ETV Bharat / bharat

ಹೋಳಿಯ ಮೊದಲ ಬಣ್ಣ ಭಾರತದ ರಕ್ಷಕರ ಹೆಸರಿನಲ್ಲಿರಬೇಕು: ಸಿಯಾಚಿನ್​​ನಲ್ಲಿ ರಾಜನಾಥ್ ಸಿಂಗ್ ಬಣ್ಣನೆ - Rajnath Singh

author img

By ANI

Published : Apr 22, 2024, 2:05 PM IST

DEFENCE MINISTER RAJNATH SINGH  ARMED FORCES PERSONNEL  SIACHEN GLACIER
ಹೋಳಿಯ ಮೊದಲ ಬಣ್ಣ ಭಾರತದ ರಕ್ಷಕರ ಹೆಸರಿನಲ್ಲಿರಬೇಕು: ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್‌ನ ಲೇಹ್‌ಗೆ ಭೇಟಿ ನೀಡಿದ್ದಾರೆ. ಬಳಿಕ ರಕ್ಷಣಾ ಸಚಿವರು ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಭೇಟಿ ಮಾಡಿ ಸಂವಾದವನ್ನೂ ಕೂಡಾ ನಡೆಸಿದ್ದಾರೆ.

ಲಡಾಖ್‌ (ಜಮ್ಮು-ಕಾಶ್ಮೀರ್​): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸಿಯಾಚಿನ್‌ಗೆ ಭೇಟಿ ನೀಡಿದ್ದು, ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ನಿಯೋಜನೆಗೊಂಡಿರುವ ಸೈನಿಕರ ಜೊತೆ ಸಂವಾದ ನಡೆಸಿದರು. ಇದಕ್ಕೂ ಮುನ್ನ ಸಿಯಾಚಿನ್ ಬೇಸ್ ಕ್ಯಾಂಪ್‌ನಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ: ಇಂದು ಬೆಳಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಮಾನದ ಮೂಲಕ ಸಿಯಾಚಿನ್​ಗೆ ತೆರಳಿದ್ದರು. ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ‘ಅಲ್ಲಿ ನಿಯೋಜಿಸಲಾದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಳ್ಳುವ ಮೂಲಕ ಮಾಹಿತಿ ನೀಡಿದ್ದರು.

ಲಡಾಕ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ: ಲಡಾಖ್‌ನ ಸಿಯಾಚಿನ್ ಬೇಸ್ ಕ್ಯಾಂಪ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾನು ಹೋಳಿ ಸಂದರ್ಭದಲ್ಲಿ ಬರಲು ಸಾಧ್ಯವಾಗಲಿಲ್ಲ. ಆದರೆ ಈಗ ನಾನು ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಸಿಯಾಚಿನ್ ಭೂಮಿ ಸಾಮಾನ್ಯ ಭೂಮಿ ಅಲ್ಲ. ಇದು ಭಾರತೀಯ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ನಿರ್ಣಯದ ಸ್ಪಷ್ಟವಾದ ಸಂಕೇತವಾಗಿದೆ. ಇದು ಭಾರತೀಯ ಶೌರ್ಯದ ದೇಗುಲವಾಗಿದೆ ಎಂದು ಹೇಳಿದರು. ರಕ್ಷಣಾ ಸಚಿವರು ಈ ವರ್ಷ ಹೋಳಿಯಲ್ಲಿ ಲಡಾಖ್‌ಗೆ ಭೇಟಿ ನೀಡಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ನಾನು ನಿಮ್ಮ ಸಂಬಂಧಿಯಾಗಿ ಬಂದಿದ್ದೇನೆ: ಹಬ್ಬ ಹರಿದಿನಗಳನ್ನು ಆಚರಿಸುವ ಸಂತಸ ಆತ್ಮೀಯರೊಂದಿಗೆ ಬರುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ನಾನು ಬಯಸಿದ್ದರೂ ನಿಮ್ಮ ಹತ್ತಿರ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಲೇಹ್‌ನಲ್ಲಿಯೇ ಸೈನಿಕರೊಂದಿಗೆ ಹೋಳಿ ಆಚರಿಸಿದ್ದೇನೆ. ನಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಸಂಬಂಧಿಯಾಗಿ ಇಲ್ಲಿಗೆ ಬಂದಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೈನಿಕರಿಗೆ ತಿಳಿಸಿದರು.

ಹೋಳಿಯ ಮೊದಲ ಬಣ್ಣಕ್ಕೆ ಭಾರತದ ರಕ್ಷಕರ ಹೆಸರಿಡಬೇಕು: ನನ್ನ ಪ್ರಕಾರ ದೀಪಾವಳಿಯ ಮೊದಲ ದೀಪ, ಹೋಳಿಯ ಮೊದಲ ಬಣ್ಣ ಭಾರತದ ರಕ್ಷಕರ ಹೆಸರಿನಲ್ಲಿರಬೇಕು. ನಮ್ಮ ಸೈನಿಕರ ಜೊತೆ ಇರಬೇಕು. ಹಬ್ಬಗಳನ್ನು ಮೊದಲು ಸಿಯಾಚಿನ್ ಶಿಖರಗಳಲ್ಲಿ ಆಚರಿಸಬೇಕು. ಇದನ್ನು ರಾಜಸ್ಥಾನದ ಸುಡುವ ಮರುಭೂಮಿಯಲ್ಲಿ ಆಚರಿಸಬೇಕು, ಹಿಂದೂ ಮಹಾಸಾಗರದ ಆಳದಲ್ಲಿರುವ ಜಲಾಂತರ್ಗಾಮಿ ನೌಕೆಯಲ್ಲಿ ಸೈನಿಕರೊಂದಿಗೆ ಆಚರಿಸಬೇಕು ಎಂದು ಹೇಳಿದರು.

ಓದಿ: ಮದುವೆಗೆ ತೆರಳಿದ್ದ ಸಚಿವರ ಮೇಲೆ ಹಲ್ಲೆ: ಮೂಗಿಗೆ ಬ್ಯಾಂಡೇಜ್ ಹಾಕಿಕೊಂಡೇ ಧರಣಿ - Attack on Sanjay Nishad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.