ETV Bharat / business

ಐಎಂಇಇಸಿ ಕಾರಿಡಾರ್: ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು

author img

By ETV Bharat Karnataka Team

Published : Feb 22, 2024, 7:39 PM IST

Updated : Feb 23, 2024, 4:20 PM IST

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್​ನ ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

Prime Minister Narendra Modi and UAE President Mohammed bin Zayed Al Nahyan
Prime Minister Narendra Modi and UAE President Mohammed bin Zayed Al Nahyan

ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಫೆಬ್ರವರಿ 1, 2024 ರಂದು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದವು. ಉದ್ದೇಶಿತ ಕಾರಿಡಾರ್ ಮಾರ್ಗವು ನೂರಾರು ವರ್ಷಗಳ ಹಿಂದೆ ಭಾರತೀಯ ಉಪಖಂಡ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವಿನ ಐತಿಹಾಸಿಕ ವ್ಯಾಪಾರ ಮಾರ್ಗವಾಗಿತ್ತು.

ಗಾಜಾದಲ್ಲಿನ ಸಂಘರ್ಷ ಮತ್ತು ಕೆಂಪು ಸಮುದ್ರ ಪ್ರದೇಶದಲ್ಲಿ ಎದುರಾಗುತ್ತಿರುವ ತೊಡಕುಗಳು ಆತಂಕ ಮೂಡಿಸಿದ್ದರೂ, ಭಾರತದ ಪ್ರಧಾನಿ ಮೋದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಈ ಉದ್ದೇಶಿತ ಕಾರಿಡಾರ್ ಆರ್ಥಿಕ ಮತ್ತು ಕಾರ್ಯತಂತ್ರದ ಗೇಮ್ ಚೇಂಜರ್ ಆಗಿದ್ದು, ವ್ಯಾಪಾರ ಹೆಚ್ಚಿಸುವ ಮತ್ತು ಹಡಗು ಪ್ರಯಾಣದ ವಿಳಂಬವನ್ನು ಕಡಿಮೆ ಮಾಡುವ ಮೂಲಕ ಸರಕುಗಳನ್ನು ತ್ವರಿತವಾಗಿ ಸಾಗಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಕಡಿಮೆ ಮಾಡುವುದು ಸಹ ಈ ಯೋಜನೆಯ ಮತ್ತೊಂದು ಮುಖ್ಯ ಗುರಿಯಾಗಿದೆ.

ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಯುರೋಪಿಯನ್ ಯೂನಿಯನ್ (ಇಯು), ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಸೌದಿ ಅರೇಬಿಯಾ, ಯುಎಇ ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್) ಐಎಂಇಇಸಿ ರಚಿಸಲು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು. ಈ ದೇಶಗಳು ವಿಶ್ವದ ಜನಸಂಖ್ಯೆಯ 40% ರಷ್ಟನ್ನು ಹೊಂದಿವೆ ಮತ್ತು ಜಾಗತಿಕ ಆರ್ಥಿಕತೆಯ ಸುಮಾರು 50% ರಷ್ಟನ್ನು ಹೊಂದಿರುವ ಯುಎಇ, ಸೌದಿ ಅರೇಬಿಯಾ, ಗ್ರೀಸ್ ಮೂಲಕ ಹಾದುಹೋಗುವ ಮಾರ್ಗದೊಂದಿಗೆ ಭಾರತವನ್ನು ಯುರೋಪಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಇಸ್ರೇಲ್ ಮತ್ತು ಜೋರ್ಡಾನ್​ಗಳನ್ನು ಕೂಡ ಸಂಪರ್ಕಿಸುತ್ತಿದ್ದರೂ ಆ ದೇಶಗಳು ಐಎಂಇಇಸಿ ಒಪ್ಪಂದಕ್ಕೆ ಸಹಿ ಹಾಕಲಿಲ್ಲ.

ಪ್ರಸ್ತುತ ಭಾರತ ಮತ್ತು ಯುರೋಪ್ ನಡುವಿನ ಬಹುತೇಕ ವ್ಯಾಪಾರವು ಈಜಿಪ್ಟ್ ನಿಯಂತ್ರಣದಲ್ಲಿರುವ ಸೂಯೆಜ್ ಕಾಲುವೆಯ ಮೂಲಕ ಕಡಲ ಮಾರ್ಗಗಳ ಮೂಲಕ ನಡೆಯುತ್ತಿದೆ. 4,800 ಕಿ.ಮೀ ಉದ್ದದ ಬಹು ಮಾದರಿ ಸಾರಿಗೆ ಕಾರಿಡಾರ್ ಐಎಂಇಇಸಿ ಭಾರತದ ಪಶ್ಚಿಮ ಕರಾವಳಿಯನ್ನು ಸಮುದ್ರದ ಮೂಲಕ ಯುಎಇಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಅರೇಬಿಯನ್ ಪರ್ಯಾಯ ದ್ವೀಪವನ್ನು ದಾಟಿ ಇಸ್ರೇಲ್ ಬಂದರಾದ ಹೈಫಾಗೆ ರೈಲು ಮಾರ್ಗದ ಮೂಲಕ ಜೋಡಿಸುತ್ತದೆ. ಹೈಫಾದಿಂದ ಸರಕುಗಳನ್ನು ಮತ್ತೆ ಸಮುದ್ರದ ಮೂಲಕ ಗ್ರೀಕ್ ಬಂದರಾದ ಪಿರೇಯಸ್ ಮೂಲಕ ಯುರೋಪಿಗೆ ಸಾಗಿಸಲಾಗುತ್ತದೆ. ಭಾರತದ ಮುಂದ್ರಾ, ಕಾಂಡ್ಲಾ ಮತ್ತು ಮುಂಬೈ ಬಂದರುಗಳು ಯುಎಇಯ ಫುಜೈರಾ, ಜೆಬೆಲ್ ಅಲಿ ಮತ್ತು ಅಬುಧಾಬಿ, ಸೌದಿ ಅರೇಬಿಯಾದ ದಮ್ಮಾಮ್ ಮತ್ತು ರಾಸ್ ಅಲ್ ಖೈರ್ ಬಂದರುಗಳು, ಇಸ್ರೇಲ್ ನ ಹೈಫಾ ಮತ್ತು ಫ್ರಾನ್ಸ್ ನ ಮಾರ್ಸಿಲೆ, ಇಟಲಿಯ ಮೆಸ್ಸಿನಾ ಮತ್ತು ಗ್ರೀಸ್ ನ ಪಿರೇಯಸ್ ಬಂದರುಗಳೊಂದಿಗೆ ಸಂಪರ್ಕ ಹೊಂದಲಿವೆ.

