ETV Bharat / sports

ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆಗೆ ನರೇಂದ್ರ ಮೋದಿ, ಅಮಿತ್​ ಶಾ, ಸಚಿನ್​ರಿಂದ ಅರ್ಜಿ ಸಲ್ಲಿಕೆ! - team India Coach Job

author img

By ETV Bharat Karnataka Team

Published : May 28, 2024, 7:02 PM IST

ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಅಚ್ಚರಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಯಾರೆಲ್ಲಾ ಇದ್ದಾರೆ ಎಂಬುದರ ವಿವರ ಇಲ್ಲಿದೆ.

ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆ
ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆ (ETV Bharat)

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮುಖ್ಯ ತರಬೇತುದಾರ ಹುದ್ದೆ ನೇಮಕಕ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಕರೆದಿದ್ದು, ಅದರ ಗಡುವು ಸೋಮವಾರಕ್ಕೆ (ಮೇ 27) ಮುಗಿದಿದೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಬಿಸಿಸಿಐ ಸ್ವೀಕರಿಸಿದೆ ಎಂದು ವರದಿಯಾಗಿದೆ. ವಿಶೇಷ ಎಂದರೆ ಟೀಂ ಇಂಡಿಯಾ ಕೋಚ್​ ಹುದ್ದೆಗೆ ನೇಮಕ ಬಯಸಿ ನರೇಂದ್ರ ಮೋದಿ, ಅಮಿತ್​ ಶಾ, ಸಚಿನ್​ ತೆಂಡೂಲ್ಕರ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಅಚ್ಚರಿಯಾದರೂ ಇದು ನಿಜ. ಬಿಸಿಸಿಐಗೆ ಬಂದಿರುವ ಅರ್ಜಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ, ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್​ ಧೋನಿ, ವೀರೇಂದ್ರ ಸೆಹ್ವಾಗ್​ ಸೇರಿದಂತೆ ಹಲವರ ಹೆಸರಿದೆ. ಆದರೆ, ಇವು ನಕಲಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆನ್​ಲೈನ್​ ಮೂಲಕ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಇದನ್ನೇ ಬಳಸಿಕೊಂಡ ಕೆಲವರು ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು, ಮಾಜಿ ಕ್ರಿಕೆಟಿಗರ ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರಲ್ಲೂ ಪ್ರಧಾನಿ, ಗೃಹ ಸಚಿವರ ಹೆಸರಿನಲ್ಲಿ ಅರ್ಜಿ ಹಾಕಿದ್ದು, ಹಾಸ್ಯದ ಸಂಗತಿಯಾಗಿದೆ. ಇದರೊಂದಿಗೆ ಕೋಚ್​ ಹುದ್ದೆಯ ರೇಸಲ್ಲೇ ಇಲ್ಲದ ಮಾಜಿ ಕ್ರಿಕೆಟಿಗರಾದ 'ಕ್ರಿಕೆಟ್​ ದೇವರು' ಸಚಿನ್​ ತೆಂಡೂಲ್ಕರ್, ಮಹೇಂದ್ರ ಸಿಂಗ್​ ಧೋನಿ, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರೂ ಅರ್ಜಿದಾರರಾಗಿದ್ದಾರೆ.

