ತುಮಕೂರಿನಲ್ಲಿ ಅಡ್ಡಾದಿಡ್ಡಿಯಾಗಿ ಬಸ್​ ಚಾಲನೆ ಆರೋಪ: ಖಾಸಗಿ ಬಸ್​ ಮಾಲೀಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

By ETV Bharat Karnataka Team

Published : Sep 22, 2023, 6:36 PM IST

thumbnail

ತುಮಕೂರು: ಜಿಲ್ಲೆಯಲ್ಲಿ ಖಾಸಗಿ ಬಸ್​ಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಓವರ್ ಸ್ಪೀಡ್​ನಲ್ಲಿ ಚಲಿಸುತ್ತಿರುವುದನ್ನು ಮನಗಂಡ ಕೊರಟಗೆರೆ ಪೊಲೀಸರು ಇಂದು ಅಂತಹ ಬಸ್​ಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಬಸ್​ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್​ಗಳು ಅತಿವೇಗದಲ್ಲಿ ಅಪಘಾತ ಸಂಭವಿಸುವ ರೀತಿ ಸಂಚರಿಸುತ್ತಿದ್ದಾರೆ ಎಂದು ವಾಹನ ಸವಾರರು ಮತ್ತು ಗ್ರಾಮಸ್ಥರು ದೂರಿದ್ದರು. ಹೀಗಾಗಿ ಕೊರಟಗೆರೆ ಸಬ್​ಇನ್ಸ್​ಪೆಕ್ಟರ್​ ಚೇತನ್ ಕುಮಾರ್ ಮತ್ತು ಪೊಲೀಸ್​ ಸಿಬ್ಬಂದಿ ಇಂದು ಅಂತಹ ಬಸ್​ಗಳನ್ನು ಗುರುತಿಸಿ ದಂಡ ವಿಧಿಸಿ ಪ್ರಕರಣವನ್ನೂ ದಾಖಲಿಸಿಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಮೂಲಕ ಖಾಸಗಿ ಬಸ್​ಗಳ ಓವರ್ ಲೋಡು ಮತ್ತು ಓವರ್ ಸ್ಪೀಡ್​ಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಬೆಳಗ್ಗೆಯಿಂದಲ್ಲೇ ರಸ್ತೆಗಿಳಿದ‌ ಕೊರಟಗೆರೆ ಪೊಲೀಸರು 
ತುಮಕೂರು- ಗೌರಿಬಿದನೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್​ಗಳನ್ನು ಅಡ್ಡಹಾಕಿ, ಪರಿಶೀಲನೆ ನಡೆಸಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಒತ್ತು ಸಾಗುತ್ತಿದ್ದ ಬಸ್​ಗಳ ಮಾಲೀಕರಿಗೆ ಸಬ್​ಇನ್ಸ್​ಪೆಕ್ಟರ್​ ದಂಡ ವಿಧಿಸಿದರು. ಅಲ್ಲದೇ, ಮಾಲೀಕರ ವಿರುದ್ಧ ಕೊರಟಗೆರೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಸಲಾಗಿದೆ.

ಇದನ್ನೂ ಓದಿ: ತುಮಕೂರು: ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್.. ಪೊಲೀಸರಿಂದ ಬಂಧನ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.