ಐಎಂಇಇಸಿ ಕಾರಿಡಾರ್
ಐಎಂಇಇಸಿ ಕಾರಿಡಾರ್

ಐಎಂಇಇಸಿ ಯೋಜನೆಯು ಪಾಕಿಸ್ತಾನದ ಮೂಲಕ ಇರಾನ್ ಮತ್ತು ಪಶ್ಚಿಮ ಏಷ್ಯಾಕ್ಕೆ ಭೂ ಪ್ರವೇಶದ ಸಮಸ್ಯೆಯಿಂದಾಗಿ ಈ ಹಿಂದೆ ಲಭ್ಯವಿರದ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಅನ್ನು ಪ್ರವೇಶಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ. ಇದು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ಸಂಪರ್ಕದ ಅನ್ವೇಷಣೆಯಲ್ಲಿ ಇಸ್ಲಾಮಾಬಾದ್ ಮತ್ತು ಟೆಹ್ರಾನ್ ಸುತ್ತಲೂ ಒಂದು ಮಾರ್ಗ ಕಂಡುಕೊಳ್ಳಲು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ.

ಆರ್ಥಿಕವಾಗಿ ಐಎಂಇಇಸಿಯು ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್​ಗಳಿಗೆ ಸರಕುಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳಲು ಭಾರತಕ್ಕೆ ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಇದು ಗ್ರೀಸ್ ಅನ್ನು ಇಟಲಿ, ಫ್ರಾನ್ಸ್, ಜರ್ಮನಿಗಳಿಗೆ ಸಂಪರ್ಕಿಸುತ್ತದೆ. ಈ ಮಾರ್ಗದಿಂದ ಭಾರತದಿಂದ ಯುರೋಪಿಗೆ ಸರಕುಗಳನ್ನು ಸಾಗಿಸುವ ಸಮಯ ಮತ್ತು ವೆಚ್ಚವು ಕ್ರಮವಾಗಿ 40% ಮತ್ತು 30% ರಷ್ಟು ಕಡಿಮೆಯಾಗಲಿದೆ. ಬಹುತೇಕ ಎಂಜಿನಿಯರಿಂಗ್ ರಫ್ತುಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ಕಳುಹಿಸುವುದರಿಂದ, ಐಎಂಇಇಸಿ ಈ ರಫ್ತು ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು. ಅಲ್ಲದೆ, ಐಎಂಇಇಸಿ ಭಾರತದ ಐಟಿ ಸಂಪನ್ಮೂಲಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ರಫ್ತು ಮಾಡಲು ಅನುಕೂಲ ಮಾಡಿಕೊಡುವ ಹೆಚ್ಚಿನ ಅವಕಾಶವಿದೆ.

ಐಎಂಇಇಸಿ ಉಪಕ್ರಮವು ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಅಡೆತಡೆಗಳನ್ನು ಎದುರಿಸುತ್ತಿದೆ. ಇದರಲ್ಲಿ ಪಾಲುದಾರ ದೇಶಗಳು ಹಣಕಾಸಿನ ಪೂರೈಕೆಯ ಬಗ್ಗೆ ಬದ್ಧತೆ ಪ್ರದರ್ಶಿಸಿಲ್ಲ ಮತ್ತು ಹಣಕಾಸು ಕ್ರೋಢೀಕರಣದ ಬಗ್ಗೆ ಮಾಹಿತಿ ತಿಳಿದಿಲ್ಲ. ಕೆಲ ಮಾಧ್ಯಮ ವರದಿಗಳ ಅಂದಾಜಿನ ಪ್ರಕಾರ, ಬಂದರು ಸಂಪರ್ಕಗಳು ಮತ್ತು ರೈಲ್ವೆ ಇತ್ಯಾದಿಗಳ ಅಭಿವೃದ್ಧಿಗೆ 8 ರಿಂದ 20 ಬಿಲಿಯನ್ ಡಾಲರ್ ಅಗತ್ಯವಿದೆ. ಆದರೆ ಮೊದಲ ತಿಳಿವಳಿಕಾ ಒಪ್ಪಂದವು ಒಳಗೊಂಡಿರುವ ವೆಚ್ಚಗಳ ಬಗ್ಗೆ ನಿರ್ದಿಷ್ಟವಾಗಿ ಏನೂ ಹೇಳುವುದಿಲ್ಲ. ಇದಲ್ಲದೆ, ಪಾಲುದಾರರ ನಡುವೆ ಆರ್ಥಿಕ ಹೊರೆಯನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಮಾತ್ರ ಈ ಯೋಜನೆಗಾಗಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.

