ETV Bharat / bharat

ಇದು ಭ್ರಷ್ಟರ ಮೈತ್ರಿ: ಕಾಂಗ್ರೆಸ್-ಆಪ್​ ಲೋಕಸಭಾ ಚುನಾವಣಾ ದೋಸ್ತಿ ಬಗ್ಗೆ ಬಿಜೆಪಿ ಟೀಕೆ

author img

By PTI

Published : Feb 24, 2024, 10:28 PM IST

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಆಪ್​ ಪಕ್ಷಗಳ ಮೈತ್ರಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ಹೇಳಿದೆ.

Alliance of corrupt that has neither mathematics nor chemistry: BJP on Congress-AAP tie-up
ಇದು ಭ್ರಷ್ಟರ ಮೈತ್ರಿ: ಕಾಂಗ್ರೆಸ್-ಆಪ್​ ಮೈತ್ರಿ ಬಗ್ಗೆ ಬಿಜೆಪಿ ಟೀಕೆ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮಾಡಿಕೊಂಡಿರುವ ಕಾಂಗ್ರೆಸ್-ಆಪ್​ ಪಕ್ಷಗಳ ಮೈತ್ರಿಯನ್ನು ಟೀಕಿಸಿರುವ ಬಿಜೆಪಿ, ಇದೊಂದು ಭ್ರಷ್ಟರ ಮೈತ್ರಿ. ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಇಲ್ಲದ ಎರಡು ಪಕ್ಷಗಳು ಪರಸ್ಪರ ಬೆಂಬಲಿಸಲು ನಿರ್ಧರಿಸಿವೆ. ಆದರೆ, ಚುನಾವಣೆಯಲ್ಲಿ ಇದು ಕೆಲಸ ಮಾಡುವುದಿಲ್ಲ ಎಂದು ಲೇವಡಿ ಮಾಡಿದೆ.

ಕಾಂಗ್ರೆಸ್-ಆಪ್​ ಪಕ್ಷಗಳು ತಮ್ಮ ಮೈತ್ರಿ, ಸೀಟು ಹಂಚಿಕೆ ಬಗ್ಗೆ ಪ್ರಕಟಿಸಿದ ಬೆನ್ನಲ್ಲೇ, ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮತ್ತು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್-ಆಪ್​ ಮೈತ್ರಿ ಮಾಡಿಕೊಂಡಿರುವ ಗುಜರಾತ್, ಹರಿಯಾಣ, ಚಂಡೀಗಢ, ಗೋವಾ ಅಥವಾ ದೆಹಲಿಯಲ್ಲಿ ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಆಡಳಿತಾರೂಢ ಒಕ್ಕೂಟದ ವಿರುದ್ಧ ಗಣಿತ ಮತ್ತು ರಸಾಯನಶಾಸ್ತ್ರ ಎರಡೂ ಇಲ್ಲದ, ಭ್ರಷ್ಟರ ಮೈತ್ರಿ ಇದು ಎಂದು ಟೀಕಿಸಿದರು.

ದೆಹಲಿಯ ಎಲ್ಲ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಮತ್ತೆ ಗೆಲ್ಲುತ್ತದೆ ಎಂದು ಪ್ರತಿಪಾದಿಸಿದ ಸಚ್‌ದೇವ, ಮತಗಳ ವಿಭಜನೆಯನ್ನು ದೂಷಿಸಲು ಸಾಧ್ಯವಿಲ್ಲದ ಕಾರಣ ಎರಡೂ ಪಕ್ಷಗಳು ಕೈಜೋಡಿಸಿರುವುದು ಒಳ್ಳೆಯದು. ದೆಹಲಿ ವಿಧಾನಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಎಎಪಿ ತನ್ನ ಭ್ರಷ್ಟಾಚಾರವನ್ನು ಮೈತ್ರಿ ಕವಚದ ಅಡಿಯಲ್ಲಿ ಮರೆಮಾಡಲು ಶಾಸಕರಿಲ್ಲದ ಕಾಂಗ್ರೆಸ್ ಮುಂದೆ ಮಂಡಿಯೂರಿದೆ. ಅಲ್ಲದೇ, ಕಾಂಗ್ರೆಸ್ ಜೊತೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಕೇಜ್ರಿವಾಲ್ ತಮ್ಮ ಮಕ್ಕಳ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು ಎಂಬುದಾಗಿ ಅವರು ನೆನಪಿಸಿ ವಾಗ್ದಾಳಿ ನಡೆಸಿದರು.

