ಹೋಂ ಗಾರ್ಡನಿಂಗ್: ಸ್ವತಃ ಬೆಳೆದು ಅಡುಗೆ ಮಾಡುವ ಆತ್ಮಸಂತೋಷದ ದಾರಿ

author img

By

Published : Sep 13, 2022, 1:54 PM IST

ಹೋಂ ಗಾರ್ಡನಿಂಗ್

ತೋಟಗಾರಿಕೆ ಅಥವಾ ಗಾರ್ಡನಿಂಗ್ ಇದು ಋತುಮಾನ ಮತ್ತು ಕಾಲೋಚಿತ ತರಕಾರಿಗಳ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಗೋದ್ರೇಜ್ ಫುಡ್ ಟ್ರೆಂಡ್ಸ್ ವರದಿ 2022 ರ ಪ್ರಕಾರ, ಮನೆಯಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿ ಉತ್ಪಾದನೆಯಲ್ಲಿ ಶೇ 33.3 ರಷ್ಟು ಉತ್ಪಾದನೆಯು ಕಿಟಕಿ/ಅಡುಗೆಮನೆ/ಟೆರೇಸ್ ಗಾರ್ಡನ್‌ಗಳಿಂದ ಬರುತ್ತದೆ.

ನವದೆಹಲಿ: ದಶಕಗಳಿಂದ ಭಾರತೀಯ ಪಾಕಪದ್ಧತಿಯು ಋತುಮಾನದ ಕ್ಯಾಲೆಂಡರ್ ಅನ್ನು ಆಧರಿಸಿ ವಿಶಿಷ್ಟವಾದ ತರಕಾರಿ ಸೇವನೆಯ ಮಾದರಿಯನ್ನು ಅಳವಡಿಸಿಕೊಂಡಿದೆ. ಇದು ಮೇವು, ನೆಡುವಿಕೆ, ಕೊಯ್ಲು, ಅಡುಗೆ ಮತ್ತು ಖಾದ್ಯ ಸಸ್ಯಗಳನ್ನು ಸಂರಕ್ಷಿಸುವ ವಾರ್ಷಿಕ ಚಕ್ರವನ್ನು ಅನುಸರಿಸುತ್ತದೆ. ತೋಟಗಾರಿಕೆಯಲ್ಲಿ ಏರಿಕೆಯಾಗಿರುವುದು ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ಒಂದು ಉತ್ತಮ ಬೆಳವಣಿಗೆಯಾಗಿದೆ. ಚೆಫ್​​ (ಬಾಣಸಿಗರು)ಗಳು ತಮ್ಮ ಸ್ವಂತ ಫಾರ್ಮ್‌ಗಳನ್ನು ಸ್ಥಾಪಿಸುತ್ತಿದ್ದಾರೆ ಮತ್ತು ರೈತ ಗುಂಪುಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಸಾಮಾನ್ಯ ಗ್ರಾಹಕರು ತಮಗೆ ಬೇಕಾದ ತರಕಾರಿಗಳನ್ನು ತಾವೇ ಬೆಳೆಯಲು ಸಮಯ ನೀಡುತ್ತಿದ್ದಾರೆ.

ಆಯಾ ಋತುಮಾನದಲ್ಲಿ ಸಿಗುವ ತರಕಾರಿಗಳು ನಮ್ಮ ಆಹಾರವನ್ನು ಸಮೃದ್ಧಗೊಳಿಸುವ ಪ್ರಕೃತಿದತ್ತ ಮಾರ್ಗವಾಗಿವೆ ಮತ್ತು ಸಾಂಪ್ರದಾಯಿಕ ಆಹಾರವು ಆಯಾ ಋತುವಿನಲ್ಲಿ ಸ್ಥಳೀಯವಾಗಿ ಲಭ್ಯವಿರುವ ತರಕಾರಿಗಳನ್ನು ಒಳಗೊಂಡಿರುತ್ತದೆ. ಇದರ ಅನುಸಾರವಾಗಿಯೇ ಜನತೆ ತಮ್ಮ ಸ್ವಂತ ಉತ್ಪನ್ನಗಳನ್ನು ಬೆಳೆಯಲು ಆರಂಭಿಸಿದರು. ಇದೆಲ್ಲ ಹೆಚ್ಚಾಗಿ ಆಗಿದ್ದು ಕೋವಿಡ್ ಸೋಂಕಿನ ಕಾಲದಲ್ಲಿ.

