ರಮೇಶ್ ಜಾರಕಿಹೊಳಿ ಭಾವಚಿತ್ರಕ್ಕೆ ಹಾಲು ಚೆಲ್ಲಿದ ಅಭಿಮಾನಿಗಳು: ವಿಡಿಯೋ
![ETV Thumbnail thumbnail](https://etvbharatimages.akamaized.net/etvbharat/prod-images/320-214-10860208-thumbnail-3x2-wdfdfd.jpg)
ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿರುವ ರಮೇಶ್ ಜಾರಕಿಹೊಳಿ ಬೆಂಬಲಿಗರು ಅವರ ಭಾವಚಿತ್ರಕ್ಕೆ ಹಾಲು ಚೆಲ್ಲಿ ಅಭಿಮಾನ ಮೆರೆದಿದ್ದಾರೆ. ನಗರದ ಬಸವ ವೃತ್ತದಲ್ಲಿ ಈ ಘಟನೆ ನಡೆಯಿತು. ಇನ್ನೊಂದೆಡೆ, ಅವರ ಅಭಿಮಾನಿಗಳು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅನೇಕರು ಗೋಕಾಕ್ ಪಟ್ಟಣವನ್ನು ಬಂದ್ ಮಾಡಿಸಿದ್ದರು.