'ಬಿಜೆಪಿ ಹುಟ್ಟಿದ್ದೇ 370 ರದ್ದು ಪಡಿಸಲು, ನಮ್ಮ ಕನಸು ನನಸಾಗಿದೆ'
35ಎ ಕಾರಣಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರ್ವಸಿತರಾಗಿ ಬಂದ ಮೂಲಕಾಶ್ಮೀರಿಗರಿಗೆ ಪೌರತ್ವವನ್ನೇ ಕೊಡಲಿಲ್ಲ. ಕಲಂ 370ರಿಂದ ಕಾಶ್ಮೀರದ ಮುಸ್ಲಿಂರಿಗೂ ಅನುಕೂಲವಾಗಿಲ್ಲ. ಅಲ್ಲಿನ ಶೇಕಡಾ 17ರಷ್ಟು ಜನ ಮಾತ್ರ ಉನ್ನತ ಶಿಕ್ಷಣ ಪಡೆದಿದ್ದಾರೆ. ಇವರನ್ನೆಲ್ಲಾ ದಾರಿ ತಪ್ಪಿಸಿದ್ದು ಗಾಂಧಿ ಕುಟುಂಬ. ಇಷ್ಟು ದಿನ ತಾವು ಏನು ಕಳೆದುಕೊಂಡಿದ್ದೆವು ಎಂಬುದು ಕಾಶ್ಮೀರಿ ಜನರಿಗೆ ಈಗ ಅರ್ಥವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಿಳಿಸಿದ್ದಾರೆ.