ETV Bharat / bharat

''ಕಾಂಗ್ರೆಸ್ ಭಾರತವನ್ನು ನಾಶಮಾಡಲು ನಿರ್ಧರಿಸಿದೆ'': ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಅಮಿತ್ ಮಾಳವಿಯಾ ತಿರುಗೇಟು - Amit Malviya

author img

By ANI

Published : Apr 24, 2024, 11:52 AM IST

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸಂಪತ್ತಿನ ಮರು ಹಂಚಿಕೆ ಕುರಿತು ಪಕ್ಷದ ನಿಲುವನ್ನು ಬೆಂಬಲಿಸಿದ ಹಿನ್ನೆಲೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Congress  BJP  Lok Sabha election 2024  Sam Pitroda
''ಕಾಂಗ್ರೆಸ್ ಭಾರತವನ್ನು ನಾಶಮಾಡಲು ನಿರ್ಧರಿಸಿದೆ'': ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಅಮಿತ್ ಮಾಳವಿಯಾ ತಿರುಗೇಟು

ನವದೆಹಲಿ: "ಕಾಂಗ್ರೆಸ್ ಭಾರತವನ್ನು ನಾಶಮಾಡಲು ನಿರ್ಧರಿಸಿದೆ'' ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಬುಧವಾರ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸಂಪತ್ತಿನ ಮರುಹಂಚಿಕೆ ಕುರಿತು ಪಕ್ಷದ ನಿಲುವು ಬೆಂಬಲಿಸಿದ ಹಿನ್ನೆಲೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ತೀವ್ರ ವಾಗ್ದಾಳಿ ನಡೆಸಿದರು.

ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಅಮಿತ್ ಮಾಳವಿಯಾ ಅವರು, "ಕಾಂಗ್ರೆಸ್ ಭಾರತವನ್ನು ನಾಶಮಾಡಲು ನಿರ್ಧರಿಸಿದೆ. ಇದೀಗ ಸ್ಯಾಮ್ ಪಿತ್ರೋಡಾ ಅವರು ಸಂಪತ್ತಿನ ಮರುಹಂಚಿಕೆಗಾಗಿ 50 ಪ್ರತಿಶತ ಪಿತ್ರಾರ್ಜಿತ ತೆರಿಗೆಯನ್ನು ಪ್ರತಿಪಾದಿಸುತ್ತಾರೆ. ಇದರರ್ಥ ನಮ್ಮ ಎಲ್ಲಾ ಶ್ರಮ ಮತ್ತು ಉದ್ಯಮದೊಂದಿಗೆ ನಾವು ನಿರ್ಮಿಸುವ 50 ಪ್ರತಿಶತವನ್ನು ತೆಗೆದುಕೊಳ್ಳಲಾಗುತ್ತದೆ. ಶೇ 50 ರಷ್ಟು ನಾವು ಪಾವತಿಸುವ ಎಲ್ಲ ತೆರಿಗೆ ಜೊತೆಗೆ, ಪಿತ್ರಾರ್ಜಿತ ತೆರಿಗೆ ಕೂಡ ಹೆಚ್ಚಾಗುತ್ತದೆ" ಎಂದು ಕಿಡಿಕಾರಿದ್ದಾರೆ.

ಸ್ಯಾಮ್ ಪಿತ್ರೋಡಾ ಹೇಳಿಕೆ: ಇತ್ತೀಚೆಗೆ, ಸಂಪತ್ತಿನ ಮರು ಹಂಚಿಕೆಗೆ ನೀತಿಯ ಅಗತ್ಯವನ್ನು ಒತ್ತಿಹೇಳಿದ್ದ ಪಿತ್ರೋಡಾ ಅವರು, ಅಮೆರಿಕದಲ್ಲಿ ಚಾಲ್ತಿಯಲ್ಲಿರುವ ಪಿತ್ರಾರ್ಜಿತ ತೆರಿಗೆಯ ಪರಿಕಲ್ಪನೆ ಬಗ್ಗೆ ವಿವರಿಸಿದ್ದರು. ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ಮಿಲಿಯನ್ USD ಮೌಲ್ಯದ ಸಂಪತ್ತನ್ನು ಹೊಂದಿದ್ದರೆ. ಮತ್ತು ಅವನು ಸತ್ತಾಗ ಅವನು ತನ್ನ ಮಕ್ಕಳಿಗೆ ಬಹುಶಃ 45 ಪ್ರತಿಶತವನ್ನು ಮಾತ್ರ ವರ್ಗಾಯಿಸಬಹುದು. 55 ಪ್ರತಿಶತವನ್ನು ಸರ್ಕಾರವು ಪಡೆದುಕೊಳ್ಳುತ್ತದೆ. ಅದು ಆಸಕ್ತಿದಾಯಕ ಕಾನೂನು. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ ಮತ್ತು ನಿಮ್ಮ ಮರಣದ ನಂತರ ಸಂಪತ್ತನ್ನು ಸಾರ್ವಜನಿಕರಿಗಾಗಿ ಬಿಡಬೇಕಾಗುತ್ತದೆ. ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನನಗೆ ನ್ಯಾಯೋಚಿತವಾಗಿದೆ" ಎಂದು ಪಿತ್ರೋಡಾ ತಿಳಿಸಿದ್ದರು.

