ETV Bharat / bharat

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ: ಕಾನೂನು ಹೇಳುವುದು ಏನು? - Kejriwal Arrest What Next

author img

By ETV Bharat Karnataka Team

Published : Mar 21, 2024, 11:09 PM IST

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

Delhi Chief Minister Arvind Kejriwal was arrested
Delhi Chief Minister Arvind Kejriwal was arrested

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ದೆಹಲಿ ಸಿಎಂಗೆ 8 ಬಾರಿ ಸಮನ್ಸ್​ ನೀಡಿತ್ತು. ಈ ಸಂಬಂಧ ಕೇಜ್ರಿವಾಲ್​ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರು. ಅವರ ಬಂಧನಕ್ಕೆ ಕೆಲವೇ ಗಂಟೆಗಳ ಮೊದಲು, ಕೇಜ್ರಿವಾಲ್ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಅರವಿಂದ್ ಕೇಜ್ರಿವಾಲ್ ಎರಡು ತಿಂಗಳೊಳಗೆ ಇಡಿಯಿಂದ ಬಂಧಿಸಲ್ಪಟ್ಟ ಎರಡನೇ ಸಿಎಂ ಆಗಿದ್ದಾರೆ.

ಇದಕ್ಕೂ ಮುನ್ನ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಇಡಿ ಬಂಧಿಸಿತ್ತು. ಇಡಿ ಬಂಧನದ ಹಿನ್ನೆಲೆಯಲ್ಲಿ ಸೋರೆನ್ ಅವರ ಬದಲಿಗೆ ಅವರ ಪಕ್ಷದ ಸಹೋದ್ಯೋಗಿ ಚಂಪೈ ಸೊರೆನ್ ಜಾರ್ಖಂಡ್‌ನ ಹೊಸ ಸಿಎಂ ಆಗಿ ನೇಮಕಗೊಂಡಿದ್ದರು. ನವೆಂಬರ್‌ನಲ್ಲಿ ಇಡಿ ಕೇಜ್ರಿವಾಲ್‌ಗೆ ಸಮನ್ಸ್ ಜಾರಿಗೊಳಿಸಿದಾಗಿನಿಂದ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಅವರು ರಾಜೀನಾಮೆ ನೀಡುವುದಿಲ್ಲ. ಜೈಲಿನಿಂದಲೇ ಸರ್ಕಾರವನ್ನು ನಡೆಸುತ್ತಾರೆ ಎಂದು ಹೇಳಿಕೆ ನೀಡುತ್ತಾ ಬಂದಿದ್ದಾರೆ. ಆದರೆ, ಬಂಧಿತ ಮುಖ್ಯಮಂತ್ರಿ ಕಂಬಿಗಳ ಹಿಂದೆ ಅಧಿಕಾರ ನಡೆಸಬಹುದೇ? ಎಂಬುದು ಈಗಿರುವ ಪ್ರಶ್ನೆ ಆಗಿದೆ.

ಕೇಜ್ರಿವಾಲ್ ಬಂಧನದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ದೆಹಲಿ ಸರ್ಕಾರದ ಸಚಿವ ಅತಿಶಿ ಅವರು ಈಗಾಗಲೇ ಮಾಧ್ಯಮಗಳ ಎದುರು ಹೇಳಿದ್ದಾರೆ. ಆದರೆ ಕಾನೂನು ಏನು ಹೇಳುತ್ತದೆ ಎಂಬುದು ಈಗ ಮುಖ್ಯವಾಗಿದೆ.

