ನೆರೆ ಪರಿಹಾರ ನಕಲಿ ಖಾತೆಗಳಿಗೆ ಜಮಾ..!: ರೈತರ ಆಕ್ರೋಶ
![ETV Thumbnail thumbnail](https://etvbharatimages.akamaized.net/etvbharat/prod-images/320-214-6472982-thumbnail-3x2-bng.jpg)
ಕಳೆದ ವರ್ಷ ವರುಣನ ಅರ್ಭಟಕ್ಕೆ ಸಿಲುಕಿದ ಉತ್ತರ ಕರ್ನಾಟಕದಲ್ಲಿ ರೈತನ ಕೃಷಿ ಭೂಮಿ ಸಂರ್ಪೂಣ ಜಲಾವೃತಗೊಂಡು ಬೆಳೆ ಸಂಪೂರ್ಣ ನೀರುಪಾಲಾಗಿತ್ತು. ಈ ವೇಳೆ, ರೈತರ ಹೋರಾಟಕ್ಕೆ ಮಣಿದು ಅನ್ನದಾತನ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿತ್ತು. ಆದರೆ, ಹಾನಗಲ್ ತಾಲೂಕಿನ ರೈತರಿಗೆ ದೊರಕಬೇಕಾಗಿದ್ದ ಬೆಳೆ ಪರಿಹಾರ ಸಿಗದೆ ಹೋಗಿದೆ.