ETV Bharat / bharat

ಫೋನ್​ ಟ್ಯಾಪಿಂಗ್​ ಪ್ರಕರಣದಲ್ಲಿ ಪ್ರಮುಖ ವಿಕೆಟ್​ ಔಟ್​: ಟಾಸ್ಕ್​ಫೋರ್ಸ್​ ಮಾಜಿ ಒಎಸ್​ಡಿ ಅರೆಸ್ಟ್ - Phone Tapping Case

author img

By ETV Bharat Karnataka Team

Published : Mar 29, 2024, 2:03 PM IST

Phone Tapping Case Update: ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ಹೈದರಾಬಾದ್ ಟಾಸ್ಕ್ ಫೋರ್ಸ್‌ನ ಮಾಜಿ ಡಿಸಿಪಿ ರಾಧಾಕಿಶನ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

RADHAKISHAN RAO ARRESTED  TASK FORCE EX OSD  SIB EX DSP PRANEETH RAO CASE  TELANGANA PHONE TAPPING CASE
ಟಾಸ್ಕ್​ಫೋರ್ಸ್​ ಮಾಜಿ ಒಎಸ್​ಡಿ ಬಂಧನ

ಹೈದರಾಬಾದ್(ತೆಲಂಗಾಣ): ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ನಿವೃತ್ತರಾದ ಬಳಿಕ ಸುದೀರ್ಘ ಕಾಲ ಅಲ್ಲಿಯೇ ಒಎಸ್​ಡಿಯಾಗಿ ಕಾರ್ಯನಿರ್ವಹಿಸಿದ್ದ ಟಾಸ್ಕ್ ಫೋರ್ಸ್​​ನ ಮಾಜಿ ಡಿಸಿಪಿ ರಾಧಾಕಿಶನ್ ರಾವ್ ಅವರನ್ನು ಪೊಲೀಸರು ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯ ಬಾಗಿಲುಗಳನ್ನು ಮುಚ್ಚಿ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. ಅಮಾನತುಗೊಂಡಿರುವ ಡಿಸಿಪಿ ಪ್ರಣೀತ್ ರಾವ್ ಅವರು ಫೋನ್ ಕದ್ದಾಲಿಕೆ ಮೂಲಕ ನೀಡಿದ ಮಾಹಿತಿ ಆಧರಿಸಿ ರಾಧಾಕಿಶನ್ ರಾವ್ ತಂಡ ಕ್ಷೇತ್ರ ಮಟ್ಟದಲ್ಲಿ ಅನಧಿಕೃತ ಕಾರ್ಯಾಚರಣೆ ನಡೆಸಿದೆ ಎಂಬ ಆರೋಪಗಳಿವೆ.

ಪ್ರಣೀತ್ ರಾವ್ ಹೇಳಿಕೆ ಆಧರಿಸಿ, ಇಬ್ಬರು ಹೆಚ್ಚುವರಿ ಎಸ್ಪಿಗಳಾದ ರಾಧಾಕಿಶನ್ ರಾವ್, ನಿವೃತ್ತ ಐಜಿ ಪ್ರಭಾಕರ್ ರಾವ್ ಮತ್ತು ಮಾಧ್ಯಮ ಕಂಪನಿಯೊಂದರ ಮ್ಯಾನೇಜರ್ ಶ್ರವಣ್ ರಾವ್ ಅವರ ಮೇಲೆ ಕೆಲವು ದಿನಗಳ ಹಿಂದೆ ರೇಡ್​ ಮಾಡಲಾಗಿತ್ತು. ನಂತರ ಇಬ್ಬರು ಹೆಚ್ಚುವರಿ ಎಸ್ಪಿಗಳಾದ ಭುಜಂಗರಾವ್ ಮತ್ತು ತಿರುಪತಣ್ಣ ಅವರನ್ನು ಬಂಧಿಸಲಾಗಿದ್ದು, ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. ಮೂವರೂ ವಿದೇಶಕ್ಕೆ ತೆರಳಿದ್ದಾರೆ ಎಂದು ಭಾವಿಸಿದ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

ಗುರುವಾರ ಬೆಳಗ್ಗೆ ಅನಿರೀಕ್ಷಿತವಾಗಿ ರಾಧಾಕಿಶನ್ ರಾವ್ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಬೋಯಿನಪಲ್ಲಿಯಲ್ಲಿರುವ ತಮ್ಮ ಮನೆಯಿಂದ ಬಂದ ಅವರು ಪಶ್ಚಿಮ ವಲಯ ಡಿಸಿಪಿ ವಿಜಯ್‌ಕುಮಾರ್ ಅವರನ್ನು ಭೇಟಿ ಮಾಡಿದರು. ಈ ಹಿನ್ನೆಲೆಯಲ್ಲಿ ಫೋನ್ ಕದ್ದಾಲಿಕೆ ವಿಚಾರದಲ್ಲಿ ಪ್ರಣೀತರಾವ್ ಅವರಿಗೆ ರಾಧಾಕಿಶನ್ ರಾವ್ ನೀಡಿದ ಸೂಚನೆ ಮೇರೆಗೆ ಪೊಲೀಸರು ಕ್ಷೇತ್ರ ಮಟ್ಟದಲ್ಲಿ ಕೈಗೊಂಡಿರುವ ಕಾರ್ಯಾಚರಣೆಗಳ ಕುರಿತು ಸುದೀರ್ಘ ವಿಚಾರಣೆ ನಡೆಸಿದರು. ಯಾರ ಸೂಚನೆ ಮೇರೆಗೆ ಪ್ರಣೀತರಾವ್ ಅವರಿಗೆ ಫೋನ್ ಟ್ಯಾಪ್ ಮಾಡಲು ಸೂಚಿಸಲಾಗಿದೆ ಎಂದು ರಾಧಾಕಿಶನ್ ರಾವ್ ಅವರನ್ನು ಪ್ರಶ್ನಿಸಲಾಯಿತು.