ಸಚಿವೆ ಮೀನಾಕ್ಷಿ ಲೇಖಿ ಮಾತನಾಡಿ, 2004-14ರ ಅವಧಿಯಲ್ಲಿನ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಹುತೇಕ ಸಚಿವರನ್ನು ಭ್ರಷ್ಟರು ಎಂದು ಕೇಜ್ರಿವಾಲ್ ಟೀಕಿಸುತ್ತಿದ್ದರಲ್ಲದೆ, ದಿವಂಗತ ರಾಜೀವ್ ಗಾಂಧಿ ಅವರಿಗೆ ಘೋಷಿಸಿದ್ದ 'ಭಾರತ ರತ್ನ'ವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಈ ಎರಡು ಪಕ್ಷಗಳು ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಹೊಂದಿಲ್ಲ. ಆದರೆ, ಪರಸ್ಪರ ಬೆಂಬಲಿಸಲು ನಿರ್ಧರಿಸಿವೆ. ಇದು ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಇದೇ ವೇಳೆ, ಸಂದೇಶಖಾಲಿ ಘಟನೆಯ ಉಲ್ಲೇಖಿಸಿದ ಮೀನಾಕ್ಷಿ ಲೇಖಿ, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಲವಂತದಿಂದ ಭೂಮಿಯನ್ನು ಕಬಳಿಸಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ ಸದಸ್ಯ ಶೇಖ್ ಶಾಜಹಾನ್ ವಿರುದ್ಧ ಕ್ರಮಕೈಗೊಳ್ಳುವ ಬದಲು ರಾಜ್ಯದ ಪೊಲೀಸರು ಸಂತ್ರಸ್ತ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಲೋಕ ಸಮರ: ಕಾಂಗ್ರೆಸ್, ಎಎಪಿ ಸೀಟು ಹಂಚಿಕೆ ಒಪ್ಪಂದ ಅಂತಿಮ: ಅಧಿಕೃತ ಘೋಷಣೆ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮಾಡಿಕೊಂಡಿರುವ ಕಾಂಗ್ರೆಸ್-ಆಪ್​ ಪಕ್ಷಗಳ ಮೈತ್ರಿಯನ್ನು ಟೀಕಿಸಿರುವ ಬಿಜೆಪಿ, ಇದೊಂದು ಭ್ರಷ್ಟರ ಮೈತ್ರಿ. ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಇಲ್ಲದ ಎರಡು ಪಕ್ಷಗಳು ಪರಸ್ಪರ ಬೆಂಬಲಿಸಲು ನಿರ್ಧರಿಸಿವೆ. ಆದರೆ, ಚುನಾವಣೆಯಲ್ಲಿ ಇದು ಕೆಲಸ ಮಾಡುವುದಿಲ್ಲ ಎಂದು ಲೇವಡಿ ಮಾಡಿದೆ.

ಕಾಂಗ್ರೆಸ್-ಆಪ್​ ಪಕ್ಷಗಳು ತಮ್ಮ ಮೈತ್ರಿ, ಸೀಟು ಹಂಚಿಕೆ ಬಗ್ಗೆ ಪ್ರಕಟಿಸಿದ ಬೆನ್ನಲ್ಲೇ, ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮತ್ತು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್-ಆಪ್​ ಮೈತ್ರಿ ಮಾಡಿಕೊಂಡಿರುವ ಗುಜರಾತ್, ಹರಿಯಾಣ, ಚಂಡೀಗಢ, ಗೋವಾ ಅಥವಾ ದೆಹಲಿಯಲ್ಲಿ ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಆಡಳಿತಾರೂಢ ಒಕ್ಕೂಟದ ವಿರುದ್ಧ ಗಣಿತ ಮತ್ತು ರಸಾಯನಶಾಸ್ತ್ರ ಎರಡೂ ಇಲ್ಲದ, ಭ್ರಷ್ಟರ ಮೈತ್ರಿ ಇದು ಎಂದು ಟೀಕಿಸಿದರು.