ಅಸ್ಥಿರ ಭೌಗೋಳಿಕ ರಾಜಕೀಯ ಸನ್ನಿವೇಶದ ಮಧ್ಯೆ ಐಎಂಇಇಸಿ ಕುರಿತು ಭಾರತ ಮತ್ತು ಯುಎಇ ನಡುವೆ ಒಪ್ಪಂದವಾಗಿರುವುದು ಗಮನಾರ್ಹ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧವು ಇಸ್ರೇಲ್ ಅನ್ನು ಅರಬ್ ರಾಷ್ಟ್ರಗಳೊಂದಿಗೆ ಸಂಯೋಜಿಸುವ ಯುಎಸ್ ಯೋಜನೆಗೆ ಅಡ್ಡಿಪಡಿಸಿದೆ. ವಾಸ್ತವವಾಗಿ, ಇಡೀ ಯೋಜನೆಯು ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವಿನ ಸೌಹಾರ್ದ ಸಂಬಂಧಗಳನ್ನು ಅವಲಂಬಿಸಿದೆ. ಇಸ್ರೇಲ್ ಮತ್ತು ಕೆಲ ಅರಬ್ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸಲು ಆಗಸ್ಟ್ 2020 ರಲ್ಲಿ ಸಹಿ ಹಾಕಿದ ಅಬ್ರಹಾಂ ಒಪ್ಪಂದಗಳ ವಿಸ್ತರಣೆಯಾಗಿದೆ. ಇಸ್ರೇಲ್ ನೊಂದಿಗೆ ರೈಲು ಸಂಪರ್ಕವನ್ನು ಸಂಪರ್ಕಿಸುವುದು ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಅವಲಂಬಿಸಬಹುದು.

ಏತನ್ಮಧ್ಯೆ ಐಎಂಇಇಸಿಯ ಎರಡು ಪ್ರಮುಖ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಎಇ ಯೆಮೆನ್ ಅಂತರ್ಯುದ್ಧದ ಬಗ್ಗೆ ಹೆಚ್ಚು ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಇದಲ್ಲದೆ, ಐಎಂಇಇಸಿ ಇರಾನ್ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿಯ ಮೂಲಕ ಹೋಗುತ್ತದೆ. ಇದು ತನ್ನ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಪೂರೈಸಲು ಜಲಸಂಧಿಯನ್ನು ಒತ್ತಡ ಸಾಧನವಾಗಿ ಬಳಸುತ್ತಿದೆ. ಇಂಥ ವಿಭಜನೆಗಳು ಯೋಜನೆಗೆ ಅಡ್ಡಿಯಾಗುತ್ತವೆ. ಸೌದಿ ಅರೇಬಿಯಾ ಮತ್ತು ಯುಎಸ್ ಬೆಂಬಲದೊಂದಿಗೆ ಈ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಫಲಿತಾಂಶ ಆಧಾರಿತ ಕಾರ್ಯಯೋಜನೆಯನ್ನು ಅನುಸರಿಸಬೇಕಾಗಿದೆ.

ಭೌಗೋಳಿಕ ಪ್ರಾಮುಖ್ಯತೆಯಿಂದಾಗಿ ಐಎಂಇಇಸಿ ಯೋಜನೆಯು ಒಮಾನ್, ಟರ್ಕಿ ಮತ್ತು ಇರಾಕ್​ಗಳನ್ನು ಕೂಡ ಒಳಗೊಂಡಿರಬೇಕು ಎಂದು ಮಧ್ಯಪ್ರಾಚ್ಯದ ಅಂತರರಾಷ್ಟ್ರೀಯ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯುಎಇ ಹೊರತುಪಡಿಸಿದರೆ ಮಸ್ಕತ್ ಸೌದಿ ಅರೇಬಿಯಾಕ್ಕೆ ಟ್ರಾನ್ಸಿಟ್ ಪಾಯಿಂಟ್ ಆಗಿದೆ. ಭಾರತ ಮತ್ತು ಒಮಾನ್ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ನ ಭಾಗವಾಗಿದ್ದು, ಇದು ಇರಾನ್ ಮತ್ತು ಮಧ್ಯ ಏಷ್ಯಾದ ಮೂಲಕ ಭಾರತವನ್ನು ರಷ್ಯಾಕ್ಕೆ ಸಂಪರ್ಕಿಸುತ್ತದೆ. ಹೈಫಾ ಮತ್ತು ಗ್ರೀಕ್ ಬಂದರು ಪಿರೇಯಸ್ ನಡುವಿನ ಸಮುದ್ರ ಮಾರ್ಗವು ಟರ್ಕಿ ಮತ್ತು ಗ್ರೀಸ್ ನಡುವಿನ ವಿವಾದಿತ ಪ್ರಾದೇಶಿಕ ಜಲಪ್ರದೇಶದ ಮೂಲಕ ಹಾದುಹೋಗುವುದರಿಂದ ಟರ್ಕಿ ಕೂಡ ಮಹತ್ವ ಹೊಂದಿದೆ.

