ನರಿಕಲ್ಲು ಮಾರಮ್ಮನ ಪವಾಡ: ಈ ಹೆದ್ದಾರಿಯ ಕಲ್ಲು ಪೂಜಿಸಿದ್ರೆ ಮಂಡಿ, ಕೀಲು ನೋವು ಮಾಯ!?
ಚಾಮರಾಜನಗರ : ನಮ್ಮ ಊರಿನ ರಸ್ತೆ ಸರಿ ಇಲ್ಲ, ಗುಂಡಿ ಬಿದ್ದಿದೆ, ಟಾರ್ ಹಾಕಿಸಿ ಎಂದು ಒಂದಿಲ್ಲೊಂದು ಕಡೆ ಗ್ರಾಮಸ್ಥರು ಪ್ರತಿಭಟನೆ ಮಾಡುವುದನ್ನು ನಾವು ಪ್ರತಿನಿತ್ಯ ನೋಡುತ್ತೇವೆ. ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಿದ್ರೆ ಸೊಂಟ, ಬೆನ್ನು ನೋವು ಬರುವುದು ಸಾಮಾನ್ಯ. ಆದರೆ, ಕೀಲು, ಮಂಡಿ ನೋವಿಗೆ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಮದ್ದು ಇದೆ ಅಂದ್ರೆ ನಿಮಗೆ ಅಚ್ಚರಿ ಆಗದೇ ಇರದು.. ಆದ್ರೆ ಇದು ಜನರ ನಂಬಿಕೆಯ ವಿಚಾರ..ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.