ಬಂಧನದಿಂದ ರಕ್ಷಣೆ? : ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗವರ್ನರ್‌ಗಳು ಕಾನೂನಿನ ಪ್ರಕಾರ, ಅವರ/ಅವಳ ಅವಧಿ ಮುಗಿಯುವವರೆಗೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಂದ ಮುಕ್ತರಾಗಿರುವವರು ಮಾತ್ರ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುತ್ತಾರೆ. ಸಂವಿಧಾನದ 361 ನೇ ವಿಧಿಯು ಭಾರತದ ಅಧ್ಯಕ್ಷರು ಮತ್ತು ರಾಜ್ಯಗಳ ರಾಜ್ಯಪಾಲರು "ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ಯಾವುದೇ ಕಾರ್ಯಕ್ಕಾಗಿ" ಯಾವುದೇ ನ್ಯಾಯಾಲಯಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ಹೇಳುತ್ತದೆ. ಆದರೆ, ಕಾನೂನಿನ ಮುಂದೆ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ ಹಾಗೂ ಸಂವಿಧಾನದ ಮುಂದೆ ಸಮಾನವಾಗಿ ಪರಿಗಣಿಸಲ್ಪಟ್ಟ ಪ್ರಧಾನ ಮಂತ್ರಿಗಳು ಅಥವಾ ಮುಖ್ಯಮಂತ್ರಿಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ.

ಕೇಜ್ರಿವಾಲ್ ಜೈಲಿನಿಂದ ಅಧಿಕಾರ ನಡೆಸಬಹುದೇ? : ಜೈಲಿನಿಂದ ಕಚೇರಿಯನ್ನು ನಡೆಸುವುದು ಪ್ರಾಯೋಗಿಕವಾಗಿ ಅಪ್ರಾಯೋಗಿಕವಾಗಿದೆ. ಆದರೆ ಮುಖ್ಯಮಂತ್ರಿಯನ್ನು ಹಾಗೆ ಮಾಡುವುದರಿಂದ ತಡೆಯುವ ಯಾವುದೇ ಕಾನೂನು ಇಲ್ಲ. ಕಾನೂನಿನ ಪ್ರಕಾರ, ಯಾವುದೇ ಪ್ರಕರಣದಲ್ಲಿ ಶಿಕ್ಷೆಗೊಳಗಾದಾಗ ಮಾತ್ರ ಮುಖ್ಯಮಂತ್ರಿಯನ್ನು ಅನರ್ಹಗೊಳಿಸಬಹುದು ಅಥವಾ ಅಧಿಕಾರದಿಂದ ತೆಗೆದುಹಾಕಬಹುದು. ಅರವಿಂದ್ ಕೇಜ್ರಿವಾಲ್ ಪ್ರಕರಣದಲ್ಲಿ ಇನ್ನೂ ಶಿಕ್ಷೆಯಾಗಿಲ್ಲ. ಹಾಗಾಗಿ ಅವರನ್ನು ರಾಜೀನಾಮೆ ಪಡೆಯಲು ಸಾಧ್ಯವಿಲ್ಲ.

ಜನರ ಪ್ರಾತಿನಿಧ್ಯ ಕಾಯಿದೆ, 1951 ರ ಪ್ರಕಾರ ಕೆಲವು ಅಪರಾಧಗಳಿಗೆ ಅನರ್ಹಗೊಳಿಸುವ ನಿಬಂಧನೆಗಳನ್ನು ಹೊಂದಿದೆ. ಆದರೆ ಶಿಕ್ಷೆ ಆದರೆ ಮಾತ್ರ ಆ ಕಾನೂನು ಪ್ರಯೋಗಿಸಬಹುದು. ಮುಖ್ಯಮಂತ್ರಿಯು ಕೇವಲ ಎರಡು ಷರತ್ತುಗಳ ಅಡಿಯಲ್ಲಿ ಉನ್ನತ ಹುದ್ದೆಯನ್ನು ಕಳೆದುಕೊಳ್ಳಬಹುದು - ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡರೆ ಹಾಗೂ ಮುಖ್ಯಮಂತ್ರಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ. ಆದರೆ ವಿಧಾನಸಭೆಯಲ್ಲಿ ಕೇಜ್ರಿವಾಲ್​ಗೆ ಭಾರಿ ಬಹುಮತ ಇದೆ.

ಆದರೂ, ಕೇಜ್ರಿವಾಲ್‌ಗೆ ಜೈಲಿನಲ್ಲಿದ್ದುಕೊಂಡು ಸರ್ಕಾರವನ್ನು ನಡೆಸುವುದು ಸುಲಭವಲ್ಲ. ಈಗಾಗಲೇ ಅವರ ಇಬ್ಬರು ಮಾಜಿ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.