ಐಎಂಇಇಸಿಯಲ್ಲಿ ಪ್ರಮುಖ ಸಂಪರ್ಕವಾದ ಗ್ರೀಕ್ ಬಂದರು ಪಿರೇಯಸ್ ಅನ್ನು ಚೀನಾ ಓಷನ್ ಶಿಪ್ಪಿಂಗ್ ಕಾರ್ಪೊರೇಷನ್ (ಕಾಸ್ಕೊ) ನಿರ್ವಹಿಸುತ್ತದೆ. ಇದು ಇಸ್ರೇಲ್ ನ ಹೈಫಾ ಬಂದರಿನಿಂದ ಬರುವ ಸರಕುಗಳನ್ನು ಸ್ವೀಕರಿಸುತ್ತದೆ. ಯೋಜನೆಯಲ್ಲಿ ಟರ್ಕಿಯನ್ನು ಹೊರಗಿಡುವಿಕೆಗೆ ಪ್ರತಿಕ್ರಿಯೆಯಾಗಿ, ಅಧ್ಯಕ್ಷ ಎರ್ಡೋಗನ್ "ಟರ್ಕಿ ಇಲ್ಲದೆ ಕಾರಿಡಾರ್ ಇರಲು ಸಾಧ್ಯವಿಲ್ಲ" ಎಂದಿದ್ದಾರೆ. ಪರ್ಯಾಯವಾಗಿ ಟರ್ಕಿ ಮತ್ತು ಇರಾಕ್ ಬಂದರು ಫಾವ್ ನಡುವೆ ರಸ್ತೆ ಮತ್ತು ರೈಲ್ವೆ ಮೂಲಕ ಸಂಪರ್ಕ ಕಲ್ಪಿಸಬೇಕೆಂದು ಎರ್ಡೋಗನ್ ಹೇಳಿದ್ದಾರೆ.

ಐಎಂಇಇಸಿ ಮೂಲಕ ಭಾರತವು ಹಿಂದೂ ಮಹಾಸಾಗರದ ಮೂಲಕ ಅರೇಬಿಯನ್ ಸಮುದ್ರಕ್ಕೆ ಸಂಪರ್ಕ ನಿರ್ಮಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಐಎಂಇಇಸಿ ಪೂರ್ಣಗೊಳಿಸುವುದು ಭಾರತಕ್ಕೆ ಪ್ರಮುಖ ಆದ್ಯತೆಯಾಗಿ ಮುಂದುವರೆದಿದೆ. ಈ ಯೋಜನೆಯು ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಶಕ್ತಿಯಲ್ಲಿ ಜಾಗತಿಕ ಬದಲಾವಣೆಯನ್ನು ತರಲಿದ್ದು, ಭಾರತವು ಈ ನಿರ್ಣಾಯಕ ಹಾದಿಯ ಕೇಂದ್ರ ಬಿಂದುವಾಗಿದೆ.

ಐಎಂಇಇಸಿಯ ಆರ್ಥಿಕ ಯಶಸ್ಸು ಯುರೋಪ್ ಮತ್ತು ಮಧ್ಯಪ್ರಾಚ್ಯದೊಂದಿಗೆ ಭಾರತವು ಪ್ರಮುಖ ವ್ಯಾಪಾರ ಪಾಲುದಾರನಾಗಲು ಒಂದು ತಿರುವು ನೀಡುತ್ತದೆ. ಸೂಚ್ಯವಾಗಿ, ಐಎಂಇಇಸಿಯ ಪ್ರಗತಿಯು ಚೀನಾದ ಬಿಆರ್​ಐಗೆ ಕಾರ್ಯತಂತ್ರದ ಕೌಂಟರ್ ಆಗಿರಬಹುದು. ಬಿಆರ್​ಐ ಏಷ್ಯಾ, ಆಫ್ರಿಕಾ ಮತ್ತು ಯುರೋಪಿನಾದ್ಯಂತ ಚೀನಾದ ಪ್ರಭಾವವನ್ನು ಹೆಚ್ಚಿಸಿದೆ. ಆದಾಗ್ಯೂ, ಐಎಂಇಇಸಿಯು ಸದ್ಯ ಆರಂಭಿಕ ಹಂತದಲ್ಲಿದೆ. ಯೋಜನೆಗೆ ಹಣಕಾಸಿನ ಕ್ರೋಢೀಕರಣ, ನಿಬಂಧನೆಗಳು ಮತ್ತು ಭೌಗೋಳಿಕ ರಾಜಕೀಯ ಅಡೆತಡೆಗಳನ್ನು ಹೇಗೆ ನಿಭಾಯಿಸಲಿದೆ ಎಂಬ ಬಗ್ಗೆ ಸರಿಯಾದ ಯೋಜನೆಯನ್ನು ರೂಪಿಸಬೇಕಿದೆ.

