ರಾಮೋಜಿ ಫಿಲಂ ಸಿಟಿಯಲ್ಲಿ ಅಯೋಧ್ಯೆಯ ಶ್ರೀರಾಮನ ಪಾದುಕೆಗಳ ದರ್ಶನ

By ETV Bharat Karnataka Team

Published : Jan 10, 2024, 3:38 PM IST

Updated : Jan 10, 2024, 7:59 PM IST

thumbnail

ಹೈದರಾಬಾದ್: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ನಡೆಯುವ ಮಹಾಮಸ್ತಕಾಭಿಷೇಕವನ್ನು ಇದೇ ರಾಷ್ಟ್ರ ಕಾತರದಿಂದ ಎದುರು ನೋಡುತ್ತಿದೆ. ಅಯೋಧ್ಯೆಯ ಟ್ರಸ್ಟ್ ಶ್ರೀರಾಮನಿಗೆ ವಿಶೇಷ ಪಾದುಕೆಗಳನ್ನು ತಯಾರಿಸಿದೆ. ಮಂಗಳವಾರ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಪಾದುಕೆಗಳ ದರ್ಶನದ ಅವಕಾಶ ಒದಗಿ ಬಂದಿತ್ತು.

13 ಕೆಜಿ ತೂಕದ ಈ ಪಾದುಕೆಗಳು ಐದು ಲೋಹಗಳಿಂದ ಮಾಡಲ್ಪಟ್ಟಿವೆ. ಇವುಗಳನ್ನು ತಯಾರಿಸುವ ಭಾಗ್ಯ ಹೈದರಾಬಾದ್‌ನ ಬೋಯಿನಪಲ್ಲಿಯ ಲೋಹದ ಕುಶಲಕರ್ಮಿ ಪಿಟ್ಟಂಪಲ್ಲಿ ರಾಮಲಿಂಗಾಚಾರಿ ಅವರಿಗೆ ಒಲಿದಿದೆ. ಇದೇ ತಿಂಗಳ 22ರಂದು ಅಯೋಧ್ಯೆಗೆ ಈ ಪಾದುಕೆಗಳು ತಲುಪಲಿವೆ. ಇದಕ್ಕೂ ಮುನ್ನ ದೈವತ್ವದ ಈ ಸಾಂಕೇತಿಕ ಪಾದಮುದ್ರೆಗಳನ್ನು ಪ್ರದರ್ಶಿಸಲಾಗುತ್ತಿದೆ. 

ರಾಮೋಜಿ ಫಿಲಂ ಸಿಟಿಗೂ ಪಾದುಕೆಗಳನ್ನು ತರಲಾಗಿತ್ತು. ರಾಮೋಜಿ ಫಿಲಂ ಸಿಟಿ ಎಂಡಿ ವಿಜಯೇಶ್ವರಿ ಅವರು ಶ್ರೀರಾಮನ ಪಾದುಕೆಗಳನ್ನು ತಮ್ಮ ತಲೆಯ ಮೇಲೆ ಹೊತ್ತು ತಂದರು. ನಂತರ ಪೂಜೆ ಸಲ್ಲಿಸಲಾಯಿತು. ಈ ವೇಳೆ, ರಾಮೋಜಿ ಗ್ರೂಪ್‌ನ ಹಿರಿಯ ಅಧಿಕಾರಿಗಳು ಮತ್ತು ಉದ್ಯೋಗಿಗಳು ಸಾಲಾಗಿ ನಿಂತು ಶ್ರೀರಾಮನ ಪಾದುಕೆಗಳ ದರ್ಶನ ಪಡೆದರು. 

ಇದನ್ನೂ ಓದಿ: ಜ. 22 ರಂದು ರಾಮ ಲಲ್ಲಾ ಪ್ರತಿಷ್ಠಾಪನೆ: ಅಂದು ಗುಂಡು ತಗುಲಿದ್ದ ಕರಸೇವಕನಿಗೆ ಆಮಂತ್ರಣ

Last Updated : Jan 10, 2024, 7:59 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.