ಫೋನ್ ಟ್ಯಾಪಿಂಗ್ ಮಾಹಿತಿಯೊಂದಿಗೆ ಕ್ಷೇತ್ರದಲ್ಲಿ ಎಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ?, ಹವಾಲಾ ವಹಿವಾಟಿನ ಕ್ರಮದಲ್ಲಿ ನಡೆದ ದಾಳಿಯಲ್ಲಿ ಏನಾಯಿತು?, ಹಲವು ಉದ್ಯಮಿಗಳಿಗೆ ಬೆದರಿಕೆ ಹಾಕಿ ಅಕ್ರಮ ಹಣ ಸಂಪಾದನೆ ಮಾಡಿರುವ ಆರೋಪದಲ್ಲಿ ಸತ್ಯಾಂಶವೇನು?, ಈ ಕೆಳಕಂಡ ವಿಷಯಗಳ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಟಾಸ್ಕ್ ಫೋರ್ಸ್ ಮತ್ತು ಎಸ್‌ಐಬಿ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡಿದ ಗಟ್ಟುಮಲ್ಲು ಅವರನ್ನು ಪೊಲೀಸರು ಬಂಜಾರ ಹಿಲ್ಸ್ ಠಾಣೆಗೆ ಕರೆಸಿಕೊಂಡರು. ಫೋನ್ ಕದ್ದಾಲಿಕೆ ಪ್ರಕರಣದ ಕುರಿತು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ರಾಧಾಕಿಶನ್ ರಾವ್ ತಂಡದ ವಿರುದ್ಧ ಹಲವು ಆರೋಪ: ಹೈದರಾಬಾದ್ ಟಾಸ್ಕ್ ಫೋರ್ಸ್​ನಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದ್ದ ರಾಧಾಕಿಶನ್ ರಾವ್ ಮತ್ತವರ ತಂಡದ ವಿರುದ್ಧ ಹಲವು ಆರೋಪಗಳಿವೆ. ಹಿಂದಿನ ಸರ್ಕಾರದ ನಾಯಕರು ವಿರೋಧಿಗಳನ್ನು ಗುರಿಯಾಗಿಸಲು ಕಾರ್ಯಪಡೆಯನ್ನು ಹಸ್ತಾಂತರಿಸಿದ್ದಾರೆ ಎಂದು ಪ್ರತಿಪಕ್ಷಗಳು ಬಹಿರಂಗವಾಗಿ ಆರೋಪಿಸಿದೆ. ಸಿಎಂ ರೇವಂತ್ ರೆಡ್ಡಿ ಕೂಡ ವಿರೋಧ ಪಕ್ಷದಲ್ಲಿದ್ದಾಗ ಹಲವು ಬಾರಿ ಆರೋಪ ಮಾಡಿದ್ದರು. ರಾಧಾಕಿಶನ್ ರಾವ್ ಅವರು ಮಲ್ಕಾಜಿಗಿರಿ ಎಸಿಪಿಯಾಗಿದ್ದಾಗ ಕಾಂಗ್ರೆಸ್ ಮುಖಂಡರೊಬ್ಬರ ಆತ್ಮಹತ್ಯೆಗೆ ಕಾರಣಕರ್ತರು ಎಂಬ ಆರೋಪ ಎದುರಿಸಿದ್ದರು. ತನಿಖೆಯ ನಂತರ ಪ್ರಕರಣದಿಂದ ಹೊರಬಿದ್ದಿದೆ.

