ಕಲ್ಯಾಣ​ ಕರ್ನಾಟಕ ವಿಮೋಚನಾ ದಿನ: ಕಲಬುರಗಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಿಎಂ

By ETV Bharat Karnataka Team

Published : Sep 17, 2023, 2:04 PM IST

thumbnail

ಕಲಬುರಗಿ : ಕಲ್ಯಾಣ​ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಡಿಆರ್​ ಮೈದಾನದಲ್ಲಿಂದು ರಾಷ್ಟ್ರಧ್ವಜಾರೋಹಣ ನಡೆಸಿದರು. ಬಳಿಕ ರಾಷ್ಟ್ರಗೀತೆ ನುಡಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು, ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿವರ್ಷ ಸೆಪ್ಟೆಂಬರ್​ 17ರಂದು ಹೈದರಾಬಾದ್​ ಕರ್ನಾಟಕ ವಿಮೋಚನಾ ದಿನವನ್ನು (ಕಲ್ಯಾಣ ಕರ್ನಾಟಕ ವಿಮೋಚನಾ ದಿನ) ಆಚರಿಸಲಾಗುತ್ತದೆ. 1948ರ ಸೆಪ್ಟೆಂಬರ್​ 17ರಂದು ಹೈದರಾಬಾದ್​ ನಿಜಾಮರಿಂದ ಈ ಪ್ರಾಂತ್ಯವನ್ನು ವಿಮೋಚನೆ ಮಾಡಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದ ನಂತರ ಹೈದರಾಬಾದ್​ ಕರ್ನಾಟಕವು ಭಾರತದ ಒಕ್ಕೂಟ ಸೇರಿತು.

ಹೈದರಾಬಾದ್​ ಕರ್ನಾಟಕ ವಿಮೋಚನಾ ಚಳುವಳಿಯು ಸ್ವಾತಂತ್ರ್ಯ ಹೋರಾಟಗಾರರ ಹೋರಾಟಕ್ಕೆ ಕಿಚ್ಚು ಹಚ್ಚಿತು. ಈ ಚಳುವಳಿಯಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸಿದ್ದರು. ಅನೇಕ ಸ್ವಾತಂತ್ರ್ಯ ಬಲಿದಾನಗಳ ಫಲದಿಂದಾಗಿ ಕಲ್ಯಾಣ ಕರ್ನಾಟಕ ನಿಜಾಮರ ಸೆರೆಯಿಂದ ಸ್ವತಂತ್ರವಾಯಿತು. ಉಕ್ಕಿನ ಮುನಷ್ಯ ಸರ್ದಾರ್​ ವಲ್ಲಭಬಾಯಿ ಪಟೇಲರು ಕಲ್ಯಾಣ ಕರ್ನಾಟಕ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸ್ಮರಣಾರ್ಥ ಪ್ರತಿವರ್ಷ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಿಸಿಕೊಂಡು ಬರಲಾಗುತ್ತಿದೆ. ಇಂದು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸ್ವಾತಂತ್ರ್ಯೋತ್ಸವ ಮನೆ ಮಾಡಿದೆ.

ಇದನ್ನೂ ಓದಿ :  ವಿಮೋಚನಾ ದಿನ: ಹೈದರಾಬಾದ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ಅಮಿತ್ ಶಾ- ವಿಡಿಯೋ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.