"ಕಳೆದ ವರ್ಷವೂ ಬಿಸಿಸಿಐಗೆ ಇಂತಹ ಅರ್ಜಿಗಳು ಬಂದಿದ್ದವು. ಈ ಬಾರಿಯೂ ಇದೇ ರೀತಿಯಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದ್ದರಿಂದ ಕೆಲವರು ಇದ್ದನ್ನೇ ದುರ್ಬಳಕೆ ಮಾಡಿಕೊಂಡು, ಗಣ್ಯರ ಹೆಸರಿನಲ್ಲಿ ನಕಲಿ ಅರ್ಜಿ ಹಾಕಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಸಿಸಿಐ ನೀಡಿದ ಜಾಹೀರಾತು ಹೀಗಿದೆ: ಬಿಸಿಸಿಐ ಹೊರಡಿಸಿದ ಜಾಹೀರಾತಿನ ಪ್ರಕಾರ, ಅರ್ಜಿದಾರರು ಭಾರತ ತಂಡವನ್ನು ನಿಭಾಯಿಸಲು ಬೇಕಾದ ದೃಢತೆ ಹೊಂದಿರಬೇಕು. ನಿರೀಕ್ಷೆ ಮತ್ತು ಒತ್ತಡವನ್ನು ನಿರ್ವಹಿಸಲು ಸಿದ್ಧರಿರಬೇಕು. ಯಾವುದೇ ಪರಿಸ್ಥಿತಿಯಲ್ಲಿ ಮತ್ತು ಆಟದ ಸ್ವರೂಪಗಳಲ್ಲಿ ನಿರಂತರ ಯಶಸ್ಸನ್ನು ತಂದಕೊಡುವ ಮೂಲಕ ಕ್ರಿಕೆಟ್​ ತಂಡವನ್ನು ವಿಶ್ವ ದರ್ಜೆಗೆ ಏರಿಸುವಲ್ಲಿ ಸಹಾಯ ಮಾಡಬೇಕು. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಕ್ರಿಕೆಟಿಗರು ರೂಪಿಸಬೇಕು. ಅಂತಹವರು ಅರ್ಜಿ ಸಲ್ಲಿಸಬಹುದು ಎಂದಿದೆ.

ಸದ್ಯ ಟೀಂ ಇಂಡಿಯಾದ ಮುಖ್ಯ ತರಬೇತುದಾರರಾದ ರಾಹುಲ್ ದ್ರಾವಿಡ್ ಅವರ ಅವಧಿಯು ಮುಂಬರುವ ಟಿ20 ವಿಶ್ವಕಪ್ ಬಳಿಕ ಅಂತ್ಯಗೊಳ್ಳಲಿದೆ. ಈ ಅವಧಿಯೊಳಗೆ ಭಾರತ ತಂಡಕ್ಕೆ ಹೊಸ ಕೋಚ್ ಅನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಕೋಚ್​ ರೇಸ್​ನಲ್ಲಿ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಅವರ ಹೆಸರು ಮುಂಚೂಣಿಯಲ್ಲಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್​ ಹುದ್ದೆಗಾಗಿ ಕೆಕೆಆರ್​ ಫ್ರಾಂಚೈಸಿ ಬಿಡ್ತಾರಾ ಗೌತಮ್​ ಗಂಭೀರ್​? - Gautam Gambhir

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮುಖ್ಯ ತರಬೇತುದಾರ ಹುದ್ದೆ ನೇಮಕಕ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಕರೆದಿದ್ದು, ಅದರ ಗಡುವು ಸೋಮವಾರಕ್ಕೆ (ಮೇ 27) ಮುಗಿದಿದೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಬಿಸಿಸಿಐ ಸ್ವೀಕರಿಸಿದೆ ಎಂದು ವರದಿಯಾಗಿದೆ. ವಿಶೇಷ ಎಂದರೆ ಟೀಂ ಇಂಡಿಯಾ ಕೋಚ್​ ಹುದ್ದೆಗೆ ನೇಮಕ ಬಯಸಿ ನರೇಂದ್ರ ಮೋದಿ, ಅಮಿತ್​ ಶಾ, ಸಚಿನ್​ ತೆಂಡೂಲ್ಕರ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಅಚ್ಚರಿಯಾದರೂ ಇದು ನಿಜ. ಬಿಸಿಸಿಐಗೆ ಬಂದಿರುವ ಅರ್ಜಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ, ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್​ ಧೋನಿ, ವೀರೇಂದ್ರ ಸೆಹ್ವಾಗ್​ ಸೇರಿದಂತೆ ಹಲವರ ಹೆಸರಿದೆ. ಆದರೆ, ಇವು ನಕಲಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆನ್​ಲೈನ್​ ಮೂಲಕ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಇದನ್ನೇ ಬಳಸಿಕೊಂಡ ಕೆಲವರು ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು, ಮಾಜಿ ಕ್ರಿಕೆಟಿಗರ ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರಲ್ಲೂ ಪ್ರಧಾನಿ, ಗೃಹ ಸಚಿವರ ಹೆಸರಿನಲ್ಲಿ ಅರ್ಜಿ ಹಾಕಿದ್ದು, ಹಾಸ್ಯದ ಸಂಗತಿಯಾಗಿದೆ. ಇದರೊಂದಿಗೆ ಕೋಚ್​ ಹುದ್ದೆಯ ರೇಸಲ್ಲೇ ಇಲ್ಲದ ಮಾಜಿ ಕ್ರಿಕೆಟಿಗರಾದ 'ಕ್ರಿಕೆಟ್​ ದೇವರು' ಸಚಿನ್​ ತೆಂಡೂಲ್ಕರ್, ಮಹೇಂದ್ರ ಸಿಂಗ್​ ಧೋನಿ, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರೂ ಅರ್ಜಿದಾರರಾಗಿದ್ದಾರೆ.