ನಿವೃತ್ತಿಯಾದರೂ ಒಎಸ್​​ಡಿಯಾಗಿ ಕರ್ತವ್ಯ: ಹಿಂದಿನ ಸರ್ಕಾರದ ಅವಧಿಯಲ್ಲಿ ರಾಧಾಕಿಶನ್ ರಾವ್ ಕಾರ್ಯಪಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರದ ಒತ್ತಾಸೆಯಿಂದಾಗಿ ಅವರಿಗೆ ಆದ್ಯತೆ ನೀಡಲಾಯಿತು. ನಿವೃತ್ತಿಯ ನಂತರವೂ ಎರಡು ಅವಧಿಗೆ ಒಎಸ್‌ಡಿಯಾಗಿ ಮುಂದುವರಿದಿದ್ದರು. ಇದರ ಹಿಂದೆ ಅಂದಿನ ಸರ್ಕಾರದ ನಾಯಕರ ಆಶೀರ್ವಾದವಿದೆ ಎಂದು ನಂಬಲಾಗಿತ್ತು. ಆದರೆ, ವಿಧಾನಪರಿಷತ್ ಚುನಾವಣಾ ನಿಯಮಾವಳಿಯ ವೇಳೆ ರಾಧಾಕಿಶನ್ ರಾವ್ ವಿರುದ್ಧ ಅಂದಿನ ಆಯುಕ್ತ ಸಂದೀಪ್ ಸ್ಯಾಂಡಿಲ್ಯ ಅವರು ಚುನಾವಣಾ ಆಯೋಗಕ್ಕೆ ವಿಶೇಷ ವರದಿ ಕಳುಹಿಸಿದ್ದರಿಂದ ರಾಧಾಕಿಶನ್ ರಾವ್ ಅವರನ್ನು ಕಾರ್ಯಪಡೆಯಿಂದ ತೆಗೆದುಹಾಕಲಾಗಿತ್ತು. ಚುನಾವಣಾ ಫಲಿತಾಂಶದ ನಂತರ, ಸರ್ಕಾರ ಬದಲಾವಣೆಯಿಂದಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ವ್ಯಾಪರಸ್ಥರು: ರಾಧಾಕಿಶನ್ ರಾವ್ ಮತ್ತು ಗಟ್ಟುಮಲ್ಲು ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವಾಗಲೇ ಬೇಗಂಬಜಾರ್​ನ ಕೆಲ ವ್ಯಾಪಾರಿಗಳು ನಾಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಆ ಪ್ರದೇಶದಲ್ಲಿ ಹವಾಲಾ ಮತ್ತು ಗಾಂಜಾ ದಂಧೆಯಲ್ಲಿ ತೊಡಗಿರುವ ವ್ಯಾಪಾರ ಸಂಸ್ಥೆಗಳ ವಿವರಗಳನ್ನು ಕಲೆಹಾಕುತ್ತಿದ್ದಾರೆ ಪೊಲೀಸರು. ಈ ಹಿನ್ನಲೆಯಲ್ಲಿ ಅವರೊಂದಿಗೆ ಹಣಕಾಸಿನ ವ್ಯವಹಾರ ಮುಂದುವರಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಟ್ಯಾಪಿಂಗ್ ಪ್ರಕರಣದಲ್ಲಿ ಇನ್ನೂ ಮೂವರು ಟಾಸ್ಕ್ ಫೋರ್ಸ್ ಪೊಲೀಸರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಅವರ ಫೋನ್‌ಗಳನ್ನು ಕಾರ್ಯಪಡೆಯ ಕಚೇರಿಯಿಂದಲೇ ವಶಪಡಿಸಿಕೊಳ್ಳಲಾಗಿದೆ. ಕ್ಷೇತ್ರ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆಯಂತೆ.

ಕಾನ್‌ಸ್ಟೇಬಲ್ ಜೊತೆಗೆ ಪ್ರಣೀತ್ ರಾವ್ ಅವರ ಡ್ರೈವರ್ ಆಗಿ ಕೆಲಸ ಮಾಡಿದ ವ್ಯಕ್ತಿಯೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ತೋರುತ್ತದೆ. ಕಳೆದ ವರ್ಷ ಡಿಸೆಂಬರ್ 4ರಂದು ಎಸ್​ಐಬಿಯಲ್ಲಿದ್ದ ಹಾರ್ಡ್ ಡಿಸ್ಕ್ ಗಳನ್ನು ಧ್ವಂಸಗೊಳಿಸಿ ಮೂಸಿ ನದಿಗೆ ಎಸೆಯುವ ಕಾರ್ಯದಲ್ಲಿ ಈತನ ತೊಡಗಿದ್ದನು ಎಂದು ವರದಿಯಾಗಿದೆ. ಈಗಾಗಲೇ ಚಂಚಲಗೂಡ ಕೇಂದ್ರ ಕಾರಾಗೃಹದಲ್ಲಿರುವ ಹೆಚ್ಚುವರಿ ಎಸ್ಪಿಗಳಾದ ಭುಜಂಗರಾವ್ ಮತ್ತು ತಿರುಪತಣ್ಣ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ನಾಂಪಲ್ಲಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ. ಇಂದಿನಿಂದ ಏಪ್ರಿಲ್ 2ರವರೆಗೆ ಆರೋಪಿಯನ್ನು ಕಸ್ಟಡಿಗೆ ನೀಡಲಾಗಿದೆ. ಆದ್ರೆ ಪ್ರಣೀತ್ ರಾವ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಲಯ ನಿರಾಕರಿಸಿದೆ.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಪ್ರಕರಣ: ಮತ್ತಿಬ್ಬರು ತೆಲಂಗಾಣ ಪೊಲೀಸ್​ ಅಧಿಕಾರಿಗಳ ಬಂಧನ - TELANGANA PHONE TAPPING CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.