ಪಲಾಮು (ಜಾರ್ಖಂಡ್): ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಸುಮಾರು 6 ಗಂಟೆಗಳ ಕಾಲ ಶಾಲಾ ಕೊಠಡಿಯಲ್ಲೇ ಉಳಿದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಕ್ಷಕರು ಶಾಲೆಯ ಎಲ್ಲಾ ಕೊಠಡಿಗಳನ್ನು ಮುಚ್ಚಿ ಬೀಗ ಹಾಕಿ ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದ್ರೆ ಶಾಲೆಯಲ್ಲೇ ಉಳಿದಿದ್ದ ಬಾಲಕ ಅಳಲು ಆರಂಭಿಸಿದ್ದಾನೆ. ಬಾಲಕನ ದ್ವನಿ ಕೇಳಿದ ಬಳಿಕ ಗ್ರಾಮಸ್ಥರು ಕೊಠಡಿಯ ಬಾಗಿಲು ಒಡೆದು ಆತನನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರ ವೇತನ ಸ್ಥಗಿತಗೊಳಿಸಲಾಗಿದೆ. 24 ಗಂಟೆಯೊಳಗೆ ಉತ್ತರ ನೀಡುವಂತೆ ಶಿಕ್ಷಕನಿಗೆ ಕೇಳಲಾಗಿದೆ.
ಈ ಘಟನೆ ಶನಿವಾರದಂದ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶನಿವಾರದಂದು ಪಲಮುವಿನ ಮೇದಿನಿ ನಗರ ಸದರ್ ವಲಯದ ಉನ್ನತೀಕರಿಸಿದ ಮಧ್ಯಮ ಶಾಲೆಯ ಸಿಂದೂರಿಯಾದಲ್ಲಿ ಆರನೇ ತರಗತಿಯ ವಿದ್ಯಾರ್ಥಿಯು ತನ್ನ ಕೋಣೆಯಲ್ಲಿ ಮಲಗಿದ್ದನು. ದಿನನಿತ್ಯದಂತೆ ಶಾಲೆಯ ಶಿಕ್ಷಕರು ಎಲ್ಲಾ ಕೊಠಡಿಗಳಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಗ್ರಾಮಸ್ಥರು ಶಾಲೆಯ ಬಳಿ ಹೋಗುತ್ತಿದ್ದಾಗ ಬಾಲಕನ ಅಳುವ ಸದ್ದು ಕೇಳಿಸಿದೆ. ನಂತರ ಗ್ರಾಮಸ್ಥರು ಸದರ್ ಬ್ಲಾಕ್ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಷಯ ತಿಳಿಸಿ ಶಾಲೆಯ ಬಾಗಿಲು ಒಡೆದು ಬಾಲಕನನ್ನು ಹೊರತೆಗೆದಿದ್ದಾರೆ.ಸೋಮವಾರ ಜಿಲ್ಲಾ ಶಿಕ್ಷಣಾಧಿಕಾರಿ ರಣಧೀರ್ ಕುಜೂರ್ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದರು. ಕೊಠಡಿಯಲ್ಲಿ ಬಾಲಕ ಮಲಗಿದ್ದನು. ಆಗ ಶಿಕ್ಷಕರು ಗಮನಿಸದೇ ಬೀಗ ಹಾಕಿಕೊಂಡು ಹೋಗಿರಬಹುದು. ಬಾಲಕ ಅಳುವ ಸದ್ದು ಕೇಳಿ ಗ್ರಾಮಸ್ಥರು ಆತನನ್ನು ಹೊರಗೆ ಕರೆದೊಯ್ದಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಶಾಲೆಯ ಎಲ್ಲಾ ಶಿಕ್ಷಕರಿಗೆ ಶೋಕಾಸ್ ನೀಡಲಾಗಿದೆ ಮತ್ತು ಅವರ ವೇತನವನ್ನು ಸಹ ನಿಲ್ಲಿಸಲಾಗಿದೆ. 24 ಗಂಟೆಗಳ ಒಳಗೆ ಗರಿಷ್ಠ ಪ್ರತಿಕ್ರಿಯೆಯನ್ನು ಕೋರಲಾಗಿದೆ. ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಲೆಯಲ್ಲಿ ಹಲವು ನಿರ್ಲಕ್ಷ್ಯ ಕಂಡು ಬಂದಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.