ಅಪಘಾತವಾದ ಸ್ಥಳಕ್ಕೆ ಬಾರದ ಆಂಬ್ಯುಲೆನ್ಸ್​​... ಗಾಯಾಳುವಿಗೆ JCBಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಸ್ಥಳೀಯರು!

By

Published : Sep 14, 2022, 7:27 AM IST

thumbnail

ಭೋಪಾಲ್​​(ಮಧ್ಯಪ್ರದೇಶ): ಅಪಘಾತ ನಡೆದ ಸ್ಥಳಕ್ಕೆ ಆಂಬ್ಯುಲೆನ್ಸ್​ ಬರಲು ತಡವಾದ ಕಾರಣಕ್ಕಾಗಿ ಗಾಯಾಳುವಿಗೆ ಜೆಸಿಬಿಯಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬರಾಹಿ ಪ್ರದೇಶದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮಹೇಶ್​ ಬರ್ಮನ್​ ಎಂಬಾತ ಗಾಯಗೊಂಡಿದ್ದನು. ಈ ವೇಳೆ ಆಂಬ್ಯುಲೆನ್ಸ್​​ಗೆ ಫೋನ್ ಮಾಡಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಬಾರದ ಕಾರಣ ತಕ್ಷಣವೇ ಗಾಯಾಳುವನ್ನ ಜೆಸಿಬಿಯ ಮುಂಭಾಗದಲ್ಲಿ ಹಾಕಿಕೊಂಡು ಕರೆದೊಯ್ಯಲಾಗಿದೆ. ಅದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಳೆದ ತಿಂಗಳ ಸಹ ಗರ್ಭಿಣಿಯೋರ್ವರನ್ನ ಜೆಸಿಬಿ ಮೂಲಕ ಆಸ್ಪತ್ರೆಗೆ ಕರೆದೊಯ್ದ ಘಟನೆ ನೀಮುಚ್​​ನಲ್ಲಿ ನಡೆದಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.