ಲೇಖನ : ಡಾ. ರಾವೆಲ್ಲಾ ಭಾನು ಕೃಷ್ಣ ಕಿರಣ್

ಇದನ್ನೂ ಓದಿ : 7 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಭಾರತದ ವ್ಯಾಪಾರ ಬೆಳವಣಿಗೆ ದರ

ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಫೆಬ್ರವರಿ 1, 2024 ರಂದು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದವು. ಉದ್ದೇಶಿತ ಕಾರಿಡಾರ್ ಮಾರ್ಗವು ನೂರಾರು ವರ್ಷಗಳ ಹಿಂದೆ ಭಾರತೀಯ ಉಪಖಂಡ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವಿನ ಐತಿಹಾಸಿಕ ವ್ಯಾಪಾರ ಮಾರ್ಗವಾಗಿತ್ತು.

ಗಾಜಾದಲ್ಲಿನ ಸಂಘರ್ಷ ಮತ್ತು ಕೆಂಪು ಸಮುದ್ರ ಪ್ರದೇಶದಲ್ಲಿ ಎದುರಾಗುತ್ತಿರುವ ತೊಡಕುಗಳು ಆತಂಕ ಮೂಡಿಸಿದ್ದರೂ, ಭಾರತದ ಪ್ರಧಾನಿ ಮೋದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಈ ಉದ್ದೇಶಿತ ಕಾರಿಡಾರ್ ಆರ್ಥಿಕ ಮತ್ತು ಕಾರ್ಯತಂತ್ರದ ಗೇಮ್ ಚೇಂಜರ್ ಆಗಿದ್ದು, ವ್ಯಾಪಾರ ಹೆಚ್ಚಿಸುವ ಮತ್ತು ಹಡಗು ಪ್ರಯಾಣದ ವಿಳಂಬವನ್ನು ಕಡಿಮೆ ಮಾಡುವ ಮೂಲಕ ಸರಕುಗಳನ್ನು ತ್ವರಿತವಾಗಿ ಸಾಗಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಕಡಿಮೆ ಮಾಡುವುದು ಸಹ ಈ ಯೋಜನೆಯ ಮತ್ತೊಂದು ಮುಖ್ಯ ಗುರಿಯಾಗಿದೆ.

ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಯುರೋಪಿಯನ್ ಯೂನಿಯನ್ (ಇಯು), ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಸೌದಿ ಅರೇಬಿಯಾ, ಯುಎಇ ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್) ಐಎಂಇಇಸಿ ರಚಿಸಲು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು. ಈ ದೇಶಗಳು ವಿಶ್ವದ ಜನಸಂಖ್ಯೆಯ 40% ರಷ್ಟನ್ನು ಹೊಂದಿವೆ ಮತ್ತು ಜಾಗತಿಕ ಆರ್ಥಿಕತೆಯ ಸುಮಾರು 50% ರಷ್ಟನ್ನು ಹೊಂದಿರುವ ಯುಎಇ, ಸೌದಿ ಅರೇಬಿಯಾ, ಗ್ರೀಸ್ ಮೂಲಕ ಹಾದುಹೋಗುವ ಮಾರ್ಗದೊಂದಿಗೆ ಭಾರತವನ್ನು ಯುರೋಪಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಇಸ್ರೇಲ್ ಮತ್ತು ಜೋರ್ಡಾನ್​ಗಳನ್ನು ಕೂಡ ಸಂಪರ್ಕಿಸುತ್ತಿದ್ದರೂ ಆ ದೇಶಗಳು ಐಎಂಇಇಸಿ ಒಪ್ಪಂದಕ್ಕೆ ಸಹಿ ಹಾಕಲಿಲ್ಲ.

ಪ್ರಸ್ತುತ ಭಾರತ ಮತ್ತು ಯುರೋಪ್ ನಡುವಿನ ಬಹುತೇಕ ವ್ಯಾಪಾರವು ಈಜಿಪ್ಟ್ ನಿಯಂತ್ರಣದಲ್ಲಿರುವ ಸೂಯೆಜ್ ಕಾಲುವೆಯ ಮೂಲಕ ಕಡಲ ಮಾರ್ಗಗಳ ಮೂಲಕ ನಡೆಯುತ್ತಿದೆ. 4,800 ಕಿ.ಮೀ ಉದ್ದದ ಬಹು ಮಾದರಿ ಸಾರಿಗೆ ಕಾರಿಡಾರ್ ಐಎಂಇಇಸಿ ಭಾರತದ ಪಶ್ಚಿಮ ಕರಾವಳಿಯನ್ನು ಸಮುದ್ರದ ಮೂಲಕ ಯುಎಇಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಅರೇಬಿಯನ್ ಪರ್ಯಾಯ ದ್ವೀಪವನ್ನು ದಾಟಿ ಇಸ್ರೇಲ್ ಬಂದರಾದ ಹೈಫಾಗೆ ರೈಲು ಮಾರ್ಗದ ಮೂಲಕ ಜೋಡಿಸುತ್ತದೆ. ಹೈಫಾದಿಂದ ಸರಕುಗಳನ್ನು ಮತ್ತೆ ಸಮುದ್ರದ ಮೂಲಕ ಗ್ರೀಕ್ ಬಂದರಾದ ಪಿರೇಯಸ್ ಮೂಲಕ ಯುರೋಪಿಗೆ ಸಾಗಿಸಲಾಗುತ್ತದೆ. ಭಾರತದ ಮುಂದ್ರಾ, ಕಾಂಡ್ಲಾ ಮತ್ತು ಮುಂಬೈ ಬಂದರುಗಳು ಯುಎಇಯ ಫುಜೈರಾ, ಜೆಬೆಲ್ ಅಲಿ ಮತ್ತು ಅಬುಧಾಬಿ, ಸೌದಿ ಅರೇಬಿಯಾದ ದಮ್ಮಾಮ್ ಮತ್ತು ರಾಸ್ ಅಲ್ ಖೈರ್ ಬಂದರುಗಳು, ಇಸ್ರೇಲ್ ನ ಹೈಫಾ ಮತ್ತು ಫ್ರಾನ್ಸ್ ನ ಮಾರ್ಸಿಲೆ, ಇಟಲಿಯ ಮೆಸ್ಸಿನಾ ಮತ್ತು ಗ್ರೀಸ್ ನ ಪಿರೇಯಸ್ ಬಂದರುಗಳೊಂದಿಗೆ ಸಂಪರ್ಕ ಹೊಂದಲಿವೆ.

