಿ ವೈದ್ಯರೊಬ್ಬರು ಮತ ಹಾಕಿದವರಿಗೆ ನಾಲ್ಕು ದಿನಗಳ ಕಾಲ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ನಾಳೆಯಿಂದ(ಬುಧವಾರ) ನಾಲ್ಕು ದಿನಗಳ ಕಾಲ ಮೂಗು, ಗಂಟಲು, ಕಿವಿ ಸಮಸ್ಯೆ ಇರುವ ರೋಗಿಗಳು ಮತದಾನ ಮಾಡಿದ ಶಾಹಿ ಹಾಕಿಸಿಕೊಂಡಿರುವ ಬೆರಳನ್ನು ತೋರಿಸಿ ಡಾ. ಶಿವಕುಮಾರ್ ಅವರ ಕ್ಲಿನಿಕ್​ನಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.

ದಾವಣಗೆರೆ ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವುದು ಮೂಲಭೂತ ಕರ್ತವ್ಯ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನ ಮಾಡದೇ ಸರ್ಕಾರ ಹಾಗಿದೆ, ಹೀಗಿದೆ ಎಂದು ಕಾಮೆಂಟ್​ ಮಾಡುವ ಬದಲು, ನಮಗೆ ಬೇಕಾದ ಸರ್ಕಾರವನ್ನು ನಾವು ಆರಿಸಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಭವಿಷ್ಯ ಚೆನ್ನಾಗಿರುತ್ತದೆ ಎಂದರು.

ದೇಶದ ಶೇಕಡಾವಾರು ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಲಿ ಎಂದು ನನ್ನ ಕ್ಲಿನಿಕ್​ನಲ್ಲಿ ನಾಳೆ(ಬುಧವಾರ)ಯಿಂದ ಶನಿವಾರದ ವರೆಗೂ 4 ದಿನಗಳ ಕಾಲ ರೋಗಿಗಳು ಮತದಾನ ಮಾಡಿರುವ ಬಗ್ಗೆ ಶಾಹಿ ಹಾಕಿರುವ ಬೆರಳು ತೋರಿಸಿದರೆ ಉಚಿತವಾಗಿ ಇಎನ್​ಟಿ ಚಿಕಿತ್ಸೆ ನೀಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಮತ ಹಾಕಿ ಟಿಫನ್ ಮಾಡಿ ಆಫರ್​ಗೆ ಮುಗಿಬಿದ್ದ ಮತದಾರರು: ಮಸಾಲಾ ದೋಸೆ, ಪಲಾವ್, ಟೀ ಸವಿದು ಫುಲ್​ ಖುಷ್ - Lok Sabha election 2024

Last Updated :May 7, 2024, 6:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.