ತೋಟಗಾರಿಕೆ ಅಥವಾ ಗಾರ್ಡನಿಂಗ್ ಇದು ಋತುಮಾನ ಮತ್ತು ಕಾಲೋಚಿತ ತರಕಾರಿಗಳ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಗೋದ್ರೇಜ್ ಫುಡ್ ಟ್ರೆಂಡ್ಸ್ ವರದಿ 2022 ರ ಪ್ರಕಾರ, ಮನೆಯಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿ ಉತ್ಪಾದನೆಯಲ್ಲಿ ಶೇ 33.3 ರಷ್ಟು ಉತ್ಪಾದನೆಯು ಕಿಟಕಿ/ಅಡುಗೆಮನೆ/ಟೆರೇಸ್ ಗಾರ್ಡನ್‌ಗಳಿಂದ ಬರುತ್ತದೆ. ತೋಟಗಾರಿಕೆಯ ಒಟ್ಟಾರೆ ಸಿದ್ಧಾಂತವು ಅಡಿಗೆ ತ್ಯಾಜ್ಯದ ನವೀನ ಬಳಕೆಯ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. 36.5 ರಷ್ಟು ತಜ್ಞರು, ಗ್ರಾಹಕರು ಮನೆಯಲ್ಲಿ ಶೂನ್ಯ-ತ್ಯಾಜ್ಯ ಅಡುಗೆಯತ್ತ ಗಮನಹರಿಸಿದ್ದಾರೆ. ಇದು ತಮ್ಮ ಅಡುಗೆ ಮತ್ತು ಆಹಾರ ಪದ್ಧತಿಯತ್ತ ಗಮನ ಹರಿಸುವಂತೆ ಮಾಡಿದೆ ಎಂದು ವರದಿ ಹೇಳಿದೆ.

ಚೆಫ್ ಕುನಾಲ್ ಕಪೂರ್ ಹೇಳುವ ಪ್ರಕಾರ, ಬಹುತೇಕ ನಗರವಾಸಿಗಳು ಸ್ಥಳಾವಕಾಶದ ಕೊರತೆಯನ್ನು ಹೊಂದಿದ್ದರೂ, ಕಡಿಮೆ ಪ್ರಮಾಣದಲ್ಲಿಯಾದರೂ ಸರಿ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಬಾಲ್ಕನಿಯಲ್ಲಿನ ಪಾತ್ರೆಗಳಲ್ಲಿ ತರಕಾರಿಗಳು ಮತ್ತು ಗಿಡಮೂಲಿಕೆಗಳನ್ನು ಬೆಳೆಸುತ್ತಿದ್ದಾರೆ. ಸ್ವತಃ ತಮಗೆ ಬೇಕಾದ ಆಹಾರ ಬೆಳೆಯುವ ಮತ್ತು ಅದರಿಂದ ಅಡುಗೆ ಮಾಡುವ ಸಂತೋಷವನ್ನು ತಿಳಿದಿರುವ ಜನತೆ ಅದೇ ಕಾರಣಕ್ಕಾಗಿ ಹೋಂ ಗಾರ್ಡನಿಂಗ್​​ನಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹವ್ಯಾಸಿ ತೋಟಗಾರ್ತಿ ಮತ್ತು ಎವ್ವೆರಿಡೇ ಸೂಪರ್‌ಫುಡ್ಸ್‌ನ ಲೇಖಕಿ ನಂದಿತಾ ಅಯ್ಯರ್.

ಎಲ್ಲವೂ ಕಲಿಕೆಯ ಅನುಭವವಾಗಿತ್ತು. ನಿಂಬೆ ಹಣ್ಣು ಮತ್ತು ಕೊತ್ತಂಬರಿ ಸೊಪ್ಪಿನಂತಹ ಸರಳವಾದ ವಸ್ತುಗಳು ಮೊಳಕೆಯೊಡೆಯುವವರೆಗೆ ಕಾಯುವುದು ಮತ್ತು ಪೋಷಿಸುವುದು ಅತ್ಯಂತ ತಾಳ್ಮೆಯ ಕೆಲಸವಾಗಿತ್ತು. ಆದರೆ ನಾವು ಅತ್ಯಂತ ಹಗುರವಾಗಿ ತೆಗೆದುಕೊಳ್ಳುವ ವಸ್ತುಗಳ ಮೌಲ್ಯವನ್ನು ಅರಿತುಕೊಳ್ಳಲು ಇದು ನನಗೆ ಸಹಾಯ ಮಾಡಿತು ಎಂದರು ಅಯ್ಯರ್.

ತೋಟಗಾರಿಕೆಯು ಋತುಮಾನವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ನಮ್ಮ ದೇಶಿ ತರಕಾರಿಗಳು ಸ್ಥಳೀಯವಾಗಿ ಲಭ್ಯವಿರುತ್ತವೆ ಮತ್ತು ಅಗ್ಗವಾಗಿರುತ್ತವೆ. ಏಕೆಂದರೆ ಅವು ಆ ಋತುವಿನಲ್ಲಿ ಹೇರಳವಾಗಿ ಬೆಳೆಯುತ್ತವೆ. ನಾವು ಅವುಗಳನ್ನು ಇಷ್ಟಪಟ್ಟು ಸೇವಿಸಬೇಕು. ನಮ್ಮ ಆಹಾರವು ಹೆಚ್ಚು ವೈವಿಧ್ಯಮಯವಾಗಿರಲು ಪ್ರಯತ್ನಿಸಬೇಕು ಎಂದು ಅಯ್ಯರ್ ಹೇಳಿದರು.

ಇದನ್ನೂ ಓದಿ: ಪ್ರವಾಹದಿಂದ ಬುಡಮೇಲಾದ ವ್ಯವಸಾಯ: ಮನೆ ಮಹಡಿ ಮೇಲೆ ಭತ್ತ ಬಿತ್ತನೆ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.