ಐಎಂಇಇಸಿ ಕಾರಿಡಾರ್
ಐಎಂಇಇಸಿ ಕಾರಿಡಾರ್

ಐಎಂಇಇಸಿ ಯೋಜನೆಯು ಪಾಕಿಸ್ತಾನದ ಮೂಲಕ ಇರಾನ್ ಮತ್ತು ಪಶ್ಚಿಮ ಏಷ್ಯಾಕ್ಕೆ ಭೂ ಪ್ರವೇಶದ ಸಮಸ್ಯೆಯಿಂದಾಗಿ ಈ ಹಿಂದೆ ಲಭ್ಯವಿರದ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಅನ್ನು ಪ್ರವೇಶಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ. ಇದು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ಸಂಪರ್ಕದ ಅನ್ವೇಷಣೆಯಲ್ಲಿ ಇಸ್ಲಾಮಾಬಾದ್ ಮತ್ತು ಟೆಹ್ರಾನ್ ಸುತ್ತಲೂ ಒಂದು ಮಾರ್ಗ ಕಂಡುಕೊಳ್ಳಲು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ.

ಆರ್ಥಿಕವಾಗಿ ಐಎಂಇಇಸಿಯು ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್​ಗಳಿಗೆ ಸರಕುಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳಲು ಭಾರತಕ್ಕೆ ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಇದು ಗ್ರೀಸ್ ಅನ್ನು ಇಟಲಿ, ಫ್ರಾನ್ಸ್, ಜರ್ಮನಿಗಳಿಗೆ ಸಂಪರ್ಕಿಸುತ್ತದೆ. ಈ ಮಾರ್ಗದಿಂದ ಭಾರತದಿಂದ ಯುರೋಪಿಗೆ ಸರಕುಗಳನ್ನು ಸಾಗಿಸುವ ಸಮಯ ಮತ್ತು ವೆಚ್ಚವು ಕ್ರಮವಾಗಿ 40% ಮತ್ತು 30% ರಷ್ಟು ಕಡಿಮೆಯಾಗಲಿದೆ. ಬಹುತೇಕ ಎಂಜಿನಿಯರಿಂಗ್ ರಫ್ತುಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ಕಳುಹಿಸುವುದರಿಂದ, ಐಎಂಇಇಸಿ ಈ ರಫ್ತು ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು. ಅಲ್ಲದೆ, ಐಎಂಇಇಸಿ ಭಾರತದ ಐಟಿ ಸಂಪನ್ಮೂಲಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ರಫ್ತು ಮಾಡಲು ಅನುಕೂಲ ಮಾಡಿಕೊಡುವ ಹೆಚ್ಚಿನ ಅವಕಾಶವಿದೆ.

ಐಎಂಇಇಸಿ ಉಪಕ್ರಮವು ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಅಡೆತಡೆಗಳನ್ನು ಎದುರಿಸುತ್ತಿದೆ. ಇದರಲ್ಲಿ ಪಾಲುದಾರ ದೇಶಗಳು ಹಣಕಾಸಿನ ಪೂರೈಕೆಯ ಬಗ್ಗೆ ಬದ್ಧತೆ ಪ್ರದರ್ಶಿಸಿಲ್ಲ ಮತ್ತು ಹಣಕಾಸು ಕ್ರೋಢೀಕರಣದ ಬಗ್ಗೆ ಮಾಹಿತಿ ತಿಳಿದಿಲ್ಲ. ಕೆಲ ಮಾಧ್ಯಮ ವರದಿಗಳ ಅಂದಾಜಿನ ಪ್ರಕಾರ, ಬಂದರು ಸಂಪರ್ಕಗಳು ಮತ್ತು ರೈಲ್ವೆ ಇತ್ಯಾದಿಗಳ ಅಭಿವೃದ್ಧಿಗೆ 8 ರಿಂದ 20 ಬಿಲಿಯನ್ ಡಾಲರ್ ಅಗತ್ಯವಿದೆ. ಆದರೆ ಮೊದಲ ತಿಳಿವಳಿಕಾ ಒಪ್ಪಂದವು ಒಳಗೊಂಡಿರುವ ವೆಚ್ಚಗಳ ಬಗ್ಗೆ ನಿರ್ದಿಷ್ಟವಾಗಿ ಏನೂ ಹೇಳುವುದಿಲ್ಲ. ಇದಲ್ಲದೆ, ಪಾಲುದಾರರ ನಡುವೆ ಆರ್ಥಿಕ ಹೊರೆಯನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಮಾತ್ರ ಈ ಯೋಜನೆಗಾಗಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.

