ಮುಂಬೈ (ಮಹಾರಾಷ್ಟ್ರ): ವಿಶೇಷಚೇತನ ನೌಕರರು ಸಾಮಾನ್ಯ ನೌಕರರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಲು ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದೆ. ಮಹಾರಾಷ್ಟ್ರದಲ್ಲಿ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ವಿಶೇಷಚೇತನರಿಗೆ ಚುನಾವಣಾ ಕರ್ತವ್ಯವನ್ನು ಹಸ್ತಾಂತರಿಸಲಿದೆ. ವಿಶೇಷವಾಗಿ ವಿಶೇಷಚೇತನರಿಗಾಗಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ದೈಹಿಕ ನ್ಯೂನತೆಯ ಹೊರತಾಗಿಯೂ ವಿಶೇಷಚೇತನರು ಬೇರೆಯವರಿಗಿಂತ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗವು ಛತ್ರಪತಿ ಸಂಭಾಜಿನಗರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷಚೇತನರಿಗಾಗಿ ಒಂದು ಮತಗಟ್ಟೆಯನ್ನು ತೆರೆಯಲಾಗುತ್ತಿದೆ. ವಿಶೇಷಚೇತನರು ಮತಗಟ್ಟೆ ಕೇಂದ್ರದಲ್ಲಿ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ದೇವೇಂದ್ರ ಕಟ್ಕೆ ಮಾತನಾಡಿ, ವಿಶೇಷಚೇತನರು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಈ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಂಗವಿಕಲರ ಮತಗಟ್ಟೆ ಕೇಂದ್ರದಲ್ಲಿ ನಾಲ್ವರು ಅಂಗವಿಕಲ ಸಿಬ್ಬಂದಿ ಇದ್ದು, ಅವರಿಗೆ ಇನ್ನೂ ಇಬ್ಬರು ನೆರವು ನೀಡಲಿದ್ದಾರೆ ಎಂದು ನಮೂದಿಸಲಾಗಿದೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷಚೇತನರಿಗಾಗಿ ಒಂಬತ್ತು ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾಧಿಕಾರಿ ಬಹಿರಂಗಪಡಿಸಿದರು.
ಅವರಿಗೆ ಇದು ಪಾಠವಾಗಲಿದೆ: ಚುನಾವಣಾ ಕರ್ತವ್ಯದಿಂದ ರಜೆ ಪಡೆಯುವವರಿಗೆ ವಿಶೇಷಚೇತನ ಮತಗಟ್ಟೆಗಳು ಪಾಠವಾಗಲಿವೆ. ಮತದಾನಕ್ಕೆ ಹಲವು ದಿನಗಳ ಮೊದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ. ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರುತ್ತಿದ್ದಾರೆ. ಅದಕ್ಕಾಗಿಯೇ ನಾವು ವಿಶೇಷಚೇತನ ಮತಗಟ್ಟೆಗಳನ್ನು ಸ್ಥಾಪಿಸಲಿದ್ದೇವೆ. ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಬಯಸುವವರು ಈ ಮತಗಟ್ಟೆಯಿಂದ ತಕ್ಕ ಪಾಠ ಕಲಿಯಲಿದ್ದಾರೆ. ಅಲ್ಲದೆ, ಪುರುಷ ಮತ್ತು ಮಹಿಳೆ ಸಮಾನರು ಎಂಬುದನ್ನು ತೋರಿಸಲು ಮಹಿಳಾ ಸಿಬ್ಬಂದಿಯೊಂದಿಗೆ ಮತದಾನ ಕೇಂದ್ರದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಚುನಾವಣಾಧಿಕಾರಿ ದೇವೇಂದ್ರ ಕಟ್ಕೆ ತಿಳಿಸಿದರು.
ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆದಿತ್ತು. ಇನ್ನೂ ಆರು ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಪ್ರಮುಖ ಪಕ್ಷಗಳು ಈಗಾಗಲೇ ಪ್ರಚಾರ ನಡೆಸುತ್ತಿವೆ. ಬಿಜೆಪಿ ಪರವಾಗಿ ಪ್ರಧಾನಿ ಮೋದಿ ಭರ್ಜರಿ ಕ್ಯಾಂಪನ್ ನಡೆಸಿದ್ದಾರೆ. ತಮ್ಮ ಅಭ್ಯರ್ಥಿಗಳ ಪರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಓದಿ: 65 ವರ್ಷ ಮೇಲ್ಪಟ್ಟವರು ಆರೋಗ್ಯ ವಿಮೆ ಖರೀದಿಸಬಹುದೇ? IRDAIನಿಂದ ಮಹತ್ವದ ನಿರ್ಧಾರ - Health Insurance