ETV Bharat / bharat

ಚಾರ್​ಧಾಮ್​ ಯಾತ್ರೆ: 13 ದಿನದಲ್ಲಿ 42 ಯಾತ್ರಾರ್ಥಿಗಳ ಸಾವು - Chardham Yatra 2024 Pilgrimage

author img

By ETV Bharat Karnataka Team

Published : May 23, 2024, 3:22 PM IST

ಮೇ 10ರಿಂದ ಗಂಗೋತ್ರಿ - ಯಮುನೋತ್ರಿ ಮತ್ತು ಕೇದಾರನಾಥ ಧಾಮ, ಭಕ್ತರಿಗೆ ಬಾಗಿಲು ತೆರೆದರೆ, ಮೇ 12ರಿಂದ ಬದರಿನಾಥದಲ್ಲಿ ಯಾತ್ರಾರ್ಥಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Chardham Yatra 2024 Pilgrimage Turns Fatal 42 Devotees Die In 13 Days
Chardham Yatra 2024 Pilgrimage Turns Fatal 42 Devotees Die In 13 Days (Etv bharat)

ಡೆಹರಾಡೂನ್( ಉತ್ತರಾಖಂಡ): ಕೋವಿಡ್​ ಬಳಿಕ ಚಾರ್ಧಾಮ್​ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ವರ್ಷದ ಕೂಡ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಧಾಮ್​ ಯಾತ್ರೆ ನಡೆಸಿದ್ದಾರೆ. ಕಳೆದ 13 ದಿನಗಳ ಹಿಂದೆ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥದ ಪವಿತ್ರ ಸ್ಥಳಗಳಿಗೆ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ಈ ವೇಳೆ 42 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮೇ 10ರಿಂದ ಗಂಗೋತ್ರಿ - ಯಮುನೋತ್ರಿ ಮತ್ತು ಕೇದಾರನಾಥ ಧಾಮ ಭಕ್ತರಿಗೆ ಬಾಗಿಲು ತೆರೆದರೆ, ಮೇ 12ರಿಂದ ಬದರಿನಾಥದಲ್ಲಿ ಯಾತ್ರಾರ್ಥಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ 13 ದಿನದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ದರ್ಶನ ನಡೆಸಿದ್ದು, ಇದರಲ್ಲಿ 42 ಮಂದಿ ಅಕಾಲಿಕ ಸಾವನ್ನಪ್ಪಿದ್ದಾರೆ ಎಂದು ಬುಧವಾರದ ಅಂಕಿ - ಅಂಶದ ವರದಿಯಲ್ಲಿ ಪತ್ತೆಯಾಗಿದೆ.

ಕೇದರನಾಥದಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣ ದಾಖಲಾಗಿದೆ. ಇಲ್ಲಿ 19 ಯಾತ್ರಾರ್ಥಿಗಳು ಸಾವನ್ನಪ್ಪಿದರೆ, ಯಮುನೋತ್ರಿ ಧಾಮದಲ್ಲಿ 12 ಮಂದಿ ಮರಣ ಹೊಂದಿದ್ದಾರೆ. ಇನ್ನು ಬದ್ರಿನಾಥ್​ ಮತ್ತು ಗಂಗೋತ್ರಿಯಲ್ಲಿ ತಲಾ 9 ಮತ್ತು 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸಾವನ್ನಪ್ಪಿದ ಯಾತ್ರಾರ್ಥಿಗಳು 55 ವರ್ಷ ಮೇಲ್ಪಟ್ಟ ವಯಸ್ಸಿನರಾಗಿದ್ದು, ಹೃದಯಾಘಾತ ಮತ್ತಿತ್ತರ ಕಾರಣಗಳಿಂದ ಇಹಲೋಹ ತ್ಯಜಿಸಿದ್ದಾರೆ.

ಯಾತ್ರಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚಳ ಕುರಿತು ಆತಂಕ ವ್ಯಕ್ತಪಡಿಸಿರುವ ಉತ್ತರಾಖಂಡ ಸರ್ಕಾರ, 55 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಚಾರ್​ಧಾಮ್​ ಯಾತ್ರೆಗೆ ಮುನ್ನ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದೆ. ಯಾತ್ರಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಉತ್ತಮ ಆರೋಗ್ಯದ ಹೊರತಾಗಿ ಯಾತ್ರೆ ನಡೆಸದಿರುವುದು ಸೂಕ್ತ. ವೈದ್ಯರ ಸಲಹೆ ಹೊರತಾಗಿ ಯಾತ್ರೆ ನಡೆಸಬೇಡಿ ಎಂದಿದ್ದಾರೆ. ಇದೇ ವೇಳೆ, ಕೆಲವು ಯಾತ್ರಾರ್ಥಿಗಳು ಸ್ವಯಂ ಅಪಾಯದ ಅರ್ಜಿ ಭರ್ತಿ ಮಾಡಿ, ವೈದ್ಯಕೀಯ ಸಲಹೆ ನಿರ್ಲಕ್ಷ್ಯಿಸಿ ಯಾತ್ರೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಇಲ್ಲಿನ ಕಡಿದಾದ ಮಾರ್ಗ ಮತ್ತು ಪ್ರತಿಕೂಲ ಹವಾಮಾನವೂ ಯಾತ್ರಾರ್ಥಿಗಳಿಗೆ ದೊಡ್ಡ ಸವಾಲನ್ನು ಒಡ್ಡುತ್ತದೆ. ವಿಶೇಷವಾಗಿ ಯಮುನೋತ್ರಿ ಧಾಮ ತಲುಪಲು 5 ಕಿ.ಮೀ ನಡಿಗೆ ಮತ್ತು ಕೇದಾರನಾಥ ಧಾಮಕ್ಕೆ 16 ಕಿ.ಮೀನ ಪ್ರಯಾಸದಾಯಕ ಪ್ರಯಾಣ ನಡೆಸಬೇಕಾಗುತ್ತದೆ. ಇಲ್ಲಿನ ಕಠಿಣ ಪರಿಸರವೂ ಈಗಾಗಲೇ ಅನಾರೋಗ್ಯ ಹೊಂದಿರುವ ಯಾತ್ರಾರ್ಥಿಗಳಿಗೆ ದೊಡ್ಡ ಸವಾಲನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: ಚಾರ್​ಧಾಮ್ ಯಾತ್ರೆ ಆರಂಭ: ಕೇದಾರನಾಥ ದೇವಾಲಯದ ಬಾಗಿಲು ಓಪನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.