ಅಸ್ಥಿರ ಭೌಗೋಳಿಕ ರಾಜಕೀಯ ಸನ್ನಿವೇಶದ ಮಧ್ಯೆ ಐಎಂಇಇಸಿ ಕುರಿತು ಭಾರತ ಮತ್ತು ಯುಎಇ ನಡುವೆ ಒಪ್ಪಂದವಾಗಿರುವುದು ಗಮನಾರ್ಹ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧವು ಇಸ್ರೇಲ್ ಅನ್ನು ಅರಬ್ ರಾಷ್ಟ್ರಗಳೊಂದಿಗೆ ಸಂಯೋಜಿಸುವ ಯುಎಸ್ ಯೋಜನೆಗೆ ಅಡ್ಡಿಪಡಿಸಿದೆ. ವಾಸ್ತವವಾಗಿ, ಇಡೀ ಯೋಜನೆಯು ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವಿನ ಸೌಹಾರ್ದ ಸಂಬಂಧಗಳನ್ನು ಅವಲಂಬಿಸಿದೆ. ಇಸ್ರೇಲ್ ಮತ್ತು ಕೆಲ ಅರಬ್ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸಲು ಆಗಸ್ಟ್ 2020 ರಲ್ಲಿ ಸಹಿ ಹಾಕಿದ ಅಬ್ರಹಾಂ ಒಪ್ಪಂದಗಳ ವಿಸ್ತರಣೆಯಾಗಿದೆ. ಇಸ್ರೇಲ್ ನೊಂದಿಗೆ ರೈಲು ಸಂಪರ್ಕವನ್ನು ಸಂಪರ್ಕಿಸುವುದು ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಅವಲಂಬಿಸಬಹುದು.

ಏತನ್ಮಧ್ಯೆ ಐಎಂಇಇಸಿಯ ಎರಡು ಪ್ರಮುಖ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಎಇ ಯೆಮೆನ್ ಅಂತರ್ಯುದ್ಧದ ಬಗ್ಗೆ ಹೆಚ್ಚು ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಇದಲ್ಲದೆ, ಐಎಂಇಇಸಿ ಇರಾನ್ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿಯ ಮೂಲಕ ಹೋಗುತ್ತದೆ. ಇದು ತನ್ನ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಪೂರೈಸಲು ಜಲಸಂಧಿಯನ್ನು ಒತ್ತಡ ಸಾಧನವಾಗಿ ಬಳಸುತ್ತಿದೆ. ಇಂಥ ವಿಭಜನೆಗಳು ಯೋಜನೆಗೆ ಅಡ್ಡಿಯಾಗುತ್ತವೆ. ಸೌದಿ ಅರೇಬಿಯಾ ಮತ್ತು ಯುಎಸ್ ಬೆಂಬಲದೊಂದಿಗೆ ಈ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಫಲಿತಾಂಶ ಆಧಾರಿತ ಕಾರ್ಯಯೋಜನೆಯನ್ನು ಅನುಸರಿಸಬೇಕಾಗಿದೆ.

ಭೌಗೋಳಿಕ ಪ್ರಾಮುಖ್ಯತೆಯಿಂದಾಗಿ ಐಎಂಇಇಸಿ ಯೋಜನೆಯು ಒಮಾನ್, ಟರ್ಕಿ ಮತ್ತು ಇರಾಕ್​ಗಳನ್ನು ಕೂಡ ಒಳಗೊಂಡಿರಬೇಕು ಎಂದು ಮಧ್ಯಪ್ರಾಚ್ಯದ ಅಂತರರಾಷ್ಟ್ರೀಯ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯುಎಇ ಹೊರತುಪಡಿಸಿದರೆ ಮಸ್ಕತ್ ಸೌದಿ ಅರೇಬಿಯಾಕ್ಕೆ ಟ್ರಾನ್ಸಿಟ್ ಪಾಯಿಂಟ್ ಆಗಿದೆ. ಭಾರತ ಮತ್ತು ಒಮಾನ್ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ನ ಭಾಗವಾಗಿದ್ದು, ಇದು ಇರಾನ್ ಮತ್ತು ಮಧ್ಯ ಏಷ್ಯಾದ ಮೂಲಕ ಭಾರತವನ್ನು ರಷ್ಯಾಕ್ಕೆ ಸಂಪರ್ಕಿಸುತ್ತದೆ. ಹೈಫಾ ಮತ್ತು ಗ್ರೀಕ್ ಬಂದರು ಪಿರೇಯಸ್ ನಡುವಿನ ಸಮುದ್ರ ಮಾರ್ಗವು ಟರ್ಕಿ ಮತ್ತು ಗ್ರೀಸ್ ನಡುವಿನ ವಿವಾದಿತ ಪ್ರಾದೇಶಿಕ ಜಲಪ್ರದೇಶದ ಮೂಲಕ ಹಾದುಹೋಗುವುದರಿಂದ ಟರ್ಕಿ ಕೂಡ ಮಹತ್ವ ಹೊಂದಿದೆ.