"ಕಳೆದ ವರ್ಷವೂ ಬಿಸಿಸಿಐಗೆ ಇಂತಹ ಅರ್ಜಿಗಳು ಬಂದಿದ್ದವು. ಈ ಬಾರಿಯೂ ಇದೇ ರೀತಿಯಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದ್ದರಿಂದ ಕೆಲವರು ಇದ್ದನ್ನೇ ದುರ್ಬಳಕೆ ಮಾಡಿಕೊಂಡು, ಗಣ್ಯರ ಹೆಸರಿನಲ್ಲಿ ನಕಲಿ ಅರ್ಜಿ ಹಾಕಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಸಿಸಿಐ ನೀಡಿದ ಜಾಹೀರಾತು ಹೀಗಿದೆ: ಬಿಸಿಸಿಐ ಹೊರಡಿಸಿದ ಜಾಹೀರಾತಿನ ಪ್ರಕಾರ, ಅರ್ಜಿದಾರರು ಭಾರತ ತಂಡವನ್ನು ನಿಭಾಯಿಸಲು ಬೇಕಾದ ದೃಢತೆ ಹೊಂದಿರಬೇಕು. ನಿರೀಕ್ಷೆ ಮತ್ತು ಒತ್ತಡವನ್ನು ನಿರ್ವಹಿಸಲು ಸಿದ್ಧರಿರಬೇಕು. ಯಾವುದೇ ಪರಿಸ್ಥಿತಿಯಲ್ಲಿ ಮತ್ತು ಆಟದ ಸ್ವರೂಪಗಳಲ್ಲಿ ನಿರಂತರ ಯಶಸ್ಸನ್ನು ತಂದಕೊಡುವ ಮೂಲಕ ಕ್ರಿಕೆಟ್​ ತಂಡವನ್ನು ವಿಶ್ವ ದರ್ಜೆಗೆ ಏರಿಸುವಲ್ಲಿ ಸಹಾಯ ಮಾಡಬೇಕು. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಕ್ರಿಕೆಟಿಗರು ರೂಪಿಸಬೇಕು. ಅಂತಹವರು ಅರ್ಜಿ ಸಲ್ಲಿಸಬಹುದು ಎಂದಿದೆ.

ಸದ್ಯ ಟೀಂ ಇಂಡಿಯಾದ ಮುಖ್ಯ ತರಬೇತುದಾರರಾದ ರಾಹುಲ್ ದ್ರಾವಿಡ್ ಅವರ ಅವಧಿಯು ಮುಂಬರುವ ಟಿ20 ವಿಶ್ವಕಪ್ ಬಳಿಕ ಅಂತ್ಯಗೊಳ್ಳಲಿದೆ. ಈ ಅವಧಿಯೊಳಗೆ ಭಾರತ ತಂಡಕ್ಕೆ ಹೊಸ ಕೋಚ್ ಅನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಕೋಚ್​ ರೇಸ್​ನಲ್ಲಿ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಅವರ ಹೆಸರು ಮುಂಚೂಣಿಯಲ್ಲಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್​ ಹುದ್ದೆಗಾಗಿ ಕೆಕೆಆರ್​ ಫ್ರಾಂಚೈಸಿ ಬಿಡ್ತಾರಾ ಗೌತಮ್​ ಗಂಭೀರ್​? - Gautam Gambhir

ETV Bharat Logo

Copyright © 2024 Ushodaya Enterprises Pvt. Ltd., All Rights Reserved.