"ಭಾರತದಲ್ಲಿ ನೀವು ಅದನ್ನು ಹೊಂದಿಲ್ಲ. ಯಾರಾದರೂ 10 ಶತಕೋಟಿ ಮೌಲ್ಯದ ಆಸ್ತಿ ಹೊಂದಿರುವವರು ಮೃತಪಟ್ಟರೆ, ಅವರ ಮಕ್ಕಳು 10 ಶತಕೋಟಿ ಪಡೆಯುತ್ತಾರೆ. ಮತ್ತು ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಆದ್ದರಿಂದ ಈ ವಿಷಯಗಳು ಬಗ್ಗೆ ಜನರು ಚರ್ಚಿಸಬೇಕಾಗುತ್ತದೆ. ನಾವು ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವಾಗ, ನಾವು ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ. ಅದು ಜನರ ಹಿತಾಸಕ್ತಿಯಾಗಿದೆಯೇ ಹೊರತು ಕೇವಲ ಅತಿ ಶ್ರೀಮಂತರ ಹಿತಾಸಕ್ತಿಗಾಗಿಯಲ್ಲ. ಸಂಪತ್ತು ಹಂಚಿಕೆ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಮಸ್ಯೆಯಿದೆ' ಎಂದು ತಿಳಿಸಿದರು.

''ಕಾಂಗ್ರೆಸ್ ಪಕ್ಷವು ಸಂಪತ್ತಿನ ಹಂಚಿಕೆಯನ್ನು ಉತ್ತಮಗೊಳಿಸುವ ನೀತಿಯನ್ನು ರೂಪಿಸುತ್ತದೆ. ನಮಗೆ ಕನಿಷ್ಠ ವೇತನ (ಭಾರತದಲ್ಲಿ) ಇಲ್ಲ. ನೀವು ಬಡವರಿಗೆ ಇಷ್ಟು ಹಣ ನೀಡಬೇಕು ಎಂದು ನಾವು ದೇಶದಲ್ಲಿ ಕನಿಷ್ಠ ವೇತನವನ್ನು ತಂದರೆ ಅದು ಸಂಪತ್ತಿನ ಹಂಚಿಕೆ. ಇಂದು, ಶ್ರೀಮಂತರು ತಮ್ಮ ಸಂಪತ್ತನ್ನು ಸೇವಕರು ಮತ್ತು ಮನೆಯ ಸಹಾಯಕರಿಗೆ ಸಾಕಷ್ಟು ಹಣವನ್ನು ನೀಡುವುದಿಲ್ಲ. ಆದರೆ, ದುಬೈ ಮತ್ತು ಲಂಡನ್‌ನಲ್ಲಿ ವಿಹಾರಕ್ಕೆ ಆ ಹಣವನ್ನು ಖರ್ಚು ಮಾಡುತ್ತಾರೆ. ಸಂಪತ್ತಿನ ಹಂಚಿಕೆ ಬಗ್ಗೆ ಮಾತನಾಡುವುದಾದರೆ, ನನ್ನ ಬಳಿ ಇಷ್ಟು ಹಣವಿದೆ. ಮತ್ತು ನಾನು ಅದನ್ನು ಎಲ್ಲರಿಗೂ ಹಂಚುತ್ತೇನೆ‘‘ ಎಂದು ಪಿತ್ರೋಡಾ ಹೇಳಿದ್ದರು.

ಶೆಹಜಾದ್ ಪೂನಾವಾಲಾ ಟೀಕೆ: ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ''ಪಕ್ಷವು ಜನರು ಕಷ್ಟಪಟ್ಟು ಸಂಪಾದಿಸಿದ ಸಂಪನ್ಮೂಲಗಳನ್ನು ದೋಚಲು ಬಯಸಿದೆ. ಕಾಂಗ್ರೆಸ್, ಗಾಂಧಿ ವಾದ್ರಾ ಕುಟುಂಬದ ಹತ್ತಿರದ ಸಹಾಯಕ ಸ್ಯಾಮ್ ಪಿತ್ರೋಡಾ ಮೂಲಕ, ಮೂಲಭೂತವಾಗಿ ನೀವು ಗಳಿಸಿದ ಶೇ 55ರಷ್ಟು ನಿಮ್ಮ ಮರಣದ ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಿದೆ. ನೀವು ರೈತರಾಗಿದ್ದರೆ - ನಿಮ್ಮ ಜಮೀನಿನ ಶೇ55ರಷ್ಟು, ನೀವು ಉದ್ಯಮಿಯಾಗಿದ್ದರೆ - ನಿಮ್ಮ ವ್ಯಾಪಾರದ ಶೇ 55ರಷ್ಟನ್ನು ಹಾಗೂ ನಿಮ್ಮ ಮಕ್ಕಳಿಗಾಗಿ ನೀವು ಇಟ್ಟುಕೊಂಡಿರುವ ನಿಮ್ಮ ಉಳಿತಾಯದ ಶೇ 55ರಷ್ಟನ್ನು ತೆಗೆದುಕೊಳ್ಳುತ್ತದೆ. ವಿಪರ್ಯಾಸವೆಂದರೆ ಗಾಂಧಿಯವರು ತಮ್ಮ ಸ್ವಂತ ಮಕ್ಕಳು ಮತ್ತು ಮಗನಿಗಾಗಿ ದೊಡ್ಡ ಖಜಾನೆಯನ್ನು ನಿರ್ಮಿಸಿದರು. ಆದರೆ, ಅವರು ನಿಮ್ಮ ಕಷ್ಟಪಟ್ಟು ಗಳಿಸಿದ ತೆರಿಗೆ ಪಾವತಿಸಿದ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ" ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಭಾರತದ ಆಂತರಿಕ ವಿಷಯಗಳಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳ ಹಸ್ತಕ್ಷೇಪಕ್ಕೆ ಜೈಶಂಕರ್ ಕಿಡಿ - S Jaishankar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.