ಕ್ರಿಕೆಟ್ ಪಂದ್ಯಾವಳಿ ವೇಳೆ ತಪ್ಪು ತೀರ್ಪು ಕೊಟ್ಟರೆಂದು ಅಂಪೈರ್‌ ಹತ್ಯೆಗೈದ ಯುವಕ!

By

Published : Apr 3, 2023, 10:55 AM IST

Updated : Apr 3, 2023, 11:06 AM IST

thumbnail

ಕಟಕ್ (ಒಡಿಶಾ): ಕಟಕ್‌ನ ಚೌದ್ವಾರ್‌ನಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಂಪೈರ್ ಕೊಲೆಯಾಗಿದ್ದಾರೆ. ಮಹಿಸಳಂದ ಗ್ರಾಮದ ಲಕ್ಕಿ ರಾವುತ್ (22) ಮೃತರೆಂದು ತಿಳಿದುಬಂದಿದೆ. ಘಟನೆ ಬಳಿಕ ಆರೋಪಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಏನಾಯ್ತು?: ಚೌದ್ವಾರ್‌ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಸಳಂದ ಗ್ರಾಮದಲ್ಲಿ ಭಾನುವಾರ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಎರಡು ಸ್ಥಳೀಯ ಗ್ರಾಮಗಳಾದ ಬರ್ಹಾಂಪುರ ಮತ್ತು ಶಂಕರಪುರದ ಯುವಕರ ತಂಡಗಳು ಆಡುತ್ತಿದ್ದವು. ಈ ಸಂದರ್ಭದಲ್ಲಿ ಅಂಪೈರ್ ನೀಡಿದ ನಿರ್ಧಾರ ತಪ್ಪು ಎಂದು ಅದೇ ಗ್ರಾಮದ ಸ್ಮೃತಿ ರಂಜನ್ ರೌತ್ ಎಂಬಾತ ಕೋಪಗೊಂಡು ವಾಗ್ವಾದಕ್ಕಿಳಿದಿದ್ದಾನೆ. ಬಳಿಕ ಲಕ್ಕಿ ರಾವುತ್​ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಲಕ್ಕಿಯನ್ನು ಎಸ್‌ಸಿಬಿ ಮೆಡಿಕಲ್‌ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ: ಮಗು, ಮಹಿಳೆ ಸೇರಿ ಮೂವರ ಶವ ಹಳಿಯಲ್ಲಿ ಪತ್ತೆ

Last Updated : Apr 3, 2023, 11:06 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.