ಐಎಂಇಇಸಿಯಲ್ಲಿ ಪ್ರಮುಖ ಸಂಪರ್ಕವಾದ ಗ್ರೀಕ್ ಬಂದರು ಪಿರೇಯಸ್ ಅನ್ನು ಚೀನಾ ಓಷನ್ ಶಿಪ್ಪಿಂಗ್ ಕಾರ್ಪೊರೇಷನ್ (ಕಾಸ್ಕೊ) ನಿರ್ವಹಿಸುತ್ತದೆ. ಇದು ಇಸ್ರೇಲ್ ನ ಹೈಫಾ ಬಂದರಿನಿಂದ ಬರುವ ಸರಕುಗಳನ್ನು ಸ್ವೀಕರಿಸುತ್ತದೆ. ಯೋಜನೆಯಲ್ಲಿ ಟರ್ಕಿಯನ್ನು ಹೊರಗಿಡುವಿಕೆಗೆ ಪ್ರತಿಕ್ರಿಯೆಯಾಗಿ, ಅಧ್ಯಕ್ಷ ಎರ್ಡೋಗನ್ "ಟರ್ಕಿ ಇಲ್ಲದೆ ಕಾರಿಡಾರ್ ಇರಲು ಸಾಧ್ಯವಿಲ್ಲ" ಎಂದಿದ್ದಾರೆ. ಪರ್ಯಾಯವಾಗಿ ಟರ್ಕಿ ಮತ್ತು ಇರಾಕ್ ಬಂದರು ಫಾವ್ ನಡುವೆ ರಸ್ತೆ ಮತ್ತು ರೈಲ್ವೆ ಮೂಲಕ ಸಂಪರ್ಕ ಕಲ್ಪಿಸಬೇಕೆಂದು ಎರ್ಡೋಗನ್ ಹೇಳಿದ್ದಾರೆ.

ಐಎಂಇಇಸಿ ಮೂಲಕ ಭಾರತವು ಹಿಂದೂ ಮಹಾಸಾಗರದ ಮೂಲಕ ಅರೇಬಿಯನ್ ಸಮುದ್ರಕ್ಕೆ ಸಂಪರ್ಕ ನಿರ್ಮಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಐಎಂಇಇಸಿ ಪೂರ್ಣಗೊಳಿಸುವುದು ಭಾರತಕ್ಕೆ ಪ್ರಮುಖ ಆದ್ಯತೆಯಾಗಿ ಮುಂದುವರೆದಿದೆ. ಈ ಯೋಜನೆಯು ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಶಕ್ತಿಯಲ್ಲಿ ಜಾಗತಿಕ ಬದಲಾವಣೆಯನ್ನು ತರಲಿದ್ದು, ಭಾರತವು ಈ ನಿರ್ಣಾಯಕ ಹಾದಿಯ ಕೇಂದ್ರ ಬಿಂದುವಾಗಿದೆ.

ಐಎಂಇಇಸಿಯ ಆರ್ಥಿಕ ಯಶಸ್ಸು ಯುರೋಪ್ ಮತ್ತು ಮಧ್ಯಪ್ರಾಚ್ಯದೊಂದಿಗೆ ಭಾರತವು ಪ್ರಮುಖ ವ್ಯಾಪಾರ ಪಾಲುದಾರನಾಗಲು ಒಂದು ತಿರುವು ನೀಡುತ್ತದೆ. ಸೂಚ್ಯವಾಗಿ, ಐಎಂಇಇಸಿಯ ಪ್ರಗತಿಯು ಚೀನಾದ ಬಿಆರ್​ಐಗೆ ಕಾರ್ಯತಂತ್ರದ ಕೌಂಟರ್ ಆಗಿರಬಹುದು. ಬಿಆರ್​ಐ ಏಷ್ಯಾ, ಆಫ್ರಿಕಾ ಮತ್ತು ಯುರೋಪಿನಾದ್ಯಂತ ಚೀನಾದ ಪ್ರಭಾವವನ್ನು ಹೆಚ್ಚಿಸಿದೆ. ಆದಾಗ್ಯೂ, ಐಎಂಇಇಸಿಯು ಸದ್ಯ ಆರಂಭಿಕ ಹಂತದಲ್ಲಿದೆ. ಯೋಜನೆಗೆ ಹಣಕಾಸಿನ ಕ್ರೋಢೀಕರಣ, ನಿಬಂಧನೆಗಳು ಮತ್ತು ಭೌಗೋಳಿಕ ರಾಜಕೀಯ ಅಡೆತಡೆಗಳನ್ನು ಹೇಗೆ ನಿಭಾಯಿಸಲಿದೆ ಎಂಬ ಬಗ್ಗೆ ಸರಿಯಾದ ಯೋಜನೆಯನ್ನು ರೂಪಿಸಬೇಕಿದೆ.

ಲೇಖನ : ಡಾ. ರಾವೆಲ್ಲಾ ಭಾನು ಕೃಷ್ಣ ಕಿರಣ್

ಇದನ್ನೂ ಓದಿ : 7 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಭಾರತದ ವ್ಯಾಪಾರ ಬೆಳವಣಿಗೆ ದರ

Last Updated : Feb 23, 2024, 4:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.