ಕೇರಳ ಸಿಎಂ ಭೇಟಿಯಾದ ಜಾರ್ಖಂಡ್​ ಮುಖ್ಯಮಂತ್ರಿ.. ಕಾರಣ?

By

Published : Jan 16, 2023, 10:50 PM IST

Updated : Feb 3, 2023, 8:39 PM IST

thumbnail

ತಿರುವನಂತಪುರಂ(ಕೇರಳ): ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೋರನ್​ ಇಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರನ್ನು ಭೇಟಿ ಮಾಡಿದರು.​ ಈ ವೇಳೆ ಪ್ರವಾಸೋದ್ಯಮ ಸಹಕಾರದ ಬಗ್ಗೆ ಚರ್ಚೆ ಮಾಡಿದರು. ಪ್ರವಾಸೋದ್ಯಮ ಕಾರ್ಯದರ್ಶಿ ಕೆ.ಎಸ್​ ಶ್ರೀನಿವಾಸ್​ ಅವರು ಈ ಬಗ್ಗೆ ಪ್ರಸ್ತುತಿ ಪಡಿಸಿದರು. ಪ್ರವಾಸೋದ್ಯಮ ಸಚಿವ ಪಿ. ಮೊಹಮದ್​ ರಿಯಾಜ್​, ಮುಖ್ಯ ಕಾರ್ಯದರ್ಶಿ ಡಾ.ವಿ.ಪಿ.ಜಾಯ್ ಮತ್ತಿತರರು ಉಪಸ್ಥಿತರಿದ್ದರು. ಹೇಮಂತ್​ ಸೋರನ್ ಕುಟುಂಬಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಸಿಎಂ ಹೇಮಂತ್​ ಸೋರನ್​ ಅವರಿಗೆ ಸಿಎಂ ಪಿಣರಾಯಿ ಅವರು 'ಅರನ್ಮುಲ ಕನ್ನಡಿ' ಉಡಗೊರೆಯಾಗಿ ನೀಡಿದರು.

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.