ದೆಹಲಿಯ ಎಲ್ಲ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಮತ್ತೆ ಗೆಲ್ಲುತ್ತದೆ ಎಂದು ಪ್ರತಿಪಾದಿಸಿದ ಸಚ್‌ದೇವ, ಮತಗಳ ವಿಭಜನೆಯನ್ನು ದೂಷಿಸಲು ಸಾಧ್ಯವಿಲ್ಲದ ಕಾರಣ ಎರಡೂ ಪಕ್ಷಗಳು ಕೈಜೋಡಿಸಿರುವುದು ಒಳ್ಳೆಯದು. ದೆಹಲಿ ವಿಧಾನಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಎಎಪಿ ತನ್ನ ಭ್ರಷ್ಟಾಚಾರವನ್ನು ಮೈತ್ರಿ ಕವಚದ ಅಡಿಯಲ್ಲಿ ಮರೆಮಾಡಲು ಶಾಸಕರಿಲ್ಲದ ಕಾಂಗ್ರೆಸ್ ಮುಂದೆ ಮಂಡಿಯೂರಿದೆ. ಅಲ್ಲದೇ, ಕಾಂಗ್ರೆಸ್ ಜೊತೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಕೇಜ್ರಿವಾಲ್ ತಮ್ಮ ಮಕ್ಕಳ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು ಎಂಬುದಾಗಿ ಅವರು ನೆನಪಿಸಿ ವಾಗ್ದಾಳಿ ನಡೆಸಿದರು.

ಸಚಿವೆ ಮೀನಾಕ್ಷಿ ಲೇಖಿ ಮಾತನಾಡಿ, 2004-14ರ ಅವಧಿಯಲ್ಲಿನ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಹುತೇಕ ಸಚಿವರನ್ನು ಭ್ರಷ್ಟರು ಎಂದು ಕೇಜ್ರಿವಾಲ್ ಟೀಕಿಸುತ್ತಿದ್ದರಲ್ಲದೆ, ದಿವಂಗತ ರಾಜೀವ್ ಗಾಂಧಿ ಅವರಿಗೆ ಘೋಷಿಸಿದ್ದ 'ಭಾರತ ರತ್ನ'ವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಈ ಎರಡು ಪಕ್ಷಗಳು ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಹೊಂದಿಲ್ಲ. ಆದರೆ, ಪರಸ್ಪರ ಬೆಂಬಲಿಸಲು ನಿರ್ಧರಿಸಿವೆ. ಇದು ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಇದೇ ವೇಳೆ, ಸಂದೇಶಖಾಲಿ ಘಟನೆಯ ಉಲ್ಲೇಖಿಸಿದ ಮೀನಾಕ್ಷಿ ಲೇಖಿ, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಲವಂತದಿಂದ ಭೂಮಿಯನ್ನು ಕಬಳಿಸಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ ಸದಸ್ಯ ಶೇಖ್ ಶಾಜಹಾನ್ ವಿರುದ್ಧ ಕ್ರಮಕೈಗೊಳ್ಳುವ ಬದಲು ರಾಜ್ಯದ ಪೊಲೀಸರು ಸಂತ್ರಸ್ತ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಲೋಕ ಸಮರ: ಕಾಂಗ್ರೆಸ್, ಎಎಪಿ ಸೀಟು ಹಂಚಿಕೆ ಒಪ್ಪಂದ ಅಂತಿಮ: ಅಧಿಕೃತ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.